ಸುಳ್ಯದಲ್ಲಿ ತಲೆ ಎತ್ತಿದ ಪಾರಂಪರಿಕ ಗ್ರಾಮ; ಕಾಂತಾರ ಚಿತ್ರದಲ್ಲಿ ಕೈಚಳಕ ತೋರಿದ ತಂಡದಿಂದ ನಿರ್ಮಾಣ ಕಾರ್ಯ


Team Udayavani, Dec 16, 2022, 3:42 PM IST

16

ಸುಳ್ಯ: ಆಧುನಿಕ ಜಗತ್ತಿನ ಬಹುಮಹಡಿ ಕಾಂಕ್ರೀಟ್ ಕಟ್ಟಡಗಳ ಮಧ್ಯೆ ಹಂಚು, ಮುಳಿ ಹುಲ್ಲಿನ ಗ್ರಾಮಗಳು ಕಾಣ ಸಿಗಲಾರದು. ಆದರೆ ಸುಳ್ಯದಲ್ಲಿ ಪಾರಂಪರಿಕ ಗ್ರಾಮವೊಂದು ನಿರ್ಮಾಣಗೊಂಡು ಜನತೆಯನ್ನು ಆಕರ್ಷಿಸುತ್ತಿದೆ‌. ಕಾಂತಾರ ಚಿತ್ರದಲ್ಲಿ ಹಿಂದಿನ ಕಾಲದ ಮನೆ, ಪರಿಸರವನ್ನು ನಿರ್ಮಿಸಿ ಕೈಚಳಕ ತೋರಿಸಿದ್ದ ತಂಡ ಸುಳ್ಯದಲ್ಲಿ ಪಾರಂಪರಿಕ ಗ್ರಾಮವನ್ನು ನಿರ್ಮಿಸಿದೆ.

ಸುಳ್ಯದಲ್ಲಿ ನಡೆಯುತ್ತಿರುವ ಬೃಹತ್ ಪಯಸ್ವಿ ಕೃಷಿ ಮೇಳದಲ್ಲಿ ಆಕರ್ಷಕ ಕೇಂದ್ರ ಬಿಂದುವಾಗಿ ಪಾರಂಪರಿಕ ಗ್ರಾಮ ಕಣ್ಮನ ಸೆಳೆಯುತ್ತಿದೆ. ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿಯ ಪ್ರಭು ಮೈದಾನದ ಸಮೀಪ ಪಾರಂಪರಿಕ ಗ್ರಾಮ ನಿರ್ಮಾಣಗೊಂಡಿದೆ.

ನೂರಾರು ವರ್ಷಗಳ ಹಿಂದೆ ಒಂದು ಊರು ಹೇಗಿತ್ತು ಎಂಬ ಕಲ್ಪನೆಯೊಂದಿಗೆ ಪಾರಂಪರಿಕ ಗ್ರಾಮ ನಿರ್ಮಾಣಗೊಂಡಿದೆ. ಅದರಲ್ಲೂ ಗ್ರಾಮ ತುಳುನಾಡಿದ ಸಂಪ್ರದಾಯದಂತೆ ನಿರ್ಮಾಣಗೊಂಡಿದೆ. ಪಾರಂಪರಿಕ ಗ್ರಾಮದಲ್ಲಿ ನಾವು ಗುತ್ತಿನ ಮನೆ, ಕಂಬಳದ ಕೆರೆಯಲ್ಲಿ ಕೋಣ, ಊರಿನ ಕೋಳಿ ಸಾಕಾಣಿಕೆ, ದೈವದ ಛಾವಡಿ, ಕುಲ ಕಸುಬುದಾರಿಂದ ಕೆಲಸ ನಿರ್ವಹಣೆ, ಮಡಿಕೆ ತಯಾರಿ, ಹಳ್ಳಿ ಜನರಿಂದ ನಿತ್ಯ ಚಟುವಟಿಕೆಗಳು, ಮರದ ಮೇಲಿನ ಮನೆ, ಬಿಡಾರಗಳು, ಮುಳಿ ಹುಲ್ಲಿನಿಂದ ನಿರ್ಮಾಣಗೊಂಡ ಮನೆಗಳು, ಜೋಪಡಿಗಳು, ಕಲಾಕೇಂದ್ರಗಳು ಸೇರಿದಂತೆ ತುಳುನಾಡಿನ ಪಾರಂಪರಿಕ ಗ್ರಾಮ ನಿರ್ಮಾಣಗೊಂಡಿದೆ.

ಕಾಂತಾರ ಚಲನಚಿತ್ರದಲ್ಲಿ ಕಾಣಬಹುದಾದ ಹಿಂದಿನ ಕಾಲದ ಮನೆಗಳ ಸೆಟ್ ಹಾಕಿದ ತಂಡ ಇಲ್ಲಿಯೂ ಕೆಲಸ ಮಾಡಿದೆ. ತಂಡದಲ್ಲಿ 10ಕ್ಕೂ ಅಧಿಕ ಜನ ಕೆಲಸ ನಿರ್ವಹಿಸಿದ್ದಾರೆ. ಅಲ್ಲದೇ ಉಡುಪಿ ಜಿಲ್ಲೆಯ ಕಾರ್ಕಳದ ತಂಡ ಕುಲಕಸುಬು ನಿರ್ವಹಣೆ ಕೆಲಸದಲ್ಲಿ ತೊಡಗಿದೆ. ಪಾರಂಪರಿಕ ಗ್ರಾಮಕ್ಕೆ ಶಾಲಾ ಮಕ್ಕಳು ಸೇರಿದಂತೆ ಸಾವಿರಾರು ಜನರು ಭೇಟಿ ನೀಡಿ ಹಿಂದಿನ ಕಾಲದ ಪರಂಪರೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಒಟ್ಟಿನಲ್ಲಿ ಸುಳ್ಯದ ಕೃಷಿ ಮೇಳದ ಪಾರಂಪರಿಕ ಗ್ರಾಮ ಜನತೆಯನ್ನು ನೂರಾರು ವರ್ಷಗಳ ಹಿಂದಿನ ಕಾಲದಲ್ಲಿದ್ದ ಚಿತ್ರಣವನ್ನು ಕಣ್ಣ ಮುಂದೆ ತಂದಿದೆ ಎನ್ನುವುದು ಸಂದರ್ಶಕರ ಮಾತು.

*ದಯಾನಂದ ಸುಬ್ರಹ್ಮಣ್ಯ

ಟಾಪ್ ನ್ಯೂಸ್

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.