ಪಯಸ್ವಿನಿ ನದಿಗೆ ಕಿಂಡಿ ಅಣೆಕಟ್ಟು;ಗುತ್ತಿಗೆದಾರರ ನಿರ್ಲಕ್ಷ್ಯ

ನೀರು ಪಾಲಾಗಲಿದೆ ನೂರಾರು ಲೋಡ್‌ ಮಣ್ಣು

Team Udayavani, Jun 14, 2019, 5:33 AM IST

12-BDK-01

ಬದಿಯಡ್ಕ: ಕುಂಟಾರು ದೇಗುಲ ಸಮೀಪ ಪಯಸ್ವಿನಿ ನದಿಗೆ ನಿರ್ಮಿಸಿದ ಕಿಂಡಿ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡಿದ್ದರೂ ಅಸಮರ್ಪಕತೆಯ ಬಗ್ಗೆ ಇನ್ನೂ ದೂರುಗಳು ಕೇಳುತ್ತಲೇ ಇವೆ.

ಬೆಳ್ಳೂರು ಜಲ ವಿತರಣ ಯೋಜನೆಯ ಸ್ಥಳಕ್ಕಿಂತ ಕೆಳ ಭಾಗದಲ್ಲಿ, ಅಂದರೆ ಕುಂಟಾರು ತೂಗು ಸೇತುವೆಗಿಂತ 75 ಮೀಟರ್‌ನಷ್ಟು ದೂರದಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು (ಚೆಕ್‌ ಡ್ಯಾಂ) ನಿರ್ಮಿಸಲಾಗಿದೆ. ಪಯಸ್ವಿನಿ ನದಿಯ ನೀರನ್ನು ತಡೆಹಿಡಿಯಲು ಎರಡು ಮೀಟರ್‌ ಎತ್ತರದ, ಸುಮಾರು 93 ಮೀ. ಉದ್ದದ ಕಾಂಕ್ರೀಟ್‌ ತಡೆಗೋಡೆ ನಿರ್ಮಿಸಲಾಗಿದೆ. ನಿರ್ಮಾಣ ಕಾಮಗಾರಿ ಆರಂಭಗೊಂಡಂದಿನಿಂದ ಸ್ಥಳೀಯರನ್ನು ಕೆಲವು ಸಮಸ್ಯೆಗಳು ಕಾಡುತ್ತಲೇ ಇವೆ. ತೀವ್ರ ನೀರಿನ ಕೊರತೆ ಎದುರಿಸುತ್ತಿರುವಾಗಲೇ ಚೆಕ್‌ ಡ್ಯಾಮ್‌ ನಿರ್ಮಾಣ ಭಾರೀ ನೀರಿನ ಕೊರತೆಗೂ ಮತ್ತಷ್ಟು ಕಾರಣವಾಯಿತು.

ನದಿಗೆ ಅಡ್ಡವಾಗಿ ಅಣೆಕಟ್ಟನ್ನು ನಿರ್ಮಿಸಲು ಆರಂಭಗೊಂಡಾಗ ನೀರಿನ ಹರಿವು ಸಾಕಷ್ಟಿತ್ತು. ಈ ನೀರನ್ನು ತಡೆಗಟ್ಟಿ ಅಣೆಕಟ್ಟಿನ ಅಡಿಪಾಯ ನಿರ್ಮಿಸಲು ಕುಂಟಾರು ದೇಗುಲ ಪರಿಸರದ ದೊಡ್ಡ ಗುಡ್ಡದ ಮಣ್ಣನ್ನೆಲ್ಲÉ ನದಿಯಲ್ಲಿ ರಾಶಿ ಹಾಕಲಾಯಿತು. ಪರಿಣಾಮವಾಗಿ ನದಿಯಲ್ಲಿ ಸಾವಿರಾರು ಲೋಡ್‌ ಮಣ್ಣು ತುಂಬಿ ಈ ಬಯಲು ಪ್ರದೇಶವಾಗಿಸಿತು. ಈಗ ನದಿಯಲ್ಲಿ ನೀರಿನ ಸುಳಿವೇ ಇಲ್ಲದಾಗಿದೆ. ಅಡಿಪಾಯ ನಿರ್ಮಾಣ ಸಲೀಸಾಗಿ ಮುಗಿದಿದೆ. ರಾಶಿ ಹಾಕಿದ ಈ ಮಣ್ಣನ್ನು ಹಾಗೆಯೇ ಬಿಡು ವಂತೆಯೂ ಇಲ್ಲ. ಈ ಸಂದರ್ಭದಲ್ಲಿ ನದಿಯ ಮಣ್ಣಿನ ರಾಶಿಗೆ ಗತಿ ಕಾಣಿಸಲು ಕಡು ಬೇಸಗೆಯಲ್ಲಿ ನದಿಯ ಉಸಿರಾಗಿರುವ ನೀರಿನ ಕಯಗಳನ್ನು ಮುಚ್ಚಿ ಬಯಲಾಯಿತು. ಪರಿಣಾಮವಾಗಿ ನೀರಿನ ಒಸರು ಸಮಾಧಿ ಯಾಯಿತು. ಇಲ್ಲಿನ ಕೃಷಿಕರು ಸದಾ ಉಪಯೋಗಿಸುತ್ತಿದ್ದ ನೀರಿನ ಮೂಲ ಇಲ್ಲದಾಗಿದೆ. ಸಾರ್ವಜನಿಕರಿಗೆ ನೀರು ವಿತರಿಸುವ ಓಟೆ ಪ್ರಮಾಣ ಜಲ ವಿತರಣೆ ಯೋಜನೆಗೆ ನೀರಿಲ್ಲದ ಸ್ಥಿತಿ ಉಂಟಾಗಿದೆ.

ಮಳೆಗಾಲದಲ್ಲಿ ನೀರಿನ ಹೊಡೆತಕ್ಕೆ ನದಿಯ ದಡವು ನೀರು ಪಾಲಾಗುವ ಸಾಧ್ಯತೆ ಇರುವ ಕಾರಣ ಈ ಅಣೆಕಟ್ಟು ಕಟ್ಟಿದ ಸ್ಥಳದ ಇಕ್ಕಡೆಗಳಲ್ಲಿ ಎರಡು ಮೀಟರ್‌ನಷ್ಟು ಎತ್ತರಕ್ಕೆ ಕಾಂಕ್ರೀಟ್‌ ಭಿತ್ತಿಗಳನ್ನು ಕಟ್ಟಲಾಗಿತ್ತು. ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಅದನ್ನು ಏರಿಸಲಾಗಿದೆ. ಆದರೆ ಈಗ ಕಟ್ಟಿದ ಭಿತ್ತಿಗಳ ಗಟ್ಟಿತನ ಸಂಶಯಕ್ಕೆ ಎಡೆ ಮಾಡುವಂತಿದೆ.

ಬೆಳ್ಳೂರು ಗ್ರಾ. ಪಂ.ನ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ವಿಶ್ವ ಬ್ಯಾಂಕಿನ ನೆರವಿನೊಂದಿಗೆ ರಾಜ್ಯ ಸರಕಾರ, ಗ್ರಾಮ ಪಂ.ನ ಆರ್ಥಿಕ ಸಹಾಯದೊಂದಿಗೆ ಪಂಚಾಯತ್‌ನ 1,126 ಕುಟುಂಬಗಳಿಗೆ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ನಿರ್ಮಿಸಿದ ಯೋಜನೆಗೆ ಚೆಕ್‌ಡ್ಯಾಮ್‌ ನಿರ್ಮಾಣ ಕಾಮಗಾರಿ ಪೂರ್ತಿಗೊಂಡ ಹಿನ್ನೆಲೆಯಲ್ಲಿ ಜಲ ವಿತರಣೆ ಆರಂಭ ಗೊಂಡೀತೇ? ಈಗಿನ ಸ್ಥಿತಿಯನ್ನು ನೋಡಿದರೆ ಅಣೆಕಟ್ಟು ಕಟ್ಟಿದರೂ ನೀರು ಪೂರೈಕೆಗೆ ಅಗತ್ಯವಾದ ನೀರು ಲಭಿಸುವುದು ಕಷ್ಟ ಸಾಧ್ಯ!

ಕಯಗಳು ಮುಚ್ಚುವ ಆತಂಕ
ಇಲ್ಲಿ ಕೆಲವು ಕುಟುಂಬಗಳ ಪಾಲಿಗೆ ಆಧಾರ ವಾಗಿರುವುದು ಡ್ಯಾಮ್‌ನ ಹತ್ತಿರದಲ್ಲಿರುವ ಬೃಹತ್‌ ಕಯ. ಇದರಲ್ಲಿ ಈಗಲೂ ಒಂದಡಿ ಯಷ್ಟು ನೀರಿದೆ. ಈ ಕಯವೂ ಮಳೆಗಾಲದಲ್ಲಿ ಮುಚ್ಚಿಹೋಗುವ ಸಾಧ್ಯತೆ ಇದೆ. ಇದು ನೀರಿನ ಸಂಗ್ರಹಕ್ಕೆ ಧಕ್ಕೆ ತರಬಹುದು.

ಮಣ್ಣನ್ನು ತೆರವುಗೊಳಿಸಬೇಕು ಎಂಬ ಸೂಚನೆ ಕರಾರಿನಲ್ಲಿದ್ದರೂ ನದಿಯಲ್ಲಿಯೇ ಚೆಕ್‌ ಡ್ಯಾಮ್‌ನ ಕೆಳಭಾಗದಲ್ಲಿ ನೂರಾರು ಲೋಡ್‌ ಮಣ್ಣನ್ನು ರಾಶಿ ಹಾಕಲಾಗಿದೆ. ಇದು ಮಳೆ ಬಂದರೆ ಇದು ನೀರಿನಲ್ಲಿ ಕೊಚ್ಚಿ ಹೋಗಲಿ ಎಂಬ ಉದ್ದೇಶದಿಂದಲೇ ರಾಶಿ ಹಾಕಲಾಗಿದ್ದು ಪರಿಣಾಮವಾಗಿ ನೀರು ಕಲಕು ವುದು ಮಾತ್ರವಲ್ಲ, ಇಷ್ಟೊಂದು ಮಣ್ಣೂ ಸಮುದ್ರ ಪಾಲಾಗಲಿದೆ. ಈ ಬಗ್ಗೆ ಅಧಿಕೃತರು ಗಮನಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

 

ಟಾಪ್ ನ್ಯೂಸ್

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.