ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ರವೀಂದ್ರನ್‌

ಕೋಟಕ್ಕೋಡ್‌ ಓಲಾಟ್‌ನ ಕೃಷಿಕನ ಸಾಧನೆ

Team Udayavani, Jun 8, 2019, 6:00 AM IST

2-BDK-01

ಹಟ್ಟಿಯಲ್ಲಿ ಗೋವುಗಳೊಂದಿಗೆ ಕೋಟಕ್ಕೋಡ್‌ ಓಲಾಟ್‌ನ ರವೀಂದ್ರನ್‌

ಬದಿಯಡ್ಕ: ಗೋವು ಮತ್ತು ಮಾನವನಿಗೆ ಅವಿನಾಭಾವ ಸಂಬಂಧವಿದೆ. ಹಿಂದಿನ ಕಾಲದಿಂದಲೇ ಬಡವರ ಪಾಲಿನ ಕಾಮದೇನುವಾದ ಗೋವುಗಳು ಜನರ ಹಸಿವನ್ನು ನೀಗಿ ನೆಮ್ಮದಿಯ ಬದುಕನ್ನು ಕರುಣಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ.

ಪಶುಸಂಗೋಪನೆ ಹಾಗೂ ಹೈನುಗಾರಿಕೆಯ ಮುಖಾಂತರ ಜೀವನದ ಹಾದಿಯಲ್ಲಿ ಸಾಧನೆ ಮಾಡಿದ ಅದೆಷ್ಟೋ ಸಾಧಕರು ನಮ್ಮ ನಡುವೆ ಇದ್ದಾರೆ. ಕ್ಷೀರ ಕ್ರಾಂತಿ ಹಾಲು ಉತ್ಪಾದನಾ ಕ್ಷೇತ್ರದಲ್ಲಿ ಸೃಷ್ಟಿಸಿದ ಕ್ರಾಂತಿ ಹಾಲುತ್ಪಾದನೆಯಲ್ಲಿ ಗಣನೀಯವಾದ ಹೆಚ್ಚಳಕ್ಕೆ ಕಾರಣವಾಯಿತು. ಹಾಲು, ಗೋಮೂತ್ರ, ಗೊಬ್ಬರ ಸೇರಿದಂತೆ ಗೋವುಗಳಿಂದ ಉಂಟಾಗುವ ಪ್ರಯೋಜನಗಳೂ ಅಪಾರ. ಆದುದರಿಂದಲೇ ಹಿಂದೆ ಎಲ್ಲಾ ಮನೆಗಳಲ್ಲೂ ಗೋಮಾತೆಯನ್ನು ಸಾಕುತ್ತಿದ್ದರು. ಪೂಜಿಸುತ್ತಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ಯಾಂತ್ರಿಕ ಬದಲಾವಣೆಗಳು ಮಾನವನನ್ನು ಗೋವುಗಳಿಂದ ದೂರಮಾಡಿದರೂ ಕೆಲವೆಡೆ ಇನ್ನೂ ಗೋವು ಮತ್ತು ಮಾನವನ ಸಂಬಂಧ ಹಸಿರಾಗಿಯೇ ಇದೆ. ಗೋಪ್ರೇಮಿಗಳು ಅವುಗಳನ್ನು ಸಾಕಿ ಸಲಹಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾರೆ ಎನ್ನುವುದಕ್ಕೆ ಕೋಟಕ್ಕೋಡ್‌ ಓಲಾಟ್‌ನ ರವೀಂದ್ರನ್‌ ಪ್ರತ್ಯಕ್ಷ ನಿದರ್ಶನ.

ಗೋವುಗಳನ್ನು ಅಪಾರವಾಗಿ ಪ್ರೀತಿಸುವ ರವೀಂದ್ರನ್‌ ತನ್ನ ಬಾಲ್ಯಕಾಲದಿಂದಲೇ ಗೋಸಾಕಣೆಯನ್ನು ಹವ್ಯಾಸವನ್ನಾಗಿಸಿದ್ದಾರೆ. ಇವರ ಬಳಿ ಉತ್ತಮ ಗುಣಮಟ್ಟದ ಹಾಲು ನೀಡುವ ಎಂಟು ಗೋವುಗಳಿವೆ.

ಹಾಲು ಮಾರಾಟದಿಂದ ಮಾತ್ರ ತಿಂಗಳಿಗೆ 50,000ಆದಾಯ ಗಳಿಸುತ್ತಿದ್ದಾರೆ. ಮಾತ್ರವಲ್ಲದೆ ಸೆಗಣಿ ಮಾರಾಟವೂ ಮಾಡುತ್ತಿದ್ದು ಒಂದು ಬುಟ್ಟಿ ಸೆಗಣಿಗೆ 90 ರೂಪಾಯಿಗಳಂತೆ ಮಾರಾಟವಾಗುತ್ತಿದ್ದು ಇದರಿಂದ ತಿಂಗಳೊಂದಕ್ಕೆ ಅಂದಾಜು 9000 ರೂಪಾಯಿ ಆದಾಯ ಬರುತ್ತಿರುವುದಾಗಿ ರವೀಂದ್ರನ್‌ ಹೇಳುತ್ತಾರೆ.

ಮನೆಯ ನಿತ್ಯದ ಅಗತ್ಯಗಳಿಗೆ ಬೇಕಾಗುವ ತರಕಾರಿಗಳನ್ನು ಬೆಳಸುತ್ತಿದ್ದಾರೆ. ಇವುಗಳಿಗೆ ಅಗತ್ಯವಿರುವ ನೈಸರ್ಗಿಕ ಗೊಬ್ಬರವೂ ಗೋಸಾಕಣೆಯಿಂದ ಲಭ್ಯವಾಗುತ್ತಿದೆ.

ರವೀಂದ್ರನ್‌ ಅವರ ಪಶುಸಾಕಣೆಗೆ ಪೂರ್ಣ ಸಹಕಾರ ಮತ್ತು ಬೆಂಬಲವಾಗಿ ಕ್ಷೀರ ಅಭಿವೃದ್ಧಿ ಇಲಾಖೆಯು ಪ್ರೊತ್ಸಾಹಿಸುತ್ತಿದೆ. ದನಸಾಕಣೆ ಮತ್ತು ದನಗಳ ಮೇವಿಗಾಗಿ ಹುಲ್ಲು ಬೆಳೆಯಲು ಅಗತ್ಯವಾದ ಧನ ಸಹಾಯವನ್ನು ನೀಡುತ್ತಿದೆ. ಕಳೆದ ವರ್ಷ ಹುಲ್ಲು ಬೆಳೆಯುವುದಕ್ಕಾಗಿ ಮಾತ್ರ 10000 ರೂಪಾಯಿ ಹಾಗೆಯೇ ಹಟ್ಟಿ ನಿರ್ಮಿಸಲು 50000 ರೂ, ಕ್ಷೀರ ಅಭಿವೃದ್ಧಿ ಇಲಾಖೆ ರವೀಂದ್ರನ್‌ಗೆ ನೀಡಿದೆ. ಇದರೊಂದಿಗೆ ಮಿಲ್ಕ್ ಇನ್ಸೆಂಟಿವ್‌ ಆಗಿ ಪ್ರತಿವರ್ಷ 40000 ರೂ. ಪ್ರೊತ್ಸಾಹದನವೂ ಲಭಿಸುತ್ತಿದೆ. ಮೃಗ ಸಂರಕ್ಷಣಾ ಇಲಾಖೆಯ ಸಹಾಯವೂ ರವೀಂದ್ರನ್‌ಗೆ ಲಭಿಸುತ್ತಿದೆ.

55ರ ಹರೆಯದ ಉತ್ಸಾಹಿ ಗೋಪ್ರೇಮಿ ರವೀಂದ್ರನ್‌ ತನ್ನ ಮಕ್ಕಳಂತೆ ಬಹಳ ಪ್ರೀತಿಯಿಂದ ಗೋವುಗಳನ್ನು ಸಾಕಿ ಸಲಹುತ್ತಿದ್ದು ಬಾಲ್ಯದಿಂದಲೇ ಗೋವುಗಳೊಂದಿಗಿನ ನಂಟು ಅವರನ್ನು ಈ ಕಾಯಕದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದೆ. ಗೋವುಗಳು ನೀಡುವ ಅಮೃತ ಸಮಾನವಾದ ಹಾಲು ಅವರ ಬದುಕಿನ ಹಾದಿಗೆ ಸುಭದ್ರತೆಯನ್ನು ನೀಡಿದೆ.

ಇವರ ತಂದೆಯವರು ಕೃಷಿಕರಾಗಿದ್ದು ದನಸಾಕಣೆಯನ್ನೂ ಹವ್ಯಾಸವಾಗಿಸಿದ್ದರು. ಶಾಲಾ ದಿನಗಳಲ್ಲಿ ಬೆಳಗ್ಗೆ ಸಂಜೆ ಹಸುಗಳನ್ನು ಮೇಯಿಸುತ್ತಾ ಅವುಗಳೊಂದಿಗೆ ಆಟವಾಡುತ್ತಿದ್ದ ರವೀಂದ್ರನ್‌ ವಿದ್ಯಾಭ್ಯಾಸ ಪೂರ್ತಿಗೊಳಿಸಿ ಸಂಪೂರ್ಣವಾಗಿ ಹೆ„ನುಗಾರಿಕೆಯಲ್ಲಿ ತೊಡಗಿಸಿಕೊಂಡರು. ಇಂದು ಅವರ ಕನಸುಗಳನ್ನು ನನಸಾಗಿಸಿ ಬದುಕಿನಲ್ಲಿ ಪೂರ್ಣ ಸಂತೃಪ್ತಿಯನ್ನು ನೀಡುವಲ್ಲಿ ಯಶಸ್ವಿಯಾಗಿದೆ.

ಬದುಕಿಗೆ ಹೊಸ ಅಥ
ದನಸಾಕಣೆ ತನ್ನ ಬದುಕಿಗೆ ಹೊಸ ಅರ್ಥ ನೀಡಿದೆ. ಹಲವಾರು ಸಾಧನೆ ಮಾಡುವಲ್ಲಿ ಇದು ಸಹಕಾರಿಯಾಗಿದೆ. ಮಾತ್ರವಲ್ಲದೆ ಸುಭದ್ರ ಸಂತೃಪ್ತ ಜೀವನವನ್ನು ಕಟ್ಟಿಕೊಳ್ಳಲು ಗೋಸಾಕಣೆ ನೆರವಾಗಿದೆ. ಸ್ವಂತ ಮನೆಯ ಕನಸು, ನನಸಾಗಿದೆ. ಮಕ್ಕಳ ವಿದ್ಯಾಭ್ಯಾಸವೂ ಇದರಿಂದಲೇ ದಡಸೇರಿದೆ. ಆರೋಗ್ಯವಂತ ಕುಟುಂಬ ನಮ್ಮದಾಗಲು ಗೋವುಗಳ ಅನುಗ್ರಹವೇ ಕಾರಣ.
– ರವೀಂದ್ರನ್‌ ಹೈನುಕೃಷಿಕ

– ಅಖೀಲೇಶ್‌ ನಗುಮುಗಂ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.