46 ಕೋ.ರೂ. ಅನುದಾನ, 6 ಕೋ.ರೂ. ಸಿಎಂ ಪರಿಹಾರ ನಿಧಿ ವಿತರಣೆ: ಐವನ್
ವಿಧಾನ ಪರಿಷತ್ ಸದಸ್ಯಾವಧಿ ಪೂರ್ಣ
Team Udayavani, Jun 24, 2020, 10:51 AM IST
ಮಂಗಳೂರು: ವಿಧಾನ ಪರಿಷತ್ ಸದಸ್ಯನಾಗಿ 6 ವರ್ಷಗಳ ಸೇವಾವಧಿ ಮಂಗಳವಾರ ಪೂರ್ಣಗೊಂಡಿದ್ದು, ಇಲ್ಲಿಯವರೆಗೆ ವಿವಿಧ ನಿಗಮ, ಯೋಜನೆ, ಅಭಿವೃದ್ಧಿ ಕಾರ್ಯಗಳಡಿ 46 ಕೋಟಿ ರೂ. ಅನುದಾನವನ್ನು ಸರಕಾರದಿಂದ ಪಡೆದು ಜನಸೇವೆಗೆ ಸದ್ಬಳಕೆ ಮಾಡಲಾಗಿದೆ ಎಂದು ಐವನ್ ಡಿ’ಸೋಜಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. 1,600ಕ್ಕೂ ಅಧಿಕ ಅನಾರೋಗ್ಯ ಪೀಡಿತ ಅರ್ಜಿದಾರರಿಗೆ ಮುಖ್ಯ ಮಂತ್ರಿ ಪರಿಹಾರ ನಿಧಿಯಡಿ 6.62 ಕೋಟಿ ರೂ. ವಿತರಿಸಲಾಗಿದೆ. 2014ರಿಂದ ಈವರೆಗೆ ಶಾಸನ ಸಭೆಯ ಒಂದೂ ಸಭೆಗೂ ಗೈರು ಹಾಜರಾಗದೆ ಜನರ ಪರ ಧ್ವನಿ ಎತ್ತಿದ ತೃಪ್ತಿ ನನಗಿದೆ ಎಂದರು.
ಸೌರಶಕ್ತಿ ಘಟಕ
ಶಾಸಕರ ನಿಧಿಯಿಂದ ಸರಕಾರಿ, ಅನುದಾನಿತ 25 ಶಾಲೆಗಳಿಗೆ 3 ಕಿಲೋ ವ್ಯಾಟ್ನ ಸೌರಶಕ್ತಿ ಘಟಕಗಳನ್ನು ಒದಗಿಸಲಾಗಿದೆ. ಪೆರಾಬೆಯ ಎಂಡೋ ಪೀಡಿತರ ಮನೆಗಳಿಗೆ ಸೌರಶಕ್ತಿ ನೀಡಲಾಗಿದೆ. ಪತ್ನಿ ಡಾ| ಕವಿತಾ ಡಿ’ಸೋಜಾ ಅವರ ಸಹಾಯದಿಂದ 63 ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋ ಜಿಸಿ, 350ಕ್ಕೂ ಅಧಿಕ ಉಚಿತ ಶಸ್ತ್ರಚಿಕಿತ್ಸೆ ಗಳನ್ನು ನಡೆಸಲಾಗಿದೆ. 3,500ಕ್ಕೂ ಅಧಿಕ ಜನ ರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯ ವಿವಿಧೆಡೆ 68 ಸುಸಜ್ಜಿತ ರಿಕ್ಷಾ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ ನಿಟ್ಟಿನಲ್ಲಿ ಮಾಡಿದ ಪ್ರಯತ್ನದ ಫಲವಾಗಿ 2019-20ನೇ ಬಜೆಟ್ನಲ್ಲಿ 200 ಕೋಟಿ ರೂ. ಅನುದಾನ ದೊಂದಿಗೆ ನಿಗಮ ಸ್ಥಾಪನೆಗೆ ಸರಕಾರ ಕ್ರಮ ಕೈಗೊಂಡಿದೆ ಎಂದರು.
ಮುಂದೆ ಜನರ ಸರಕಾರಿ ಸೇವೆ ಗಳನ್ನು ಮನೆಯ ಕಚೇರಿ ಮೂಲಕವೇ ಮುಂದುವರಿಸಲಾಗುವುದು. ಪಕ್ಷ ವನ್ನು ಬಲಿಷ್ಠವಾಗಿಸಲು ಹೆಚ್ಚಿನ ಸಮಯವನ್ನು ನೀಡಲಿದ್ದೇನೆ. ಜತೆಗೆ ವಕೀಲ ವೃತ್ತಿಯನ್ನೂ ಮುಂದುವರಿಸುವುದಾಗಿ ಐವನ್ ಹೇಳಿದರು.
ಶಾಸಕ ಯು. ಟಿ. ಖಾದರ್, ಪ್ರಮುಖರಾದ ಇಬ್ರಾಹಿಂ ಕೋಡಿಜಾಲ್, ಎಂ. ಶಶಿಧರ ಹೆಗ್ಡೆ, ಮನುರಾಜ್, ನಾಗೇಂದ್ರ ಕುಮಾರ್, ನಝೀರ್ ಬಜಾಲ್, ಸಬಿತಾ ಮಿಸ್ಕಿತ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು