ಮಡಿಕೇರಿ: ಬೆಸಗೂರಿನಲ್ಲಿ 2 ಕರುಗಳ ಮೇಲೆ ಹುಲಿ ದಾಳಿ
Team Udayavani, Jun 13, 2021, 2:51 PM IST
ಮಡಿಕೇರಿ: ದಕ್ಷಿಣ ಕೊಡಗಿನ ಬೆಸಗೂರಿನಲ್ಲಿ ಮತ್ತೆ ವ್ಯಾಘ್ರ ಅಟ್ಟಹಾಸ ಮೆರೆದಿದೆ.
ಶನಿವಾರ ರಾತ್ರಿ ಬಾಚಮಡ ರಾಜಪ್ಪ ಎಂಬುವವರ ಕೊಟ್ಟಿಗೆಯಿಂದ ಒಂದು ಕರುವನ್ನು ಕೊಂದು ಮತ್ತೊಂದು ಕರುವನ್ನು ಎಳೆದುಕೊಂಡು ಹೋದ ಘಟನೆ ನಡೆದಿದೆ.
ಇದನ್ನೂ ಓದಿ: ಅಪ್ಪನ ಕನಸು ನನಸು ಮಾಡಿದ ರಕ್ಷಕ: ಚಂದನವನಕ್ಕೆ ಕಾಲಿಟ್ಟ ದಿ.ಬುಲೆಟ್ ಪ್ರಕಾಶ್ ಪುತ್ರ
ಹಸುವಿನ ಕೂಗು ಕೇಳಿ ರಾಜಪ್ಪ ಅವರು ಹೊರ ಬಂದಾಗ ಹುಲಿ ಸುಮಾರು ನೂರು ಮೀಟರ್ ದೂರದಲ್ಲಿ ಕರುವನ್ನು ಬಿಟ್ಟು ಓಡಿ ಹೋಗಿದೆ. ಇಂದು ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು ಹುಲಿಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದರು.