ಮಂಗಳೂರು-ಮೈಸೂರು ವಿಮಾನಯಾನ ಆರಂಭ
Team Udayavani, Dec 12, 2020, 1:18 AM IST
"ವಾಟರ್ ಸೆಲ್ಯೂಟ್' ಮೂಲಕ ಸ್ವಾಗತ ಕೋರಲಾಯಿತು.
ಮಂಗಳೂರು: ಕೇಂದ್ರದ ಮಹತ್ವದ ಉಡಾನ್ ಪರಿಕಲ್ಪನೆ ಯಡಿ ಮಂಗಳೂರು-ಮೈಸೂರು ನಡುವೆ ಸಂಪರ್ಕ ಕಲ್ಪಿಸುವ ಅಲಯನ್ಸ್ ಏರ್ ಸಂಸ್ಥೆಯ ಹೊಸ ವಿಮಾನಯಾನ ಸೇವೆ ಶುಕ್ರವಾರದಿಂದ ಆರಂಭವಾಗಿದೆ. ವಾರದಲ್ಲಿ ಬುಧವಾರ, ಶುಕ್ರವಾರ, ಶನಿವಾರ ಮತ್ತು ರವಿವಾರ ಈ ವಿಮಾನ ಸೇವೆ ಲಭ್ಯವಿರುತ್ತದೆ.
ಶುಕ್ರವಾರ ಬೆಳಗ್ಗೆ 10.42ಕ್ಕೆ ಮೈಸೂರಿನಿಂದ ಹೊರಟ ಮೊದಲ ವಿಮಾನವು 11.22ಕ್ಕೆ ಮಂಗಳೂರಿನಲ್ಲಿ ಬಂದಿಳಿದಿದೆ. ವಿಮಾನ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ “ವಾಟರ್ ಸೆಲ್ಯೂಟ್’ ಮೂಲಕ ಸ್ವಾಗತ ಕೋರಲಾಯಿತು.
ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ.ರಾವ್, ಅದಾನಿ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಬಳಿಕ ವಿಮಾನ ನಿಲ್ದಾಣದಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಿಸಲಾಯಿತು.
ಮೈಸೂರಿನಿಂದ ಒಟ್ಟು 25 ಪ್ರಯಾಣಿಕರು ಮಂಗಳೂರಿಗೆ ಆಗಮಿಸಿದ್ದು, ಅಪರಾಹ್ನ 12.55ಕ್ಕೆ ಮಂಗಳೂರಿನಿಂದ ಹೊರಟ ವಿಮಾನದಲ್ಲಿ 31 ಮಂದಿ ಪ್ರಯಾಣಿಕರು ಪ್ರಯಾಣಿಸಿದ್ದರು.
ಡಿ.24ರಿಂದ ಗೋ ಏರ್
ಅಹಮ್ಮದಾಬಾದ್, ಬೆಂಗಳೂರು ಹಾಗೂ ಮುಂಬಯಿ ಮಧ್ಯೆ ಗೋ ಏರ್ ನೂತನ ವಿಮಾನ ಸೇವೆ ಡಿ.24ರಿಂದ ಆರಂಭವಾಗುವ ಸಾಧ್ಯತೆಯಿದೆ.
2 ಅಂಚೆ ಲಕೋಟೆ ಬಿಡುಗಡೆ
ವಿಮಾನ ಸೇವೆ ಆರಂಭವಾದ ಸವಿ ನೆನಪಿಗೆ ಅಂಚೆ ವಿಭಾಗದಿಂದ ಎರಡು ವಿಶೇಷ ಅಂಚೆ ಲಕೋಟೆಯನ್ನು ವಿಮಾನ ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.
ಈ ವಿಶೇಷ ಅಂಚೆ ಲಕೋಟೆಗೆ ವಿಮಾನ ಹೊತ್ತ ಅಂಚೆ ಲಕೋಟೆ ಎಂದು ಹೆಸರಿಸಲಾಗಿದೆ. ಈ ಅಂಚೆ ಲಕೋಟೆಯಲ್ಲಿ ಮಂಗಳೂರನ್ನು ಪ್ರತಿನಿಧಿಸುವ ಮುಟ್ಟಾಳೆ, ನೀರುದೋಸೆ,ಯಕ್ಷಗಾನ ಕಲಾವಿದನ ಚಿತ್ರಗಳು ಹಾಗೂ ಮೈಸೂರನ್ನು ಪ್ರತಿಧಿಸುವ ಮೈಸೂರು ಪೇಟಾ, ಮೈಸೂರು ಪಾಕ್, ಡೊಳ್ಳುಕುಣಿತ ಚಿತ್ರಗಳಿವೆ. ಬಿಡುಗಡೆ ಸಮಾರಂಭದಲ್ಲಿ ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ, ಮಂಗಳೂರು ವಿಮಾನ ನಿಲ್ದಾಣದ ಹಿರಿಯ ಅಧಿಕಾರಿ ಅಶೊತೋಷ್ ಚಂದ್ರ, ಆ್ಯರ್ ಎಲಯನ್ಸ್ ಸಿಇಒ ಹರ್ಪ್ರೀತ್ ಸಿಂಗ್, ಏರ್ ಇಂಡಿಯಾ ಲಿ. ಸ್ಟೇಷನ್ ಮ್ಯಾನೇಜರ್ ಪ್ರದೀಪ್ ಮೆನನ್, ಮಂಗಳೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕ ಶ್ರೀನಾಥ್ ಎನ್.ಬಿ. ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು