ಜೆಇಇ ಮೈನ್ಸ್: ಅನಿರುದ್ಧ ಸಾಧನೆ
Team Udayavani, Jan 21, 2019, 1:30 AM IST
ಪಣಂಬೂರು: ರಾಷ್ಟ್ರ ಮಟ್ಟದ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಮಂಗಳೂರಿನ ಶ್ರೀ ಚೈತನ್ಯ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅನಿರುದ್ಧ ಮುನ್ನಾರ್ ಕೃಷ್ಣ ಶೇ. 99.81 ಅಂಕ ಗಳಿಸಿದ್ದಾರೆ.
ಅನಿರುದ್ಧ ಅವರು ಯುಎಸ್ಎಯಲ್ಲಿ ಉದ್ಯೋಗಿಗಳಾಗಿರುವ ಅಚಲ್ ಮುನ್ನಾರ್ ಕೃಷ್ಣ ಮತ್ತು ಸ್ನೇಹಪ್ರಭಾ ಅಚಲ್ ದಂಪತಿಯ ಪುತ್ರ.
ನಾನು ಕಂಪ್ಯೂಟರ್ ಸೈನ್ಸ್ನಲ್ಲಿ ಎಂಜಿನಿಯರಿಂಗ್ ಮಾಡುವ ಆಸಕ್ತಿ ಹೊಂದಿದ್ದು, ಎನ್ಐಟಿಕೆ ಅಥವಾ ಐಐಟಿಯಲ್ಲಿ ಕಲಿಯುವ ಇಚ್ಛೆ ಹೊಂದಿದ್ದೇನೆ. ಶಿಕ್ಷಕರ, ಪೋಷಕರ ಪ್ರೋತ್ಸಾಹದಿಂದ ನಾನು ಪ್ರತಿನಿತ್ಯ ನಿಯಮಿತವಾಗಿ ಅಭ್ಯಾಸ ಮಾಡುತ್ತಾ ಈ ಸಾಧನೆ ಮಾಡಿದ್ದೇನೆ ಎಂದು ಅನಿರುದ್ಧ ತಿಳಿಸಿದ್ದಾರೆ.