ಗುಡುಗು ಸಹಿತ ಭಾರಿ ಮಳೆ : ಚರ್ಚ್ ಗೋಪುರಕ್ಕೆ ಹಾನಿ
Team Udayavani, May 8, 2021, 11:57 AM IST
ಉಳ್ಳಾಲ : ನಿನ್ನೆ ತಡರಾತ್ರಿ ಸುರಿದ ಮಳೆಯೊಂದಿಗೆ ಸಿಡಿಲು ಬಡಿದು ಪಜೀರು ಗ್ರಾಮದ ಹಳೆ ಚರ್ಚ್ ನ ಮುಖ್ಯ ಗೋಪುರಕ್ಕೆ ಹಾನಿಯಾದ ಘಟನೆ ನಡೆದಿದೆ.
ಪಜೀರು ಮರ್ಸಿಯಮ್ಮನವರ ಹಳೇ ಚರ್ಚಿಗೆ ಸಿಡಿಲು ಬಡಿದು ಹಾನಿಯಾಗಿದ್ದು, ಸಿಡಿಲಿನ ಅಬ್ಬರಕ್ಕೆ ಗೋಪುರದ ಮೇಲಿದ್ದ ಶಿಲುಬೆ ಸಹಿತ ಗೋಡೆ ಕುಸಿದ ಪರಿಣಾಮ ಚರ್ಚ್ ನ ಹೆಂಚುಗಳು ಕೆಳಗೆ ಬಿದ್ದು ಹಾನಿಯಾಗಿದೆ.
ನೂತನ ಚರ್ಚ್ ನಿರ್ಮಾಣದ ಬಳಿಕ ಈ ಚರ್ಚ್ ನಲ್ಲಿ ವಾರದ ಪೂಜೆ ಸಾಂಕೇತಿಕವಾಗಿ ನಡೆಯುತ್ತಿದ್ದು, ಮರಣ ಸಂಬಂಧಿ ಪೂಜೆಯನ್ನು ಇಲ್ಲಿ ನಡೆಸಲಾಗುತ್ತಿದೆ. ಚರ್ಚ್ ಧರ್ಮಗುರು ಸಹಿತ ಸಿಬಂದಿಗಳು ಈ ಚರ್ಚ್ ನಲ್ಲಿ ಇರದ ಕಾರಣ ಪ್ರಾಣಹಾನಿ ಸಂಭವಿಸಿಲ್ಲ ಘಟನಾ ಸ್ಥಳಕ್ಕೆ ಪಜೀರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮೇರಿ ಡಿ. ಸೋಜಾ, ಮಾಜಿ ಅಧ್ಯಕ್ಷ ಇಮ್ತಿಯಾಝ, ಫ್ಲೋರಿನ್, ಧರ್ಮಗುರು ಸುನಿಲ್ ವೇಗಸ್, ಚರ್ಚ್ ಪಾಲನಾ ಸಮಿತಿಯ ವಿಕ್ಟರ್ ಡಿ.ಸೋಜ, ರಿಚ್ಚಾರ್ಡ್ ಗ್ರಾಮಚಾವಡಿ, ಜಾನ್ ಮೆಂಡೋನ್ಸಾ, ಪಾವೂರು ಗ್ರಾಮ ಪಂಚಾಯತ್ ಸದಸ್ಯ ವಲೇರಿಯನ್ ಭೇಟಿನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ