ಸ್ವಚ್ಛ ಸರ್ವೇಕ್ಷಣೆ; ಅಭಿಪ್ರಾಯ ದಾಖಲಿಸಿ ಮಂಗಳೂರು ಗೆಲ್ಲಿಸಿ


Team Udayavani, Apr 7, 2022, 11:35 AM IST

mangaluru

ಲಾಲ್‌ಬಾಗ್‌: ಇದು ನಮ್ಮ ಮಂಗಳೂರು ! ಪ್ರತಿಭೆ, ಪರಿಶ್ರಮಗಳೆರಡರಿಂದಲೂ ಜಗದ್ವಿಖ್ಯಾತ ವಾಗಿರುವ ಊರು. ಈಗ ಸ್ವಚ್ಛತೆಯಲ್ಲೂ ಅಂಥದ್ದೇ ಒಂದು ಮೈಲಿಗಲ್ಲು ತಲುಪಬಹುದಾದ ಅವಕಾಶ ನಮ್ಮೆದುರಿಗಿದೆ.

ಪ್ರತಿ ವರ್ಷವೂ ಕೇಂದ್ರ ನಗರಾ ಭಿವೃದ್ಧಿ ಇಲಾಖೆಯ ಪೌರಾಡಳಿತ ನಿರ್ದೇಶನಾಲಯ ‘ಸ್ವಚ್ಛ ಸರ್ವೇ ಕ್ಷಣಾ’ ಸಮೀಕ್ಷೆ ನಡೆಸುತ್ತದೆ. ಅದು ಆನ್‌ ಲೈನ್‌ ಮೂಲಕ ನಡೆಯುವ ಸಮೀಕ್ಷೆ. ಇದರಲ್ಲಿ ಪಾಲ್ಗೊಳ್ಳ ಬೇಕಾದವರು ಸ್ವತಃ ನಾಗರೀಕರೇ.

ಸ್ವತಂತ್ರ ಪರಿಶೀಲನ ತಂಡ ಬಂದು ಪರಿಶೀಲಿಸುವುದಲ್ಲದೇ, ನಾಗರಿಕರು ನೀಡುವ ಅಭಿಪ್ರಾಯಕ್ಕೆ ವಿಶೇಷ ಮನ್ನಣೆ ಇದೆ. ಹಾಗಾಗಿಯೇ ಪ್ರತಿಯೊಬ್ಬರೂ ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ಧನಾತ್ಮಕ ಅಭಿಪ್ರಾಯ ನೀಡಬೇಕೆಂಬುದು ಮಹಾನಗರ ಪಾಲಿಕೆಯ ಮನವಿ. ದೇಶಾದ್ಯಂತ ನಗರ ಸ್ವಚ್ಛತಾ ಪರಿಕಲ್ಪನೆ ಯಲ್ಲಿ ನಡೆಯಲಿರುವ ನಗರದ ‘ಸ್ವಚ್ಛ ಸರ್ವೇಕ್ಷಣಾ -2022′ ಕ್ಕೆ ಮಂಗಳೂರು ಪರ ಎ. 12 ರೊಳಗೆ ನಿಮ್ಮ ಅಭಿಪ್ರಾಯಗಳನ್ನು ಸಂಬಂಧಪಟ್ಟ ಆ್ಯಪ್‌ ಮೂಲಕ ನೀಡಬಹುದಾಗಿದೆ. ವಾಸಯೋಗ್ಯ ನಗರ ಹಾಗೂ ತಮ್ಮ ನೆರೆಹೊರೆಯಲ್ಲಿ ಸ್ವಚ್ಛತೆ ಸಾಧಿಸುವಲ್ಲಿ ತಮ್ಮ ನಗರದ ಪ್ರಗತಿ ಕುರಿತು ನೀವು ಅಭಿಪ್ರಾಯ ನೀಡಬೇಕು.

ಏನು ಮಾಡಬೇಕು?

ಸ್ವಚ್ಛತಾ ಆ್ಯಪ್‌’, ಮೈ ಗವರ್ನಮೆಂಟ್‌ ಆ್ಯಪ್‌’ ಡೌನ್‌ಲೋಡ್‌ ಮಾಡಿ ಅದರ ಮೂಲಕವೂ ಪಾಲ್ಗೊಳ್ಳಬಹುದು. ನೇರವಾಗಿ ಎಂದು ನಿಮ್ಮ ಮೊಬೈಲ್‌ನ ವೆಬ್‌ ಬ್ರೌಸರ್‌ ನಲ್ಲಿ ಟೈಪ್‌ ಮಾಡಿ. ಆಗ ಈ ಲಿಂಕ್‌ ಮೂಲಕ ತೆರೆದುಕೊಳ್ಳುವ ‘ವೋಟ್‌ ಫಾರ್‌ ಯುವರ್‌ ಸಿಟಿ ಸಿಟಿಜನ್ಸ್‌ ಫೀಡ್‌ಬ್ಯಾಕ್‌’ ಪುಟ (ವೆಬ್‌ ಪುಟ) ಕಾಣಸಿಗುತ್ತದೆ. ಇಲ್ಲಿ ಇಂಗ್ಲಿಷ್‌, ಕನ್ನಡ ಸಹಿತ ಭಾಷೆಯ ಆಯ್ಕೆಗೆ ಅವಕಾಶವಿದೆ. ಬಳಿಕ ರಾಜ್ಯ, ಜಿಲ್ಲೆ, ನಗರದ ಹೆಸರನ್ನು ಆಯ್ಕೆ ಮಾಡಬೇಕು. ವಯಸ್ಸು, ನಗರ ನಿವಾಸಿಯಾಗಿದ್ದೀರಾ? ಎಂಬ ಅಂಶವನ್ನೂ ಭರ್ತಿ ಮಾಡಿ, ನಿಮ್ಮ ಹೆಸರು ಹಾಗೂ ಮೊಬೈಲ್‌ ಫೋನ್‌ ನಂಬರ್‌ ಅನ್ನು ತುಂಬಬೇಕು. ಕೂಡಲೇ ನಿಮ್ಮ ಮೊಬೈಲ್‌ ಫೋನ್‌ ಗೆ ಒಟಿಪಿ ಬರಲಿದೆ. ಅದನ್ನು ಮುಂದಿನ ಪ್ರಶ್ನೆಗಳಿಗೆ ಉತ್ತರ ನೀಡಿದ ಬಳಿಕ ಅಂತಿಮವಾಗಿ ನಮೂದಿಸಬೇಕು.

ಪ್ರಶ್ನೆಗಳು ಯಾವುದು?

ಸ್ವಚ್ಛ ಸರ್ವೇಕ್ಷಣಾ 2022ನಲ್ಲಿ ನಿಮ್ಮ ನಗರ ಭಾಗವಹಿಸುತ್ತಿದೆ ಎಂದು ನೀವು ತಿಳಿದಿರುವಿರಾ? ಗೂಗಲ್‌ ಮ್ಯಾಪ್‌ನಲ್ಲಿ ಹತ್ತಿರದ ಸಾರ್ವಜನಿಕ ಶೌಚಾಲಯವನ್ನು ನೀವು ಹುಡುಕಬಹುದು ಎಂದು ನಿಮಗೆ ತಿಳಿದಿದೆಯೇ? ನಿಮ್ಮ ನೆರೆಹೊರೆಯ ಪ್ರದೇಶ ಯಾವಾಗಲೂ ಸ್ವಚ್ಛವಾಗಿರುವುದನ್ನು ನೀವು ನೋಡಿರುವಿರಾ? ಹೋಮ್‌ ಕಾಂಪೋಸ್ಟಿಂಗ್‌/ಮನೆಗೊಬ್ಬರ ನೀವು ತಿಳಿದಿರುವಿರಾ? ಎಂಬ ಪ್ರಶ್ನೆಗಳಿಗೆ ಹೌದು-ಇಲ್ಲ ಎಂಬ ಉತ್ತರದ ಪೈಕಿ ಒಂದನ್ನು ಆಯ್ಕೆ ಮಾಡಬೇಕು. ಬಳಿಕ ಬಗಂದ ಒಟಿಪಿ ದಾಖಲಿಸಿ ಸಲ್ಲಿಸಿದರಾಯಿತು. (ಸಬ್‌ ಮಿಟ್‌ ಎಂಬ ಆಯ್ಕೆ ಇರುತ್ತದೆ. ಅದನ್ನು ಒತ್ತಬೇಕು). ಉದ್ಯೋಗಿಗಳು, ವಿದ್ಯಾರ್ಥಿಗಳು ಸಹಿತ ಎಲ್ಲ ಸಾರ್ವಜನಿಕರು ಇದರಲ್ಲಿ ಪಾಲ್ಗೊಳ್ಳಬಹುದು.

ಧನಾತ್ಮಕವಾಗಿ  ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ

ದೇಶದ ಇತರ ನಗರಗಳಿಗೆ ಹೋಲಿಸಿದರೆ ಮಂಗಳೂರು ಸ್ವಚ್ಛ ಹಾಗೂ ಸುಂದರವಾಗಿದೆ. ಈ ನಿಟ್ಟಿನಲ್ಲಿ ಈ ಬಾರಿಯ ಸ್ವತ್ಛ ಸರ್ವೇಕ್ಷಣೆ ಸ್ಪರ್ಧೆಯಲ್ಲಿ ನಗರದ ನಾಗರಿಕರು ವಿಶೇಷ ಆದ್ಯತೆಯಿಂದ ತಮ್ಮ ಅಭಿಪ್ರಾಯಗಳನ್ನು ಮೊಬೈಲ್‌ ಮುಖೇನ ದಾಖಲಿಸಬೇಕು. ಧನಾತ್ಮಕವಾಗಿ ಅಭಿಪ್ರಾಯ ನೀಡಿದರೆ ಮಂಗಳೂರಿಗೆ ದೇಶದ ಮಟ್ಟದಲ್ಲಿ ಒಳ್ಳೆ ರ್‍ಯಾಂಕ್‌ ಸಿಗಬಹುದು. -ಅಕ್ಷಯ್‌ ಶ್ರೀಧರ್‌, ಆಯುಕ್ತರು, ಮಂಗಳೂರು ಪಾಲಿಕೆ

 

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಕಾರಿಗೆ ಪೆಟ್ರೋಲ್‌ ಬದಲು ಡೀಸೆಲ್‌ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.