ಮೂಲಸೌಕರ್ಯಗಳಿಲ್ಲದೆ ಸಂಕಷ್ಟ

ಜ್ಯೋತಿ ನಗರವೆಂಬ ಕಿಷ್ಕಿಂದೆ ಅನಾರೋಗ್ಯಕರ ವಾತಾವರಣದಲ್ಲಿ ಬದುಕು!

Team Udayavani, Apr 19, 2022, 12:54 PM IST

infrastructure

ಕಾವೂರು: ವಲಸೆ ಕಾರ್ಮಿಕ ರಾಗಿ ಬಂದವರು ಗುಡ್ಡದ ಮೇಲೊಂದು ಜೋಪಡಿಯ ಮಾಡಿ ಎಂಬಂತೆ, ಕಾಲಕ್ರಮವಾಗಿ ಜೋಪಡಿಗಳು ಇದ್ದ ಲ್ಲಿಯೇ ಕಲ್ಲು ಸಿಮೆಂಟು, ತಗಡು ಶೀಟಿನಿಂದ ಮನೆ ಮಾಡಿ ಕುಳಿತವರಿಗೆ ಇದೀಗ ಮೂಲಸೌಕರ್ಯ ಕಲ್ಪಿಸುವುದು ಸವಾಲಿನ ವಿಷಯವಾಗಿದೆ. ಹಾಗಾಗಿ ಅನಾರೋಗ್ಯಕರ ವಾತಾವರಣದಲ್ಲಿ ಅವರು ವಾಸಿಸುವಂತಾಗಿದೆ. ಜ್ಯೋತಿ ನಗರವೆಂಬ ಬೆಟ್ಟದಂತಹ ಇಳಿಜಾರಿನ ಸರಕಾರಿ ಜಾಗದಲ್ಲಿ ಒಂದಕ್ಕೊಂದು ಅಂಟಿಕೊಂಡಂತೆ ಮನೆ ನಿರ್ಮಿಸಿ ಹಲವಾರು ವರ್ಷಗಳಿಂದ ಜೀವನ ನಡೆಸುತ್ತಿದ್ದಾರೆ. ವಾಸಿಸುವವರ ಸಂಖ್ಯೆ ಏರುತ್ತಿದ್ದಂತೆ ಒಳಚರಂಡಿ, ದಾರಿ ಸರಿಯಾಗಿ ಇಲ್ಲದಿರುವುದು ಪ್ರಮುಖ ವಾಗಿ ಇಲ್ಲಿನ ಸಮಸ್ಯೆಯಾಗಿ ಕಾಡತೊಡಗಿತು.

ರಸ್ತೆ ಚರಂಡಿಗೆ ವ್ಯತ್ಯಸವಿಲ್ಲದಂತೆ ಹರಿಯುವ ನೀರು, ಸರಿಯಾಗಿ ಬೆಳಕು ಇಲ್ಲದ ಕಡೆ ಮನೆಗಳು, ರಾಶಿ ಕಸ, ತೆರೆದ ಮೋರಿ, ಕೊಳಚೆ ನೀರು ಅಲಲ್ಲಿ ನಿಂತ ಕಾರಣ ದುರ್ವಾಸನೆ, ಜತೆಗೆ ಸೊಳ್ಳೆಗಳು ಹೆಚ್ಚಿವೆ. ರೋಗಗಳು ಹರಡುವ ಭೀತಿ ನಡುವೆ ಜ್ವರ, ಶೀತ ಸಾಮಾನ್ಯ. ಬಡಾವ ಣೆಗೆ ಕಾಲಿಟ್ಟರೆ ಇಲ್ಲಿ ಜನ ವಸತಿ ಸಾಧ್ಯವೇ ಎಂಬ ಅನುಮಾನ ಬಾರದೇ ಇರದು.

ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸಿದರೂ ಏರು ಪ್ರದೇಶದಲ್ಲಿ ಪ್ರಶರ್‌ ಕೊರತೆಯಿಂದ ಕೆಲವೆಡೆ ನೀರು ತಲುಪುವುದಿಲ್ಲ. ಬಡಾವಣೆ ತಲುಪಲು ಅಗಲ ಕಿರಿದಾದ ರಸ್ತೆ. ಸತತ ಮಾಹಿತಿ, ಜಾಗೃತಿಯಿಂದ ಸದ್ಯ ಬಯಲು ಶೌಚಾಲಯದ ಸಮಸ್ಯೆ ಇಲ್ಲ. ಆದರೆ ಸರಿಯಾಗಿ ಜಾಗವಿಲ್ಲದ ಪರಿಣಾಮ, ಕೆಲವರಿಗೆ ಬಟ್ಟೆ ಒಗೆಯುವುದು, ಪಾತ್ರೆ ತೊಳೆಯಲು ರಸ್ತೆಯೇ ಆಧಾರ. ಇದರ ನೀರು ರಸ್ತೆಯಲ್ಲಿ ಹರಿದು ಅರೆ ಬರೆಯಾಗಿರುವ ಚರಂಡಿ ಸೇರುತ್ತದೆ. ಹರಿವ ಕೊಳಚೆ ನೀರು, ರಸ್ತೆ ಬದಿಯಲ್ಲೇ ಅಳಿದುಳಿದ ಆಹಾರ ಎಸೆಯುವ ಕಾರಣ ಬಡಾವಣೆ ಸುತ್ತ ಬೀದಿ ನಾಯಿಗಳ ಕಾಟ ಹೆಚ್ಚಿದೆ. ಇಷ್ಟೆಲ್ಲ ಅವಾಂತರಗಳ ನಡುವೆ ಇಲ್ಲಿನ ನಿವಾಸಿಗಳು ಸಂಕಷ್ಟದ ಜೀವನ ಸಾಗುತ್ತಿದೆ.

ಈ ಬಡಾವಣೆಯಲ್ಲಿ 75ಕ್ಕೂ ಅಧಿಕ ಮನೆಗಳಲ್ಲಿ ಬಡವರ್ಗದವರು ವಾಸ ಮಾಡುತ್ತಿದ್ದಾರೆ. ಇದ್ದ ಹಾಗೆಯೇ ಮನೆಗಳು ಕೈಯಿಂದ ಕೈಗೆ ಬದಲವಾಣೆ ಆಗುತ್ತಲೇ ಇವೆ. ಇಲ್ಲಿನವರಿಗೆ ಮೂಲಸೌಕರ್ಯ ಒದಗಿಸದಿದ್ದರೂ ಹಕ್ಕು ಪತ್ರ, ಮತದಾನದ ಹಕ್ಕನ್ನು ನೀಡಲಾಗಿದೆ.

ಮೂಲ ಸೌಕರ್ಯ ಒದಗಿಸಲು ನಮಗೂ ಮನಸ್ಸಿದೆ, ಅನುದಾನವನ್ನು ಶಾಸಕರು ನೀಡಿದ್ದಾರೆ. ಆದರೆ ಅದನ್ನು ನೀಡುವುದು ಹೇಗೆ ಎಂಬುದೇ ಇಲ್ಲಿನ ಸಮಸ್ಯೆ. ಕಾರಣ ಜಾಗದ ಕೊರತೆ, ಚರಂಡಿ ನಿರ್ಮಾಣಕ್ಕೆ ತಾಂತ್ರಿಕ ಅಡಚಣೆ ಹೀಗೆ ನೂರಾರು ಅಡ್ಡಿಗಳಿವೆ. ಅದರೂ ನಮ್ಮಿಂದಾದಷ್ಟು ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎನ್ನುತ್ತಾರೆ ಇಲ್ಲಿನ ಮನಪಾ ಸದಸ್ಯ ಶರತ್‌ ಕುಮಾರ್‌.

-ಲಕ್ಷ್ಮೀನಾರಾಯಣ ರಾವ್‌

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.