ಕಲಿಕೆಯೊಂದಿಗೆ ಗಳಿಕೆಗೂ ಸೈ ಎಂದ ವಿದ್ಯಾರ್ಥಿಗಳು

ಪೇಪರ್‌ ಬ್ಯಾಗ್‌ ತಯಾರಿಗಿಳಿದ ಕನ್ನಡ ಶಾಲೆ ಪುಟಾಣಿಗಳು

Team Udayavani, Jul 20, 2019, 5:00 AM IST

p-26

ತಾವು ತಯಾರಿಸಿದ ಪೇಪರ್‌ ಬ್ಯಾಗ್‌ಗಳನ್ನು ಪ್ರದರ್ಶಿಸುತ್ತಿರುವ ವಿದ್ಯಾರ್ಥಿಗಳು.

ಮಹಾನಗರ: ವಾರಾಂತ್ಯದ ರಜೆಯಲ್ಲಿ ಈ ಮಕ್ಕಳು ಟಿವಿ, ಮೊಬೈಲ್ ನೋಡುತ್ತಾ ಕಾಲ ಕಳೆಯುವುದಿಲ್ಲ. ಕೈಯಲ್ಲಿ ಪೇಪರ್‌ ಹಿಡಿದು ಬ್ಯಾಗ್‌ ತಯಾರಿಕೆಯಲ್ಲಿ ತೊಡಗುತ್ತಾರೆ. ತಾವೇ ತಯಾರಿಸಿದ ಬ್ಯಾಗ್‌ ಅನ್ನು ಮನೆ ಹತ್ತಿರದ ಅಂಗಡಿಗಳಿಗೆ ನೀಡಿ ಕಲಿಕೆಯೊಂದಿಗೆ ಗಳಿಕೆಯಲ್ಲಿ ನಿರತರಾಗಿದ್ದಾರೆ.

ಪ್ಲಾಸ್ಟಿಕ್‌ ಮುಕ್ತ ಪರಿಸರ ನಿರ್ಮಾಣದ ಸಂಕಲ್ಪ ತೊಟ್ಟಿರುವ ಬೆಂದೂರು ಸೈಂಟ್ ಆ್ಯಗ್ನೆಸ್‌ ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಮಕ್ಕಳು ಪ್ಲಾಸ್ಟಿಕ್‌ ಬದಲು ಪರಿಸರಸ್ನೇಹಿ ಪೇಪರ್‌ ಬ್ಯಾಗ್‌ ತಯಾರಿಕೆಯಲ್ಲಿ ತೊಡಗಿದ್ದಾರೆ. ಶಾಲೆಯ ಹಳೆ ವಿದ್ಯಾರ್ಥಿನಿ ಮಂಗಳಾ ಭಟ್ ಅವರ ಬಳಿ ಸುಮಾರು 60ಕ್ಕೂ ಹೆಚ್ಚು ಮಕ್ಕಳು ಪೇಪರ್‌ ಬ್ಯಾಗ್‌ ತಯಾರಿಕೆ ಬಗ್ಗೆ ತರಬೇತಿ ಪಡೆದುಕೊಂಡಿದ್ದಾರೆ. 4ರಿಂದ 7ನೇ ತರಗತಿಯ ಮಕ್ಕಳು ಪೇಪರ್‌ ಬ್ಯಾಗ್‌ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

200 ರೂ. ಗಳಿಕೆ!
15 ದಿನಗಳಿಂದ ಶಾಲೆಗೆ ರಜೆ ಇರುವ ದಿನಗಳಲ್ಲಿ ಮಕ್ಕಳು ಪೇಪರ್‌ ಬ್ಯಾಗ್‌ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೊದಲು ತಯಾರಿಸಿದ ಬ್ಯಾಗ್‌ನ್ನು ಶಾಲೆಯ ಸುತ್ತಮುತ್ತಲಿರುವ ಅಂಗಡಿ ಗಳಿಗೆ ನೀಡಿದಾಗ ವಿದ್ಯಾರ್ಥಿಗಳಿಗೆ ಅಂಗಡಿಯವರು ಚಾಕೋಲೇಟ್, ಇತರ ಸಿಹಿತಿಂಡಿ ನೀಡಿ ಖುಷಿ ವ್ಯಕ್ತಪಡಿಸಿದ್ದಾರೆ. ಇದರಿಂದ ಪ್ರೇರಣೆಗೊಂಡ ಮಕ್ಕಳು ತಮ್ಮ ಮನೆ ಪರಿಸರದಲ್ಲಿರುವ ಅಂಗಡಿಗಳಿಗೆ ಬ್ಯಾಗ್‌ ತಯಾರಿಸಿ ನೀಡಿದ್ದಾರೆ. ಅಂಗಡಿಯವರು ಸುಮಾರು ಅರ್ಧ ಕೆಜಿ ಬ್ಯಾಗ್‌ಗೆ 200 ರೂ.ಗಳಷ್ಟು ಹಣ ನೀಡಿದ್ದು, ಕಲಿಕೆಯೊಂದಿಗೆ ಗಳಿಕೆಯ ಸಂಭ್ರಮದಲ್ಲಿ ವಿದ್ಯಾರ್ಥಿಗಳಿದ್ದಾರೆ. ಅಂಗಡಿಯವರು ನೇರವಾಗಿ ವಿದ್ಯಾ ರ್ಥಿಗಳ ಬ್ಯಾಂಕ್‌ ಖಾತೆಗೇ ಹಣ ಜಮಾವಣೆ ಮಾಡುವುದರಿಂದ ಹಣ ಉಳಿ ತಾಯಕ್ಕೂ ದಾರಿಯಾಗಿದೆ. ಬಹುತೇಕ ಬಡ ಮನೆಯ ವಿದ್ಯಾರ್ಥಿಗಳೇ ಇಲ್ಲಿ ಕಲಿಯುತ್ತಿರುವುದರಿಂದ ಅವರ ಶೈಕ್ಷಣಿಕ ವೆಚ್ಚಕ್ಕೂ ಇದು ದಾರಿಯಾಗುತ್ತದೆ ಎನ್ನು ತ್ತಾರೆ ಶಾಲೆಯ ಮುಖ್ಯ ಶಿಕ್ಷಕರು.

ವೃತ್ತ ಪತ್ರಿಕೆಗಳ ಎರಡು ಪುಟ ಗಳಲ್ಲಿ ಒಂದು ಬ್ಯಾಗ್‌ನ್ನು ತಯಾರಿ ಮಾಡ ಲಾಗುತ್ತದೆ. ಈ ಬ್ಯಾಗ್‌ ತಯಾರಿಗೆ ಕೇವಲ ಒಂದು ನಿಮಿಷ ಸಾಕು. ಬೇಳೆಕಾಳುಗಳು, ಇತರ ದಿನಸಿ ಸಾಮಗ್ರಿಗಳನ್ನು ಪ್ಲಾಸ್ಟಿಕ್‌ ಬದಲು ಇಂತಹ ಬ್ಯಾಗ್‌ಗಳಲ್ಲಿ ನೀಡಲು ಅಂಗಡಿಯವರಿಗೂ ಸಹಕಾರಿ ಯಾಗುತ್ತದೆ. ವಿದ್ಯಾರ್ಥಿಗಳು ದಪ್ಪನೆಯ ದಾರವನ್ನು ಪೋಣಿಸಿ ಹ್ಯಾಂಡ್‌ ಬ್ಯಾಗ್‌ಗಳನ್ನೂ ತಯಾರಿಸುತ್ತಿರುವುದರಿಂದ ಹೆಚ್ಚು ಉಪಯುಕ್ತವಾಗಿದೆ. ವಿವಿಧ ಗಾತ್ರಗಳ ಬ್ಯಾಗ್‌ಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

-ಪರಿಸರಸ್ನೇಹಿ ಬ್ಯಾಗ್‌
-ಅರ್ಧ ಕೆ. ಜಿ. ಗೆ 200 ರೂ.
-ಸುಲಭ ತಯಾರಿ

ಸಂಪಾದನೆ ಮಾಡಿದ ಖುಷಿ

ಕಳೆದ ವಾರ ತಯಾರಿಸಿದ ಸುಮಾರು ಅರ್ಧ ಕೆಜಿಗೂ ಹೆಚ್ಚು ಬ್ಯಾಗ್‌ಗಳನ್ನು ಮನೆ ಪಕ್ಕದಲ್ಲಿರುವ ಅಂಗಡಿಗೆ ನೀಡಿದೆ. ಅಂಗಡಿಯವರು 200 ರೂ. ನೀಡಿದರು. ಇನ್ನು ಮುಂದೆಯೂ ಬ್ಯಾಗ್‌ ತಯಾರಿಸಿ ಅಂಗಡಿಯವರಿಗೆ ನೀಡುತ್ತೇನೆ. ಅದರಿಂದ ಬಂದ ಹಣವನ್ನು ನನ್ನ ಶಾಲಾ ಖರ್ಚಿಗೆ ಬಳಸಿಕೊಳ್ಳುತ್ತೇನೆ. ನನಗೆ ಸಾಧ್ಯವಾದಷ್ಟು ಹಣ ನಾನು ಸಂಪಾದಿಸಿದರೆ ಹೆತ್ತವರಿಗೂ ಸುಲಭವಾಗಬಹುದು.
– ಕೀರ್ತಿ,ವಿದ್ಯಾರ್ಥಿನಿ
ಪರಿಸರ ಪಾಠದಿಂದ ಪ್ರಯೋಜನ

ಪ್ಲಾಸ್ಟಿಕ್‌ನಿಂದ ಪರಿಸರಕ್ಕಾಗುವ ಹಾನಿಯ ಬಗ್ಗೆ ಮಕ್ಕಳಿಗೆ ಪಾಠದ ಸಮಯದಲ್ಲಿ ಹೇಳುತ್ತಲೇ ಇರುತ್ತೇವೆ. ಎಳೆಯ ಮಕ್ಕಳಿಗೂ ನೀರಿಗಾಗಿ ಸಂಕಷ್ಟ, ಪರಿಸರ ನಾಶದ ಬಗ್ಗೆ ತಿಳುವಳಿಕೆ ಮೂಡುತ್ತಿದೆ. ಅದಕ್ಕಾಗಿ ಪ್ಲಾಸ್ಟಿಕ್‌ ಬದಲಾಗಿ ಪೇಪರ್‌ ಬ್ಯಾಗ್‌ ಬಳಕೆಗಾಗಿ ಮಕ್ಕಳೂ ಮುಂದಾಗುತ್ತಿದ್ದಾರೆ. ಸುಮಾರು 15 ದಿನಗಳಿಂದ ಮಕ್ಕಳು ಬ್ಯಾಗ್‌ ತಯಾರಿಕೆಯಲ್ಲಿ ತೊಡಗಿದ್ದಾರೆ.
– ಸಿ| ಜೋತ್ಸಾ ್ನ,ಮುಖ್ಯ ಶಿಕ್ಷಕಿ ಸಂತ ಆ್ಯಗ್ನೆಸ್‌ ಖಾಸಗಿ ಅ.ಹಿ. ಪ್ರಾ. ಶಾಲೆ

-ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.