ಜಂಕ್ಷನ್ಗಳಲ್ಲಿ ಹೆಚ್ಚುತ್ತಿರುವ ಭಿಕ್ಷಾಟನೆ ; ಸಂಬಂಧಪಟ್ಟ ಎಲ್ಲ ಇಲಾಖೆಗಳ ಮೌನ
Team Udayavani, Feb 8, 2022, 5:37 PM IST
ಮಹಾನಗರ: ಸಾಕ್ಷರತೆಯಲ್ಲಿ ರಾಜ್ಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಮಂಗಳೂರಿನಲ್ಲಿ ಭಿಕ್ಷಾಟನೆ ಹೆಚ್ಚಾಗುತ್ತಿದ್ದು, ಇದು ನಗರಕ್ಕೆ ಕಪ್ಪುಚುಕ್ಕಿಯಂತೆ ಪರಿಣಮಿಸಿದೆ.
ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರುವ ನಗರದ ವಿವಿಧ ಜಂಕ್ಷನ್ಗಳಲ್ಲಿ ಭಿಕ್ಷಾಟನೆ ನಿರತರು ಕಾಣಸಿಗುತ್ತಿದ್ದಾರೆ. ಇದರಲ್ಲಿ ಹೆಚ್ಚಿನ ಮಂದಿ ಹೊರ ರಾಜ್ಯ, ಹೊರ ಜಿಲ್ಲೆಯವರು.
ನಗರದಲ್ಲಿ ವಸ್ತುಗಳ ಮಾರಾಟದ ಹೆಸರಿನಲ್ಲಿಯೂ ಭಿಕ್ಷಾಟನೆ ಹೆಚ್ಚಾಗುತ್ತಿದೆ. ಅದರಲ್ಲೂ ಶಾಲಾ-ಕಾಲೇಜುಗಳಲ್ಲಿ ಕಲಿಯಬೇಕಾದ ವಿದ್ಯಾರ್ಥಿಗಳು ಕೂಡ ಇದರಲ್ಲಿ ತೊಡಗಿಕೊಂಡಿದ್ದಾರೆ. ವಯೋವೃದ್ಧರು, ಕಂಕುಳಲ್ಲಿ ಮಗು ಹಿಡಿದು ವಸ್ತುಗಳ ಮಾರಾಟ ಮಾಡುವ ಮಂದಿ ನಗರದಲ್ಲಿ ಕಾಣಸಿಗುತ್ತಾರೆ. ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮಕ್ಕಳು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಇದಕ್ಕೆ ಸಂಬಂಧಿಸಿದ ವಿವಿಧ ಇಲಾಖೆಗಳೂ ಈ ವಿಚಾರದಲ್ಲಿ ಇನ್ನೂ ಮೌನವಾಗಿರುವುದು ಅವರಿಗೆ ಅನುಕೂಲ ಮಾಡಿಕೊಪಟ್ಟಂತಾಗಿದೆ.
ಮಕ್ಕಳೂ ಭಿಕ್ಷಾಟನೆಯಲ್ಲಿ ತೊಡಗುತ್ತಿದ್ದು, ಕೆಲವು ಕಡೆ ಪುರುಷರು ಮಹಿಳೆಯರ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದಾರೆ. ಇದಕ್ಕೆ ಪಾಲಿಕೆಯಿಂದಲೇ ನಿಯಂತ್ರಣ ಅಗತ್ಯ. ಈ ರೀತಿ ಭಿಕ್ಷೆ ಬೇಡುವವರನ್ನು ನಿರಾಶ್ರಿತರ ಕೇಂದ್ರಕ್ಕೆ ಸೇರಿಸಬೇಕು ಎಂದು ಇತ್ತೀಚೆಗೆ ನಡೆದ ಪಾಲಿಕೆ ಸಭೆಯಲ್ಲಿ ಮನಪಾ ಸದಸ್ಯ ಪ್ರವೀಣ್ ಚಂದ್ರ ಆಳ್ವ ಮನವಿ ಮಾಡಿದ್ದರು. ಸೂಕ್ತ ಕ್ರಮದ ಭರವಸೆಯನ್ನು ಆಯುಕ್ತರು ನೀಡಿದ್ದರು.
ಭಿಕ್ಷಾಟನೆ ನಿಷೇಧ ಕಾಯ್ದೆ ಪ್ರಕಾರ ಮಕ್ಕಳು ಅಥವಾ ಹಿರಿಯರು ಯಾರೇ ಆದರೂ ಭಿಕ್ಷಾಟನೆ ಮಾಡುವುದು ತಪ್ಪು. ಜನರು ಭಿಕ್ಷಾಟನೆಯ ವೃತ್ತಿಯಲ್ಲಿ ತೊಡಗದಂತೆ ಹಾಗೂ ಅವರು ಗೌರವಯುತ ಬದುಕು ನಡೆಸುವಂತೆ ಸರಕಾರ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿವೆ.
ಸಿಗ್ನಲ್ಗಳಲ್ಲಿ ವಸ್ತುಗಳ ಮಾರಾಟ
ನಗರದಲ್ಲಿ ಹೆಚ್ಚಾಗಿ ಪೆನ್ನು, ಟವಲ್, ಮೊಬೈಲ್ ಸ್ಟಾ éಂಡ್ ಸಹಿತ ವಿವಿಧ ವಸ್ತುಗಳನ್ನು ಸಿಗ್ನಲ್ಗಳಲ್ಲಿ ಮಾರಾಟ ಮಾಡುವ ತಂಡ ನಗರದ ವಿವಿಧೆಡೆ ಕಾರ್ಯಾಚರಿಸುತ್ತಿದೆ. ತಂಡದಲ್ಲಿ ಗಂಡು ಮಕ್ಕಳು ಮಾತ್ರವಲ್ಲದೆ, ಹೆಣ್ಣು ಮಕ್ಕಳು, ಯುವತಿಯರು, ಹಿರಿಯರು, ವೃದ್ಧರು ಎಲ್ಲರೂ ಸೇರಿಕೊಂಡಿದ್ದಾರೆ.
ಪ್ರಮುಖವಾಗಿ ನಗರದ ಪಿ.ವಿ.ಎಸ್. ಜಂಕ್ಷನ್, ಲಾಲ್ಬಾಗ್, ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಸ್ಟೇಟ್ಬ್ಯಾಂಕ್, ನಂತೂರು ವೃತ್ತ ಸಹಿತ ವಿವಿಧ ಜಂಕ್ಷನ್ಗಳಲ್ಲಿ ಮಾರಾಟ ಸಾಗುತ್ತಿದೆ.
ಬೆಂಗಳೂರಿನಲ್ಲಿ ಈಗಾಗಲೇ ಆದೇಶ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ಈ ರೀತಿ ಟ್ರಾಫಿಕ್ ಸಿಗ್ನಲ್ಗಳಲ್ಲಿ ಭಿಕ್ಷೆ ಬೇಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿತ್ತು. ಇಂತಹ ಕಾರ್ಯಗಳಿಗೆ ಬ್ರೇಕ್ ನೀಡಲು ಅಲ್ಲಿನ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದರು. ಹಣ ನೀಡಲು ನಿರಾಕರಿಸುವ ವೇಳೆ ವಾಹನ ಸವಾರರ ಜತೆ ಅನುಚಿತ ವರ್ತನೆ ನಡೆಯುತ್ತಿದೆ ಎಂದು ಸಾರ್ವಜನಿಕರು ಪೊಲೀಸರಲ್ಲಿ ಮನವಿ ಮಾಡಿದ್ದರು. ಈ ನಿಟ್ಟಿನಲ್ಲಿ ಆದೇಶ ಹೊರಡಿಸಲಾಗಿತ್ತು.
ಪಾಲಿಕೆ ಜತೆ ಚರ್ಚಿಸಿ ಕ್ರಮ
ನಗರದಲ್ಲಿ ಭಿಕ್ಷುಕರ ಹಾವಳಿ ಹೆಚ್ಚಾಗುತ್ತಿರುವುದು ಗಮನಕ್ಕೆ ಬಂದಿದೆ. ಕೆಲವು ದಿನಗಳ ಹಿಂದೆ ನಗರದ ಜಂಕ್ಷನ್ಗಳು, ಬಸ್ ತಂಗುದಾಣದಲ್ಲಿ ತಂಗಿದ್ದ ಭಿಕ್ಷುಕರನ್ನು ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಲಾಗಿದೆ. ಭಿಕ್ಷುಕರ ನಿಯಂತ್ರಣ ಕುರಿತಂತೆ ಮಹಾನಗರ ಪಾಲಿಕೆ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ನಟರಾಜ್, ಟ್ರಾಫಿಕ್ ಎಸಿಪಿ ಮಂಗಳೂರು
ಚೈಲ್ಡ್ ಲೈನ್ ಗಮನಕ್ಕೆ ತನ್ನಿ
ನಂತೂರು, ಲಾಲ್ಬಾಗ್, ಹಂಪನಕಟ್ಟೆ ಸಹಿತ ಸುತ್ತಮುತ್ತ ಭಿಕ್ಷೆ ಬೇಡುತ್ತಿದ್ದ ಮಕ್ಕಳನ್ನು ಕೆಲವು ದಿನಗಳ ಹಿಂದೆ ರಕ್ಷಿಸಲಾಗಿತ್ತು. ಮುಂದಿನ ದಿನಗಳಲ್ಲಿ ನಗರದಲ್ಲಿ ಮಕ್ಕಳು ಭಿಕ್ಷೆ ಬೇಡುತ್ತಿದ್ದರೆ ಸಾರ್ವಜನಿಕರು ಚೈಲ್ಡ್ ಲೈನ್ (1098)ಗಮನಕ್ಕೆ ತರಬಹುದು.
-ದೀಕ್ಷಿತ್ ಅಚ್ರಪ್ಪಾಡಿ,
ಚೈಲ್ಡ್ ಲೈನ್ ಕೇಂದ್ರ ಸಂಯೋಜಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ