ಕುಶಲಕರ್ಮಿಗಳ ಕೆಲಸ ಆಸಕ್ತಿದಾಯಕ: ಗೋಕುಲದಾಸ್
ಸಾಂಪ್ರದಾಯಿಕ ಕುಂಬಾರಿಕೆ ಕೆಲಸಗಳ ವಿಶಿಷ್ಟ ಪ್ರದರ್ಶನ, ಶಿಬಿರ ಉದ್ಘಾಟನೆ
Team Udayavani, Apr 17, 2022, 11:10 AM IST
ಕೊಡಿಯಾಲ್ಗುತ್ತು: ಇಂಟಾಕ್ನ ಮಂಗಳೂರು ಚಾಪ್ಟರ್ ಆರ್ಟ್ ಕನರಾ ಟ್ರಸ್ಟ್ ಸಹಯೋಗದಲ್ಲಿ ‘ಸ್ಪಿನ್ನರ್ಸ್ ಆಫ್ ಕ್ಲೇ ಆನ್ ವ್ಹೀಲ್ ‘ ಸಾಂಪ್ರದಾಯಿಕ ಕುಂಬಾರಿಕೆ ಕೆಲಸಗಳ ವಿಶಿಷ್ಟ ಪ್ರದರ್ಶನ, ಶಿಬಿರ ಮತ್ತು ದ.ಕ. ಜಿಲ್ಲೆಯ ಸಾಂಪ್ರದಾಯಿಕ ಕುಂಬಾರರ ಸ್ಥಿತಿಗತಿ ಕುರಿತು ಕಾರ್ಯಕ್ರಮ ಬಲ್ಲಾಲ್ ಬಾಗ್ನ ಕೊಡಿಯಾಲ್ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಶನಿವಾರ ಉದ್ಘಾಟನೆಗೊಂಡಿತು.
ಕಾರ್ಯಕ್ರಮ ಉದ್ಘಾಟಿಸಿದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್ ಮಾತನಾಡಿ, ಕುಶಲಕರ್ಮಿಗಳು ಮಾಡಿದ ಕೆಲಸಗಳನ್ನು ನೋಡಲು ಯಾವಾಗಲೂ ಆಸಕ್ತಿದಾಯಕವಾಗಿದೆ. ಸರಕಾರವು ಕ್ಲಸ್ಟರ್ಗಳನ್ನು ಮಾಡಲು ಮತ್ತು ಕುಶಲಕರ್ಮಿಗಳಿಗೆ ಸಾಮಾನ್ಯ ಸೌಲಭ್ಯಗಳನ್ನು ಒದಗಿಸುವ, ಮಾರುಕಟ್ಟೆಗೆ ಸಹಾಯ ಮಾಡುವ ಯೋಜನೆಗಳನ್ನು ಹೊಂದಿದೆ ಎಂದರು.
ಕುಶಲಕರ್ಮಿಗಳ ಡೈರೆಕ್ಟರಿ ರಚನೆಗೆ ಚಿಂತನೆ
ಇಂಟಾಕ್ ಮಂಗಳೂರು ಚಾಪ್ಟರ್ ನ ಸಂಚಾಲಕ ಸುಭಾಷ್ ಚಂದ್ರ ಬಸು ಮಾತನಾಡಿ, ದಕ್ಷಿಣ ಕನ್ನಡದ ಸಾಂಪ್ರದಾಯಿಕ ಕುಂಬಾರರ ಸ್ಥಾನಮಾನ ವನ್ನು ಅರ್ಥಮಾಡಿ ಕೊಳ್ಳುವುದು ಮತ್ತು ಎಲ್ಲ ಕುಶಲಕರ್ಮಿಗಳ ಡೈರೆಕ್ಟರಿಯನ್ನು ರಚಿಸುವುದು ಈ ಪ್ರದರ್ಶನದ ಉದ್ದೇಶವಾಗಿದೆ. ಈ ಯೋಜನೆಯಡಿ ನಾವು 89 ಕುಂಬಾರರನ್ನು ಗುರುತಿಸಿದ್ದೇವೆ. 48 ಕುಂಬಾರರ ವಿವರವಾದ ದಾಖಲಾತಿಯನ್ನು ಮಾಡಲಾಗಿದೆ. ಮಡಕೆಗಳ ತಯಾರಿಕೆಯ ಪ್ರತಿ ಹಂತವನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಭೂಮಿ ಮೀಸಲಿಡಿ
ಕುಳಾಯಿಯ ಮೂರನೇ ತಲೆಮಾರಿನ ಕುಂಬಾರ ಮನೋಜ್ ಕುಲಾಲ್ ಮಾತ ನಾಡಿ, ಉರುವಲು ಮತ್ತು ಮಣ್ಣಿನಂತಹ ಕಚ್ಚಾ ವಸ್ತುಗಳನ್ನು ಖರೀದಿಸಲು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ವಿವರಿಸಿದರು. ಕುಂಬಾರರು ಸುಲಭವಾಗಿ ಮಣ್ಣನ್ನು ಸಂಗ್ರಹಿಸಲು ಅಗತ್ಯವಿರುವ ಭೂಮಿಯನ್ನು ಮೀಸಲಿಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.
ಮಡಕೆಗಳಿಗೆ ಉತ್ತಮ ಬೇಡಿಕೆ
ಮಡಕೆ ಮಾರಾಟದಲ್ಲಿ ಅನುಭವಿ ಬೆಳ್ತಂಗಡಿಯ ಜಿತೇಶ್ ಕುಂಬಾರ ಅವರು ಮಾತನಾಡಿ, ಮಂಗಳೂರು, ಕಾಸರಗೋಡು ಮತ್ತು ಕೇರಳದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಮಡಕೆಗಳಿಗೆ ಉತ್ತಮ ಬೇಡಿಕೆಯಿದೆ. ಆದರೆ ಪ್ರಸ್ತುತ ಉತ್ಪಾದನೆಯು ಸಾಕಾಗುವುದಿಲ್ಲ. ಇಳಂತಿಲ ಗ್ರಾಮದಲ್ಲಿರುವ ಮೂವತ್ತು ಕುಂಬಾರರ ಕುಟುಂಬಗಳಲ್ಲಿ ಮೂರು ಕುಟುಂಬಗಳು ಮಾತ್ರ ಕುಂಬಾರಿಕೆಯನ್ನು ಅಭ್ಯಾಸ ಮಾಡುತ್ತಿವೆ. ಕೆಲವು ಯುವ ಕುಂಬಾರರು ತಮ್ಮ ಜೀವನವನ್ನು ಉಳಿಸಿಕೊಳ್ಳಲು ದಿನನಿತ್ಯದ ಕೆಲಸವನ್ನು ಹೊಂದಿದ್ದಾರೆ. ಸರಕಾರ ಈ ಹಿಂದೆ ತರಬೇತಿ ಮತ್ತು ಸಮುದಾಯ ಕಾರ್ಯಸ್ಥಳಕ್ಕಾಗಿ 5 ಲಕ್ಷ ರೂ. ನೀಡಿತ್ತು, ಆದರೆ ಪ್ರಸ್ತುತ ಯಾವುದೇ ಬೆಂಬಲವಿಲ್ಲ ಎಂದರು. ಸಿಂಧುಶ್ರೀ ಅವರು ಸಹಕರಿಸಿದರು. ಸುಭಾಷ್ ಚಂದ್ರ ಬಸು ಅತಿಥಿಗಳನ್ನು ಪರಿಚಯಿಸಿ, ನಿರೂಪಿಸಿದರು.
ಪ್ರದರ್ಶನ
ಎ. 16ರಿಂದ 18ರ ವರೆಗೆ ಬೆಳಗ್ಗೆ 11 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪ್ರದರ್ಶನ ಆಯೋಜಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್
Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್ ಸಾವು
Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!
Mangaluru: ಕುಡಿಯುವ ನೀರಿನ ಕೊರತೆ, ಬೋಟ್, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!