ವಿದೇಶಗಳಿಂದ ಬಂದವರು, ಮನೆ ಮಂದಿಗೆ ನಿರ್ಬಂಧ
Team Udayavani, Mar 19, 2020, 1:49 AM IST
ಕಾಸರಗೋಡು: ಫೆಬ್ರವರಿ 20ರ ಅನಂತರ ವಿದೇಶಗಳಿಂದ, ಅನ್ಯ ರಾಜ್ಯಗಳಿಂದ ಮರಳಿರುವ ವ್ಯಕ್ತಿಗಳು, ಅವರ ಕುಟುಂಬ ಸದಸ್ಯರು ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸಬಾರದು ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಆದೇಶಿಸಿದ್ದಾರೆ.
ಆರಾಧನಾಲಯ ಸಹಿತ ಎಲ್ಲ ಸಾರ್ವಜನಿಕ/ಖಾಸಗಿ ಕೇಂದ್ರಗಳಲ್ಲಿ 50ಕ್ಕಿಂತ ಅಧಿಕ ಮಂದಿ ಸೇರುವುದನ್ನು 1939ರ ಮದ್ರಾಸು ಡಿಸೀಸ್ ಕಂಟ್ರೋಲ್ ಕಾಯಿದೆ 75 ಪ್ರಕಾರ ನಿಷೇಧಿಸಲಾಗಿದ್ದು ಆದೇಶ ಹೊರಡಿಸಲಾಗಿದೆ. ಆದರೆ ಇದು ಸೂಕ್ತ ರೀತಿ ಅನುಷ್ಠಾನಗೊಳ್ಳದೇ ಇದ್ದ ಪರಿಣಾಮ ಭಾರತೀಯ ದಂಡ ಸಂಹಿತೆ 269ನೇ ಕಾಯಿದೆ ಪ್ರಕಾರ ಈ ಆದೇಶ ಉಲ್ಲಂಘಿಸುವವರ ವಿರುದ್ಧ 6 ತಿಂಗಳ ಕಠಿನ ಸಜೆ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
409 ಮಂದಿ ನಿಗಾದಲ್ಲಿ
ಕೋವಿಡ್ 19 ಸೋಂಕು ಹರಡುವಿಕೆ ಸಂಬಂಧ ಜಿಲ್ಲೆಯಲ್ಲಿ 409 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 9 ಮಂದಿ ಆಸ್ಪತ್ರೆಗಳಲ್ಲೂ, 400 ಮಂದಿ ಮನೆಗಳಲ್ಲೂ ನಿಗಾದಲ್ಲಿದ್ದಾರೆ. ಹೊಸದಾಗಿ ಮೂವರನ್ನು ಆಸ್ಪತ್ರೆಯಲ್ಲಿ ನಿಗಾದಲ್ಲಿ ಇಡಲಾಗಿದೆ, 25 ಮಂದಿಯ ರಕ್ತದ ಸ್ಯಾಂಪಲ್ ತಪಾಸಣೆಗೆ ರವಾನಿಸಲಾಗಿದೆ. 42 ಮಂದಿಯ ಫಲಿತಾಂಶ ಇನ್ನಷ್ಟೇ ಬರಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ