ಮಂಗಳೂರು: ಹೆಬ್ಬಾವು ಕಚ್ಚಿದರೂ ಅಳುಕದೆ ಅದರ ತಲೆಮೇಲೆ ಕಾಲಿಟ್ಟು ಸೆರೆಹಿಡಿದ 10ರ ಪೋರ !
Team Udayavani, Oct 9, 2020, 1:24 PM IST
ಮಂಗಳೂರು: ಬಾಲಕನೋರ್ವನಿಗೆ ಹೆಬ್ಬಾವು ಕಚ್ಚಿ ಗಾಯಗೊಳಿಸಿದರೂ ವಿಚಲಿತನಾಗದೆ ಕೂಡಲೇ ಅದರ ತಲೆಯ ಮೇಲೆ ಕಾಲಿಟ್ಟು, ನಂತರ ಹಿಡಿಯಲು ಸಹಾಯ ಮಾಡಿದ ಘಟನೆ ಮಂಗಳೂರಿನ ಮಣ್ಣಗುಡ್ಡೆ ಬಳಿ ನಡೆದಿದೆ.
ನಗರದ ಮಣ್ಣಗುಡ್ಡೆ ಸಮೀಪದ ವಾದಿರಾಜ ನಗರದ ಬಿ. ಗೋಪಾಲ ಕೃಷ್ಣ ಪೈ ಅವರ ಪುತ್ರ ಸಂಕಲ್ಪ ಜಿ. ಪೈ (10) ಅ. 7 ರಂದು ಸಂಜೆ 7 ಗಂಟೆಗೆ ವೇಳೆಗೆ ಮನೆ ಸಮೀಪದ ದೇವಸ್ಥಾನಕ್ಕೆ ಪೂಜೆಗೆಂದು ಹೋಗುತ್ತಿದ್ದಾಗ ಮನೆ ಹಿಂಭಾಗದ ಚರಂಡಿಯ ಪೈಪ್ ನಲ್ಲಿ ಇದ್ದ ಹೆಬ್ಬಾವು ದಿಢೀರನೆ ಕಾಲಿಗೆ ಕಚ್ಚಿತು.
ಕೂಡಲೇ ಇನ್ನೊಂದು ಕಾಲಿನಿಂದ ಹಾವಿನ ತಲೆಯ ಭಾಗಕ್ಕೆ ತುಳಿದ ಕಾರಣ ಹಾವು ವಾಪಸ್ ಪೈಪಿನ ಒಳಗೆ ಹೋಗಿದೆ. ಬೊಬ್ಬೆ ಹಾಕಿದಾಗ ಅಕ್ಕ ಪಕ್ಕದ ಜನರು ಬಂದು ಬಳಿಕ ಹಾವನ್ನು ಹಿಡಿದು ಪಿಲಿಕುಳ ನಿಸರ್ಗಧಾಮಕ್ಕೆ ಸಾಗಿಸಲಾಗಿದೆ.
ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಹೆಬ್ಬಾವು ಕಡಿತದಿಂದ ಆತನ ಕಾಲಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಈಗ ಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ