ಜಿಲ್ಲೆಯ ಶಾಲಾ ಪರಿಸರ ಇನ್ನು ಮುಂದೆ ಹೊಗೆಸೊಪ್ಪು ಮುಕ್ತ
Team Udayavani, Jan 25, 2019, 12:50 AM IST
ಕಾಸರಗೋಡು: ಜಿಲ್ಲೆಯ ಶಿಕ್ಷಣಾಲಯಗಳು ಮತ್ತು ಆಸುಪಾಸು ಇನ್ನು ಮುಂದೆ ಹೊಗೆಸೊಪ್ಪು ಬಳಕೆ ರಹಿತ ಪ್ರದೇಶಗಳು ಎಂಬ ಹೊಗೆಸೊಪ್ಪು ವಿರೋಧಿ ನೀತಿಯನ್ನು ಘೋಷಿಸಲಾಗಿದೆ.
ಜಿಲ್ಲಾ ಆರೋಗ್ಯ ಇಲಾಖೆ, ರಾಷ್ಟ್ರೀಯ ಹೊಗೆಸೊಪ್ಪು ಬಳಕೆ ನಿಯಂತ್ರಣ ಕಾರ್ಯಕ್ರಮ (ಎನ್.ಟಿ.ಪಿ.ಸಿ.) ಜಂಟಿ ವತಿಯಿಂದ ನಡೆಸಲಾಗುವ ಹೊಗೆಸೊಪ್ಪು ಬಳಕೆ ರಹಿತ ಶಿಕ್ಷಣಾಲಯ ಎಂಬ ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನೆ ಸಂದರ್ಭ ಈ ಘೋಷಣೆ ಮಾಡಲಾಗಿದೆ.
ಪ್ರತಿ ಮಗುವಿನ ಹಕ್ಕಾಗಿರುವ ಆರೋಗ್ಯಕರ ಬದುಕು, ಉತ್ತಮ ಶಿಕ್ಷಣ ಇತ್ಯಾದಿಗಳಿಗಾಗಿ ಹೊಗೆಸೊಪ್ಪು ಬಳಕೆ ವಿರುದ್ಧ ಶಾಲಾ ಮಕ್ಕಳು ಪ್ರತಿಜ್ಞೆ ಕೈಗೊಂಡರು. ಶಾಲಾ ಆವರಣದ 93 ಮೀಟರ್ ಅಂತರದಲ್ಲಿ ಹೊಗೆಸೊಪ್ಪು, ಅಮಲು ಪದಾರ್ಥ ಮಾರಾಟ, ಬಳಕೆ ಸಲ್ಲದು ಎಂಬ ಕಾನೂನಿಗೆ ಬೆಂಬಲ ಸೂಚಿಸಿ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿದರು.
ತಳಂಗರೆ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಸಮಾರಂಭವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ. ಬಶೀರ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಹೊಗೆಸೊಪ್ಪು -ಮಾದಕ ಪದಾರ್ಥ ಮಾಫಿಯಾಗಳ ಆಮಿಷಕ್ಕೆ ವಿದ್ಯಾರ್ಥಿಗಳು ಬಲಿಯಾಗುತ್ತಿರುವ ಈ ಕಾಲಾವ ಧಿಯಲ್ಲಿ ಅದನ್ನು ಮೀರಿ ಸಾಮಾಜಿಕ ಒಳಿತಿಗಾಗಿ ಸಕ್ರಿಯರಾಗಲು ವಿದ್ಯಾರ್ಥಿಗಳು ಮುನ್ನಡೆ ಸಾ ಧಿಸಬೇಕು. ಆರಂಭದ ಹಂತದಲ್ಲಿ ಹೊಗೆಸೊಪ್ಪಿನ ಉತ್ಪನ್ನಗಳ ಬಳಕೆ ಅನಂತರ ಮಾದಕ ಪದಾರ್ಥಗಳ ಬಳಕೆಗೆ ರಹದಾರಿ ತೆರೆದುಕೊಡುವ ಭೀತಿಯಿದೆ. ಈ ಬಗ್ಗೆ ಅಪಾರ ಜಾಗೃತಿ ಬೇಕು ಎಂದು ಅವರು ಆಗ್ರಹಿಸಿದರು.
ಸಂರಕ್ಷಣೆ ವಲಯದ ಫಲಕವನ್ನು ಅವರು ಅನಾವರಣಗೊಳಿಸಿದರು. ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕ್ಷಯರೋಗ ನಿಯಂತ್ರಣ ಅ ಧಿಕಾರಿ ಡಾ| ಟಿ.ಪಿ. ಆಮಿನಾ, ನಗರಸಭೆ ಆರೋಗ್ಯ ಮೇಲ್ವಿಚಾರಕ ಉಸ್ಮಾನ್, ಜಿ.ಎಂ.ವಿ.ಎಚ್.ಎಸ್.ಎಸ್. ಪ್ರಭಾರ ಪ್ರಾಂಶುಪಾಲ ವಿ.ಹರಿದಾಸ್, ಮುಖ್ಯಶಿಕ್ಷಕಿ ಸಿ. ವಿನೋದಾ, ಶಿಕ್ಷಕಿ ಪ್ರೀತಿ ಶ್ರೀಧರನ್, ಶಾಲಾ ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಟಿ.ಕೆ.ಮೂಸಾ, ಹೆಲ್ತ್ ಲೈನ್ ನಿರ್ದೇಶಕ ಮೋಹನನ್ ಮಾಂಗಾಡ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ
Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು
Kasaragod ಎನ್ಡಿಎ ಅಭ್ಯರ್ಥಿ ಅಶ್ವಿನಿ ಪ್ರಚಾರಕ್ಕೆ ಅಡ್ಡಿ: ಕೇಸು ದಾಖಲು
ಸಿಡಿದ ಗ್ಯಾಸ್ ಸಿಲಿಂಡರ್; ಪಾರಾದ ಕುಟುಂಬ: ಶೇಣಿ ಬಾರೆದಳದಲ್ಲಿ ಮನೆಗೆ ತಗಲಿದ ಬೆಂಕಿ
Uppala ಮನೆಯಿಂದ ನಗ, ನಗದು ಕಳವು: ಯುವಕನಿಗೆ ಕೋವಿ ತೋರಿಸಿ ಬೆದರಿಕೆ
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ