ಕಾರುಗಳ ಢಿಕ್ಕಿ : ಗುದ್ದಿದ ರಭಸಕ್ಕೆ ಕಳಚಿಹೋದ ಚಕ್ರ
ವ್ಯಾಪ್ತಿಯ ಭಟ್ರಕರೆ ಸಮೀಪ ಕಾರುಗಳ ಮುಖಾಮುಖಿ ಢಿಕ್ಕಿ
Team Udayavani, Mar 5, 2021, 7:03 PM IST
ಬಜಪೆ : ಬಜಪೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಭಟ್ರಕರೆಯ ಸಮೀಪ ಕಾರುಗಳ ಮುಖಾಮುಖಿ ಢಿಕ್ಕಿಯ ಪರಿಣಾಮ ಒಂದು ಕಾರಿನ ಚಕ್ರವೇ ಕಳಚಿಹೋದ ಘಟನೆ ನಡೆದಿದೆ.
ಮಂಗಳೂರು ಕಡೆಯಿಂದ ಕಟೀಲು ದೇವಸ್ಥಾನಕ್ಕೆ ಹೋಗುತ್ತಿದ್ದ ಹೂಂಡೈ ಗ್ರೆಟಾ ಕಾರಿಗೆ, ಪೆರ್ಮುದೆ ಕಡೆಯಿಂದ ಬಜಪೆ ಕಡೆಗೆ ಹೋಗುತ್ತಿದ್ದ ವ್ಯಾಗನರ್ ಕಾರು ಢಿಕ್ಕಿ ಹೊಡೆದ ಪರಿಣಾಮ ಹಿಂದಿನ ಎರಡು ಚಕ್ರಗಳು ಕಳಚಿ ಹೋಗಿವೆ.
ಕಾರು ಢಿಕ್ಕಿ ಹೊಡೆದ ರಭಸಕ್ಕೆ ಗ್ರೇಟಾ ಕಾರು ಒಂದು ಸುತ್ತು ತಿರುಗಿ ನಿಂತಿದ್ದು, ಮುಂಭಾಗ ಹಾನಿಗೊಳಗಾಗಿದೆ.