ವಿರಾಜಪೇಟೆ -ಕಣ್ಣೂರು ಅಂತಾರಾಜ್ಯ ಹೆದ್ದಾರಿಯಲ್ಲಿ  ವೇಗಕ್ಕೆ ಕಡಿವಾಣ


Team Udayavani, Mar 17, 2019, 4:17 AM IST

humps.png

ಗೋಣಿಕೊಪ್ಪಲು: ನಾಗರಹೊಳೆ ರಾಜೀವ್‌ ಗಾಂಧಿ ರಾಷ್ಟ್ರೀಯ ಉದ್ಯಾನವನದೊಳಗೆ ಹಾದು ಹೋಗಿರುವ ಹುಣಸೂರು, ವಿರಾಜಪೇಟೆ ಕಣ್ಣೂರು ಅಂತಾರಾಜ್ಯ ಹೆದ್ದಾರಿಯಲ್ಲಿನ ವಾಹನಗಳ ಅತಿಯಾದ ವೇಗಕ್ಕೆ ಈಗ ಬ್ರೇಕ್‌ ಬಿದ್ದಿದೆ.

 ಅರಣ್ಯದೊಳಗಿನ ಆನೆಚೌಕೂರು ಭಾಗದಲ್ಲಿ 5 ಕಿಮೀ ಉದ್ದದ ರಸ್ತೆಗೆ 10 ಉಬ್ಬುಗಳು ನಿರ್ಮಾಣವಾಗಿವೆ. ಪ್ರತಿ 500 ಮೀಟರ್‌ಗೆ ಒಂದು ಉಬ್ಬನ್ನು ನಿರ್ಮಿಸಲಾಗಿದೆ.ಈ ಬಗ್ಗೆ ರಸ್ತೆ ಬದಿಯಲ್ಲಿ ನಾಮಫ‌ಲಕ ಅಳವಡಿಸಿ ವಾಹನ ಚಾಲಕರಿಗೆ ಸೂಚನೆ ನೀಡಲಾಗಿದೆ. 500 ಮೀಟರ್‌ ಗೆ ಒಂದೊಂದು ಉಬ್ಬುಗಳಿರುವುದರಿಂದ ಅರಣ್ಯ ಕಳೆಯುವವರೆಗೂ ಉಬ್ಬುಗಳಿದ್ದೇ ಇರುತ್ತವೆ ಎಂಬುದು ಹೊಸದಾಗಿ ಸಂಚರಿಸುವ ವಾಹನ ಚಾಲಕರಿಗೂ ಮನವರಿಕೆಯಾಗಲಿದೆ. ಹೀಗಾಗಿ ಚಾಲಕರು ಎಚ್ಚರವಹಿಸಿ ವಾಹನಗಳ ವೇಗವನ್ನು ಸಹಜವಾಗಿಯೇ ನಿಯಂತ್ರಣದಲ್ಲಿ ಇಡಲಿದ್ದಾರೆ. ಇದರಿಂದ ಮನಸೊ ಇಚ್ಚೆ ವಾಹನಗಳನ್ನು ಓಡಿಸಿ ವನ್ಯಜೀವಿಗಳ ಪ್ರಾಣಕ್ಕೆ ಕಂಟಕವಾಗಿದ್ದ ಸ್ಥಿತಿ ನಿವಾರಣೆಯಾಗಲಿದೆ.

6ತಿಂಗಳ ಹಿಂದೆ ಕೇರಳದ  ಖಾಸಗಿ ಬಸ್‌ ಒಂದು ಆನೆಚೌಕೂರು ಬಳಿಯ ಮತ್ತಿಗೋಡು ಸಾಕಾನೆ ಶಿಬಿರದ ಬಳಿ ರಂಗ ಎಂಬ ಹೆಸರಿನ ಸಾಕಾನೆಯೊಂದಕ್ಕೆ ಡಿಕ್ಕಿ ಹೊಡೆದು ಅದರ ಸಾವಿಗೆ ಕಾರಣವಾಗಿತ್ತು. ಅರಣ್ಯದೊಳಗಿನ ಹೆದ್ದಾರಿಯಲ್ಲಿ ವಾಹನಗಳ ಅತಿಯಾದ ವೇಗವೇ ಆನೆ ಸಾವಿಗೆ ಕಾರಣ ಎಂದು ಇವುಗಳ ನಿಯಂತ್ರಣಕ್ಕೆ ವನ್ಯ ಜೀವಿಪ್ರಿಯರು ಸುಪ್ರೀಂಕೋರ್‌r ಮೊರೆ ಹೋಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೋರ್‌r ಹೆದ್ದಾರಿಯಲ್ಲಿನ ವಾಹನಗಳ ವೇಗವನ್ನು ನಿಯಂತ್ರಿಸಲು ಕಟ್ಟು ನಿಟ್ಟಾಗಿ ಆದೇಶಿಸಿತ್ತು.

ಆನೆ ಮೃತಪಟ್ಟಂದಿನಿಂದ ಹೆದ್ದಾರಿ ಪಟ್ರೋಲ್‌ ಪೊಲೀಸ್‌ ವಾಹನ ಅರಣ್ಯದೊಳಗೆ ಗಸ್ತು ತಿರುಗುತ್ತಾ ಅತಿಯಾದ ವೇಗದ ಚಾಲಕರಿಗೆ ದಂಡ ವಿದಿಸಿ ವೇಗ ನಿಯಂತ್ರಣಕ್ಕೆ ಮುಂದಾಗಿತ್ತು. ಆದರೂ ಕೂಡ ಕೆಲವು ವಾಹನ ಚಾಲಕರು ವೇಗವನ್ನು ನಿಯಂತ್ರಿಸಿರಲಿಲ್ಲ. ಇದಕ್ಕೆ ಈಗ ಲೋಕೋಪಯೋಗಿ ಇಲಾಖೆಯೇ ಉಬ್ಬುಗಳನ್ನು ನಿರ್ಮಿಸುವ ಮೂಲಕ ಸುಪ್ರೀಂ ಕೋರ್‌r ನ ಆದೇಶ ಪಾಲನೆಗೆ ಮುಂದಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಸಹಾಯಕ ಎಂಜಿನಿಯರ್‌ ನವೀನ್‌ ಒಂದು ಉಬ್ಬು ನಿರ್ಮಾಣಕ್ಕೆ ರೂ 50 ಸಾವಿರ ವೆಚ್ಚವಾಗಲಿದೆ. ಆನೆಚೌಕೂರು ಭಾಗದಿಂದ ಮಜ್ಜಿಗೆಹಳ್ಳದ ವರೆಗೆ 10 ಉಬ್ಬುಗಳನ್ನು ನಿರಿ°ಸಲಾಗಿದೆ. ಇಷ್ಟೇ ಪ್ರಮಾಣದ ಉಬ್ಬುಗಳು ಅಳ್ಳೂರು ಕಡೆಗೂ ನಿರ್ಮಾಣಗೊಳ್ಳಲಿದೆ. ಅದು ಮೈಸೂರು ಜಿಲ್ಲಾ ವ್ಯಾಪ್ತಿಗೆ ಒಳಪಟ್ಟಿದೆ. ವಾಹನಕ್ಕೆ ಮತ್ತು ಚಾಲಕರಿಗೆ ತೊಂದರೆಯಾಗದ ರೀತಿಯಲ್ಲಿ ವೈಜ್ಞಾನಿಕವಾಗಿ ಉಬ್ಬು ನಿರ್ಮಿಸಲಾಗಿದೆ.

ಸಿಮೆಂಟ್‌, ಮರಳು ಇಂಟರ್‌ ಲಾಕ್‌ ಟೈಲ್ಸ್‌, ಡಾಂಬಾರ್‌ ಮೂಲಕ ಉಬ್ಬುಗಳನ್ನು ನಿರ್ಮಿಸಲಾಗಿದೆ ಎಂದರು.
ಈ ಹೆದ್ದಾರಿಯ ಒಂದು ಬದಿಯಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವಿದ್ದರೆ, ಮತ್ತೂಂದು ಬದಿಯಲ್ಲಿ ಪಿರಿಯಾಪಟ್ಟಣ, ವಿರಾಜಪೇಟೆ ತಾಲ್ಲೂಕು ವ್ಯಾಪ್ತಿಗೆ ಒಳಪಟ್ಟ ಮೀಸಲು ಅರಣ್ಯವಿದೆ. ಬಂಡಿಪುರ ರಾಷ್ಟ್ರೀಯ ಉದ್ಯಾನ ವನದೊಳಗೆ ಸಂಜೆ 6 ಗಂಟೆ ಬಳಿಕ ವಾಹನ ಸಂಚಾರಕ್ಕೆ ನಿಷೇಧವಿರುವುದರಿಂದ ಕೇರಳದ ಮಾನಂದವಾಡಿ, ತೆಲಚೇರಿ ಭಾಗಗಳಿಗೆ ತೆರಳುವ ವಾಹನಗಳು ರಾತ್ರಿವೇಳೆ ಆನೆಚೌಕೂರು ಮಾರದಲ್ಲಿಯೇ ಚಲಿಸುತ್ತಿವೆ. ಹೀಗಾಗಿ ಈ ಭಾಗದಲ್ಲಿ ರಾತ್ರಿವೇಳೆ ಸಾವಿರಾರು ವಾಹನಗಳು ಎಡೆಬಿಡದೆ ಸಂಚರಿಸುತ್ತಿವೆ. ಇದರಿಂದ ಅರಣ್ಯದೊಳಗೆ ರಸ್ತೆದಾಟುವಾಗ ವಾಹನಗಳ ಜೀವಕ್ಕೆ ಕಂಟಕ ಎದುರಾಗಿತ್ತು. ಉಬ್ಬು ನಿರ್ಮಾಣದಿಂದ ಈ ಆತಂಕ ದೂರವಾಗಲಿದೆ. ಲೋಕೋಪ ಇಲಾಖೆಯ ಸಜಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.