ಮಂಜೇಶ್ವರ : ನೂತನ ರಜತ ಲಾಲಕಿ ಸಮರ್ಪಣೆ
Team Udayavani, Mar 19, 2017, 11:22 AM IST
ಹೊಸಂಗಡಿ : ಹದಿನೆಂಟು ಪೇಟೆಯ ದೇವಸ್ಥಾನ ಎಂದು ಖ್ಯಾತಿ ಪಡೆದ ಮಂಜೇಶ್ವರ ಶ್ರೀಮತ್ ಅನಂತೇಶ್ವರ ದೇವಸ್ಥಾನದಲ್ಲಿ ಪರಮಪೂಜ್ಯ ಶ್ರೀ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರ ಪೂರ್ಣ ಆಶೀರ್ವಾದದಿಂದ ಹಾಗೂ ಭಜಕ ಮಹಾಶಯರ ತನುಮನ ಧನಗಳಿಂದ ನಿರ್ಮಾಣಗೊಂಡ ಪವಿತ್ರವಾದ ನೂತನ ರಜತ ಲಾಲಕಿ ಸಮರ್ಪಣೆ ಕಾರ್ಯಕ್ರಮ ಜರಗಿತು.
ಅನಂತರ ಶ್ರೀ ದೇವಿಯ ನೂತನ ಮಂಟಪದಲ್ಲಿ ಆರೂಢರಾಗಿ ಹಗಲು ಉತ್ಸವದ ಮೂಲಕ ರಜತ ಲಾಲ್ಕಿಯ ಪ್ರಥಮೋತ್ಸವ ಜರಗಿತು.