ಕಾಸರಗೋಡು: ಹೆಬ್ಬಾವು ಮರಿಗಳ ಜನನಕ್ಕಾಗಿ ಹೆದ್ದಾರಿ ಕಾಮಗಾರಿಯೇ ಸ್ಥಗಿತ
Team Udayavani, May 17, 2022, 6:07 PM IST
ಕಾಸರಗೋಡು: ಒಂದೂವರೆ ತಿಂಗಳ ಕಾಯುವಿಕೆಯ ಬಳಿಕ ಹೆಬ್ಬಾವಿನ ಮೊಟ್ಟೆಗಳು ಒಡೆದು 15 ಮರಿಗಳ ಜನನವಾಗಿದೆ.
ಚೌಕಿ ಸಿಪಿಸಿಆರ್ಐ ಸಮೀಪ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಅಂಗವಾಗಿ ಕಾಲುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದಂತೆ ಹೆಬ್ಬಾವಿನ ಮೊಟ್ಟೆಗಳು ಪತ್ತೆಯಾಗಿ 24 ಮೊಟ್ಟೆಗಳಿತ್ತು. ಇಲ್ಲಿಂದ ಹೆಬ್ಬಾವನ್ನು ಸ್ಥಳಾಂತರಿಸಿದಲ್ಲಿ ಮೊಟ್ಟೆಗಳು ನಾಶವಾಗಬಹುದೆಂಬ ಕಾರಣದಿಂದ ಕಾಲುವೆ ನಿರ್ಮಾಣ ಕಾಮಗಾರಿಯನ್ನು ನಿಲುಗಡೆಗೊಳಿಸಲಾಯಿತು.
ಅಂದಿನ ಡಿಎಫ್ಒ ಆಗಿದ್ದ ಧನೇಶ್ ನೇತೃತ್ವದಲ್ಲಿ ಮೊಟ್ಟೆ ಮರಿಯಾಗುವ ವರೆಗಿನ ಕಾರ್ಯವನ್ನು ನಿರ್ವಹಿಸಿದರು.
ಮೊಟ್ಟೆಗಳು ಒಡೆದು ಮರಿಗಳಾದ್ದಲ್ಲಿ ಮರಿಗಳು ರಸ್ತೆಗೆ ಹೋಗಬಹುದೆಂದು ಮೊಟ್ಟೆಗಳನ್ನು ರಟ್ಟಿನ ಪೆಟ್ಟಿಗೆಯಲ್ಲಿ ಇಡಲಾಗಿತ್ತು. ಈ ಮೊಟ್ಟೆಗಳು ಬಿರಿದು ಮರಿಗಳಾಗಿದ್ದು, ಇದೀಗ ಇವುಗಳನ್ನು ಬೋವಿಕ್ಕಾನದ ಅರಣ್ಯದಲ್ಲಿ ಬಿಡಲಾಗಿದೆ.
ಉಳಿದ ಮೊಟ್ಟೆಗಳು ಇನ್ನೆರಡು ದಿನಗಳಲ್ಲಿ ಬಿರಿಯಬಹುದೆಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ