ಡೆಮೋಹಟ್‌ನಲ್ಲಿ ಪ್ರಥಮ ಮತದಾನ ನಡೆಸಿದ ನಿಮ್ಮಿ


Team Udayavani, Mar 23, 2019, 12:40 AM IST

22ksde2.jpg

ಕಾಸರಗೋಡು: ಮತದಾರರಿಗೆ ಮತದಾನ ನಡೆಸುವ ವಿಧಾನ ಸುಗಮಗೊಳಿಸುವ, ವಿವಿಪಾಟ್‌ ಸೌಲಭ್ಯದ ಕುರಿತು ಮಾಹಿತಿ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ “ಡೆಮೋಹಟ್‌’ಆರಂಭಗೊಂಡಿದೆ.

ಆತಂಕ ನಿವಾರಣೆಗಾಗಿ 
ಡೆಮೋಹಟ್‌

ಮತದಾರರು ಅದರಲ್ಲೂ ಪ್ರಥಮ ಬಾರಿಗೆ ನೂತನ ಸೌಲಭ್ಯಗಳೊಂದಿಗಿನ ಮತದಾನ ನಡೆಸುವ    ವೇಳೆ ಉಂಟಾಗಬಲ್ಲ ಆತಂಕ ಪರಿಹರಿಸುವ ನಿಟ್ಟಿನಲ್ಲಿ ಈ ಸೌಲಭ್ಯಗಳ ಕುರಿತು ಸರಳವಾಗಿ ಎಲ್ಲ ಮಾಹಿತಿಗಳನ್ನೂ ನೀಡಿ, ಪ್ರಾತ್ಯಕ್ಷಿಕೆ ನಡೆಸಿ ಮತದಾನಕ್ಕೆ ಪೂರಕವಾದ ತರಬೇತಿ ನೀಡುವ ನಿಟ್ಟಿನಲ್ಲಿ ಈ ಡೆಮೋಹಟ್‌ ಸ್ಥಾಪಿಸಲಾಗಿದೆ. ಬ್ಯಾಲೆಟ್‌ ಯೂನಿಟ್‌, ಕಂಟ್ರೋಲ್‌ ಯೂನಿಟ್‌, ವಿವಿಪಾಟ್‌ ಇತ್ಯಾದಿಗಳ ಕುರಿತು ಸಮಗ್ರ ಮಾಹಿತಿ ಇಲ್ಲಿ ನೀಡಲಾಗುತ್ತಿದೆ.

ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಅವರ ಸಮಕ್ಷದಲ್ಲಿ, ಈ ಸಲ ಪ್ರಥಮ ಬಾರಿಗೆ ಮತದಾನ ನಡೆಸುವ ಸಿದ್ಧತೆಯಲ್ಲಿರುವ ಚೆಮ್ನಾಡ್‌ ಕೋಳಿಯಡ್ಕ ನಿವಾಸಿ ನಿಮ್ಮಿ ಟಿ. ಅವರು ಡೆಮೋ ಹಟ್‌ ಉದ್ಘಾಟಿಸಿದರು ಜಿಲ್ಲಾಡಳಿತೆ ವತಿಯಿಂದ ಡೆಮೋಹಟ್‌ ಸ್ಥಾಪಿಸಲಾಗಿದ್ದು, ಜಿಲ್ಲಾ ಮಟ್ಟದ ಅ ಧಿಕಾರಿಗಳು, ಸಿಬ್ಬಂದಿ ಈ ವೇಳೆ ಜತೆಗಿದ್ದರು.

ಡೆಮೋ ಹಟ್‌
ಕಾಸರಗೋಡು ಜಿಲ್ಲಾ ಧಿಕಾರಿ ಕಚೇರಿ ಆವರಣದಲ್ಲಿ ಸ್ಥಾಪಿಸಿದ ಡೆಮೋಹಟ್‌ನಲ್ಲಿ ಪ್ರಥಮ ಬಾರಿಗೆ ಮತದಾನ ನಡೆಸಿದ ಗುಂಗಿನಲ್ಲಿದ್ದಾರೆ   ಚೆಮ್ನಾಡ್‌ ನಿವಾಸಿ  ನಿಮ್ಮಿ ಟಿ.ಮತದಾನ ಯಂತ್ರ ಕುರಿತು ತರಬೇತಿ ನೀಡುವ ಕೇಂದ್ರದಲ್ಲಿ ಮತದಾನ ನಡೆಸುವ ತರಬೇತಿ ಪಡೆದರೆ ಲೋಕಸಭೆ ಚುನಾವಣೆಯ ಮತದಾನಕ್ಕೆ ಸುಲಭವಾದೀತು ಎಂಬ ಭಾವನೆಯಿಂದ ಬಂದಾಕೆ ಇವರು.
 
ಅನಿರೀಕ್ಷಿತ
ಆದರೆ ಅನಿರೀಕ್ಷಿತವಾಗಿ ಈ ಕೇಂದ್ರದ ಉದ್ಘಾಟನೆ ತಾವೇ ನಡೆಸಬೇಕಾಗಿ ಬಂದಾಗ ಸಂತೋಷ ಮತ್ತು ಸಂಕೋಚ ಜೊತೆಗೇ ಕಾಡಿತ್ತು. ಜಿಲ್ಲಾ ಧಿಕಾರಿ ಡಾ| ಡಿ. ಸಜಿತ್‌ ಬಾಬು ಅವರ ಒತ್ತಾಯದ ಮೇರೆಗೆ ತಾವು ಈ ಕರ್ತವ್ಯ ನಡೆಸಬೇಕಾಗಿ ಬಂದಿತ್ತು.

ತಾವಿಲ್ಲಿ ನಡೆಸಿದ ಮೋಕೊÌàಟಿಂಗ್‌ ಸಂತೋಷ ತಂದಿತ್ತಿದೆ ಎಂದವರು ಈ ವೇಳೆ ಅಭಿಪ್ರಾಯಪಟ್ಟರು. 

ಸರಳ ತರಬೇತಿ
ವಿವಿಪ್ಯಾಟ್‌ ಮೆಷಿನ್‌ ಕುರಿತು ಮಾಹಿತಿ ತಿಳಿಯಲು ಇಲ್ಲಿ ಅವಕಾಶ ಲಭಿಸಿದೆ. ಉಳಿದವರಿಗೂ ಸುಲಭ ರೀತಿ ಮತದಾನ ನಡೆಸಲು ಇಲ್ಲಿನ ಸರಳ ತರಬೇತಿ ಪೂರಕವಾಗಿದೆ ಎಂದವರು ನುಡಿದರು.

ಚೆಮ್ನಾಡ್‌ ಗ್ರಾಮ ಪಂಚಾಯತ್‌ನ ಕೋಳಿಯಡ್ಕ ನಿವಾಸಿ ದಾಮೋದರನ್‌-ಲೀಲಾ ದಂಪತಿ ಪುತ್ರಿ ನಿಮ್ಮಿ. ಬಿ.ಕಾಂ. ತೃತೀಯ ವರ್ಷ ಪರೀಕ್ಷೆ ಪೂರೈಸಿ, ಫಲಿತಾಂಶಕ್ಕಾಗಿ ಕಾಯುತ್ತಿರುವ ಈಕೆಗೆ ಈ ಬಾರಿ ಪ್ರಥಮ ಬಾರಿಗೆ ಮತದಾನ ನಡೆಸುವ ಅವಕಾಶವೂ ಲಭಿಸಿದೆ. 20 ವರ್ಷ ಪ್ರಾಯದ ಈಕೆಗೆ ಈ ಹಿಂದೆ ಮತದಾನಕ್ಕೆ ಗುರುತುಚೀಟಿ ಇಲ್ಲದೇ ಇದ್ದುದು ಕಾರಣವಾಗಿತ್ತು. ಈ ಬಾರಿ ಗುರುತುಚೀಟಿ ಲಭಿಸಿದ್ದು, ಮತದಾನಕ್ಕೆ ಹಾದಿ ಸುಗಮವಾಗಿದೆ ಎಂದವರು ನುಡಿದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.