ದ.ಕ.: 316 ಮಂದಿಗೆ ಕೋವಿಡ್ ; ನಾಲ್ಕು ಮಂದಿ ಸಾವು; 607 ಮಂದಿ ಬಿಡುಗಡೆ
Team Udayavani, Oct 10, 2020, 10:55 PM IST
ಸಾಂದರ್ಭಿಕ ಚಿತ್ರ
ಮಂಗಳೂರು: ಜಿಲ್ಲೆಯಲ್ಲಿ ಶನಿವಾರ 316 ಮಂದಿಗೆ ಕೊರೊನಾ ದೃಢಪಟ್ಟಿದೆ. ನಾಲ್ವರು ಸಾವನ್ನಪ್ಪಿದ್ದಾರೆ. 607 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 26,264 ಮಂದಿ ಸೋಂಕಿಗೊಳಗಾಗಿದ್ದು, 21,461ಮಂದಿ ಗುಣಮುಖರಾಗಿದ್ದಾರೆ. ಸದ್ಯ 4,203 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 600 ಮಂದಿ ಇಲ್ಲಿಯವರೆಗೆ ಮೃತಪಟ್ಟಿದ್ದಾರೆ.
ವಿವಿಧ ಗ್ರಾ. ಪಂ. ವ್ಯಾಪ್ತಿ, ವೆನ್ಲಾಕ್, ಲೇಡಿಗೋಶನ್ ಆಸ್ಪತ್ರೆ ಮತ್ತು ಇತರ ಖಾಸಗಿ ಲ್ಯಾಬ್ಗಳಲ್ಲಿ ಶನಿವಾರ 1,328 ರ್ಯಾಟ್ ಮತ್ತು 2,188 ಆರ್ಟಿಪಿಸಿಆರ್ ಪರೀಕ್ಷೆ ಸಹಿತ ಒಟ್ಟು 3,516 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ರ್ಯಾಟ್ ಪರೀಕ್ಷೆಯಲ್ಲಿ 76 ಮಂದಿಗೆ ಕೊರೊನಾ ದೃಢಪಟ್ಟಿದೆ. ಮಾಸ್ಕ್ ಧರಿಸದ 6,221 ಮಂದಿಗೆ ಈವರೆಗೆ ಒಟ್ಟು 7,70,835 ರೂ. ದಂಡ ವಿಧಿಸಲಾಗಿದೆ.
ಉಡುಪಿ ಜಿಲ್ಲೆ: 239 ಪಾಸಿಟಿವ್
ಉಡುಪಿ: ಜಿಲ್ಲೆಯಲ್ಲಿ ಶನಿವಾರ ಓರ್ವ ಮಹಿಳೆ ಮೃತಪಟ್ಟಿದ್ದು 239 ಮಂದಿಗೆ ಪಾಸಿಟಿವ್ ವರದಿಯಾಗಿದೆ.
65 ವರ್ಷ ಪ್ರಾಯದ ಮಹಿಳೆ ಮೃತರಾದವರು. ಅವರಿಗೆ ಕೋವಿಡ್ ದೊಂದಿಗೆ ಇತರ ಆರೋಗ್ಯ ಸಮಸ್ಯೆಗಳಿದ್ದವು. ಇಷ್ಟರವರೆಗೆ 164 ಜನರು ಮೃತಪಟ್ಟಿದ್ದಾರೆ.
ಸೋಂಕಿತರಲ್ಲಿ ರೋಗ ಲಕ್ಷಣವಿರುವ 84 ಪುರುಷರು, 59 ಮಹಿಳೆಯರು, ರೋಗ ಲಕ್ಷಣವಿರದ 43 ಪುರುಷರು, 53 ಮಹಿಳೆಯರು ಇದ್ದಾರೆ. ಇವರಲ್ಲಿ 113 ಮಂದಿ ಉಡುಪಿ ತಾಲೂಕಿನವರು, 86 ಕುಂದಾಪುರ ತಾಲೂಕಿನವರು, 36 ಕಾರ್ಕಳ ತಾಲೂಕಿನವರು, ನಾಲ್ವರು ಹೊರ ಜಿಲ್ಲೆಯವರು. ಇವರಲ್ಲಿ 28 ಜನರನ್ನು ಆಸ್ಪತ್ರೆಗಳಿಗೂ 211 ಜನರನ್ನು ಮನೆಗಳ ಐಸೊಲೇಶನ್ಗೂ ದಾಖಲಿಸಲಾಗಿದೆ.
ಅ. 9ರಂದು 2,078 ಮಾದರಿಗಳನ್ನು ಸಂಗ್ರಹಿಸಲಾಗಿದೆ. 227 ಜನರಿಗೆ ಪಾಸಿಟಿವ್, 1,851 ಜನರಿಗೆ ನೆಗೆಟಿವ್ ಆಗಿದೆ. 224 ಜನರನ್ನು ಆಸ್ಪತ್ರೆ ಮತ್ತು ಮನೆಗಳ ಸೊಲೇಶನ್ನಿಂದ ಬಿಡುಗಡೆಗೊಳಿಸಲಾಗಿದೆ. 1,952 ಸಕ್ರಿಯ ಪ್ರಕರಣಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್