ಬಿಜೆಪಿ ಸೋಲಿಸಿ ಸಂವಿಧಾನ ರಕ್ಷಿಸಲು ಹೋರಾಟ: ಸಚಿವ ಖಾದರ್
Team Udayavani, Mar 27, 2019, 6:30 AM IST
ಕುಂಬಳೆ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿ ಸರಕಾರವನ್ನು ಅಧಿಕಾರದಿಂದ ಇಳಿಸುವುದು ಮಾತ್ರವಲ್ಲದೆ ದೇಶದ ಸಂವಿಧಾನವನ್ನು ಸಂರಕ್ಷಿಸಲಿರುವ ಹೋರಾಟವೆಂಬುದಾಗಿ ಕರ್ನಾಟಕ ಸರಕಾರದ ಸಚಿವ ಯು.ಟಿ. ಖಾದರ್ ಹೇಳಿದರು.
ಉಪ್ಪಳದ ಮರಿಕ್ಕೆ ಸಭಾಭವನದಲ್ಲಿ ಜರಗಿದ ಮಂಜೇಶ್ವರ ಮಂಡಲ ಐಕ್ಯರಂಗ ಚುನಾವಣ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಐಕ್ಯರಂಗ ಜಿಲ್ಲಾ ಸಂಚಾಲಕ ಎಂ.ಸಿ. ಕಮರುದೀªನ್ ಮಾತನಾಡಿ ಕೇಂದ್ರ ಸರಕಾರದ ಆಡಳಿತ ವಿಫಲವಾಗಿದ್ದು ವಅಕ್ರಮ ರಾಜಕೀಯ, ನೋಟು ಆಪನಗದೀಕರಣ, ಜಿ.ಎಸ್. ಟಿ. ತೆರಿಗೆ ಹೇರಿಕೆಯಿಂದ ಜನರ ಜೀವನ ದುಸ್ತರವಾಗಿರುವುದಾಗಿ ಆರೋಪಿಸಿದರು. ಪ್ರಧಾನಿ ಬಡವರ ಏಳಿಗೆಗೆ ಬಯಸದೆ ಶ್ರೀಮಂತರ ಕಾವಲುಗಾರರಾಗಿರುವರೆಂದರು.
ಐಕ್ಯರಂಗ ಮಂಡಲ ಅಧ್ಯಕ್ಷ ಟಿ.ಎ. ಮೂಸಾ ಅಧ್ಯಕ್ಷತೆ ವಹಿಸಿದರು.
ಕಾಸರಗೋಡು ಲೋಕಸಭಾ ಐಕ್ಯರಂಗದ ಅಭ್ಯರ್ಥಿ ರಾಜಮೋಹನ್ ಉಣ್ಣಿತ್ತಾನ್, ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು, ಮಾಜಿ ಸಚಿವ ಸಿ.ಟಿ. ಅಹಮ್ಮದಾಲಿ, ಮಾಜಿ ಶಾಸಕ ಕೆ.ಪಿ. ಕುಂಞಿಕಣ್ಣನ್, ಐಕ್ಯರಂಗದ ನಾಯಕರಾದ ಎ.ಗೋವಿಂದನ್ ನಾಯರ್, ಕೆ. ನೀಲಕಂಠನ್, ಹಕೀಂ ಕುನಿಲ್, ಕಲ್ಲಟ್ಟÅ ಮಾಹಿನ್ ಹಾಜಿ, ಅಜೀಜ್ ಮರಿಕ್ಕೆ,ಪಿ.ಎಂ.ಮುನೀರ್ ಹಾಜಿ,ಎ.ಜಿ.ಸಿ ಬಶೀರ್, ನ್ಯಾಯವಾದಿ ಎ.ಗೋವಿಂದನ್ ನಾಯರ್, ನ್ಯಾಯವಾದಿ ಬಿ. ಸುಬ್ಬಯ್ಯ ರೈ, ಸುಂದರ ಆರಿಕ್ಕಾಡಿ, ಎ.ಕೆ.ಎಂ. ಅಶ್ರಫ್, ಟಿ.ಡಿ. ಕಬೀರ್, ಪಿ.ಎ. ಅಶ್ರಫ್ ಆಲಿ, ಕೆ. ಸಾಮಿ ಕುಟ್ಟಿ, ಹರ್ಷಾದ್, ಡಿ.ಎಂ.ಕೆ. ಮಹಮ್ಮದ್, ಎಂ. ಅಬ್ಟಾಸ್, ಯು.ಕೆ. ಸೈಫುಲ್ಲ ತಂಙಳ್, ಸಯ್ಯದ್ ಹಾದಿ ತಂಙಳ್, ಎ.ಕೆ. ಆರೀಫ್, ಗೋಲ್ಡನ್ ರಹಿಮಾನ್, ಕುರ್ಯಾಕೋಸ್, ವಿ. ಕಮ್ಮಾರನ್, ಕರಿವಳ್ಳೂರು ವಿಜಯನ್, ಸಜಿ ಸೆಬಾಸ್ಟಿಯನ್, ಹರೀಶ್ ಬಿ. ನಂಬ್ಯಾರ್, ಮುನೀರ್, ರಾಘವ ಚೇರಾಲ್, ಕೆ.ಪಿ. ಮುನೀರ್ ಉಪಸ್ಥಿತರಿದ್ದರು.
ಸಮಾವೇಶದಲ್ಲಿ ಐಕ್ಯರಂಗದ ಮಂಜೇಶ್ವರ ಮಂಡಲ ಚುನಾವಣ ಸಮಿತಿಯನ್ನು ರಚಿಸಲಾಯಿತು.
ಸಮಿತಿಯ ಅಧ್ಯಕ್ಷರಾಗಿ ಟಿ.ಎ. ಮೂಸಾ, ಕಾರ್ಯಾಧ್ಯಕ್ಷರಾಗಿ ಎಂ. ಅಬ್ಟಾಸ್ ಪ್ರಧಾನ ಸಂಚಾಲಕರಾಗಿ ಎಂ. ಮಂಜುನಾಥ ಆಳ್ವ, ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು. ಕೆ. ಸಾಮಿಕುಟ್ಟಿ ಅವರನ್ನೊಳಗೊಂಡ 1001 ಸದಸ್ಯರನ್ನು ಹೊಂದಿದ ಚುನಾವಣ ಸಮಿತಿಯನ್ನು ರಚಿಸಲಾಯಿತು.
ಪ್ರಮುಖರೆಲ್ಲರೂ ಆರೆಸ್ಸೆಸ್
ಕಳೆದ 5 ವರ್ಷಗಳ ಆಡಳಿತದಲ್ಲಿ ಕೇಂದ್ರದ ಬಿಜೆಪಿ ಸರಕಾರ ಸರ್ವತ್ರ ವಿಫಲವಾಗಿದೆ. ದೇಶದ ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿಯವರೆಲ್ಲರೂ ಆರ್.ಎಸ್.ಎಸ್.ನವರಾಗಿದ್ದು ಸಂಘ ಪರಿವಾರದ ಅಜೆಂಡಾದಲ್ಲಿ ಅಧಿಕಾರ ನಡೆಸುವ ಸರಕಾರ ಅಧಿಕಾರಕ್ಕೇರಿದಲ್ಲಿ ಭಾರತದ ಸಂವಿಧಾನÊನ್ನೇ ತಿದ್ದಿ ಮುಂದೆ ಚುನಾವಣೆಯೇ ನಡೆಯದಂತೆ ಮಾಡಲಿದೆ ಎಂದು ಖಾದರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ