ಕೊಂಕಣಿ ಲೋಕೋತ್ಸವ: ಚಪ್ಪರ ಮುಹೂರ್ತ
Team Udayavani, Feb 9, 2017, 3:45 AM IST
ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಫೆ. 10, 11 ಮತ್ತು 12ರಂದು ಪುರಭವನದಲ್ಲಿ ನಡೆಯಲಿರುವ ಕೊಂಕಣಿ ಲೋಕೋತ್ಸವದ ಚಪ್ಪರ ಮುಹೂರ್ತ ಬುಧವಾರ ಪುರ ಭವನದ ಆವರಣದಲ್ಲಿ ನಡೆಯಿತು.
ಅಕಾಡೆಮಿಯ ಅಧ್ಯಕ್ಷ ರೋಯ್ ಕ್ಯಾಸ್ತಲಿನೊ ಅವರು ಕೊಂಕಣಿ ಧ್ವಜಾರೋಹಣ ನೆರವೇರಿಸಿ ಸಾಂಕೇತಿಕವಾಗಿ ಚಪ್ಪರ ಮುಹೂರ್ತ ಮತ್ತು ಲೋಕೋತ್ಸವಕ್ಕೆ ಚಾಲನೆ ನೀಡಿದರು. ಭರದ ಸಿದ್ಧತೆ ಈ ಸಂದರ್ಭ ಮಾತನಾಡಿದ ಅವರು, 3 ದಿನಗಳ ಕೊಂಕಣಿ ಲೋಕೋತ್ಸವಕ್ಕೆ ಸಿದ್ಧತೆಗಳು ಭರದಿಂದ ನಡೆದಿದ್ದು, ಬಹುತೇಕ ಅಂತಿಮ ಹಂತದಲ್ಲಿವೆ. ಚಪ್ಪರದಲ್ಲಿ ಕೊಂಕಣಿ ಸಾಹಿತ್ಯ ಮತ್ತು
ಸಂಸ್ಕೃತಿಗೆ ಸಂಬಂಧಿಸಿದ 50ಕ್ಕೂ ಮಿಕ್ಕಿ ಮಳಿಗೆಗಳು ಸ್ಥಾಪನೆ ಯಾಗಲಿದ್ದು, ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಎಡ ಬದಿ ಪ್ರಾಚ್ಯ ವಸ್ತುಗಳಪ್ರದರ್ಶನ ಮತ್ತು ಬಲ ಬದಿಯಲ್ಲಿ ಊಟೋಪ ಹಾರದ ಚಪ್ಪರ ಇರುತ್ತದೆ ಎಂದರು.
ಅಕಾಡೆಮಿಯ ರಿಜಿಸ್ಟ್ರಾರ್ ಡಾ| ಬಿ. ದೇವದಾಸ್ ಪೈ, ಸದಸ್ಯ ಲಾರೆನ್ಸ್ ಡಿ’ಸೋಜಾ, ವಿವಿಧ ಸಮಿತಿ ಸಂಚಾ ಲಕರು/ ಸಹ ಸಂಚಾಲಕ ರಾದ ಎರಿಕ್ ಒಝಾರಿಯೊ, ಐರಿನ್ ರೆಬೆಲ್ಲೊ, ಸಂತೋಷ್ ಶೆಣೈ, ಜೇಮ್ಸ್ ಡಿ’ಸೋಜಾ, ಗೀತಾ ಸಿ.ಕಿಣಿ, ನವೀನ್ ಬೊ, ಇ. ಫೆರ್ನಾಂಡಿಸ್, ಲುವಿ ಜೆ. ಪಿಂಟೊ, ವಿಕ್ಟರ್ ಮಥಾಯಸ್, ಜಾಕ್ಸನ್ ಎರಿಕ್ ಡಿ’ಕೋಸ್ತಾ, ರತ್ನಾಕರ ಕುಡ್ವಾ, ನಿರಂಜನ ರಾವ್, ವಿದ್ಯಾ ಕಾಮತ್, ಡಾ| ವಿಜಯಲಕ್ಷ್ಮೀ ನಾಯ್ಕ, ಸುರೇಶ್ ಶೆಣೈ ಉಪಸ್ಥಿತರಿದ್ದರು. ವಿಕ್ಟರ್ ಮಥಾಯಸ್ ಅವರು ಸ್ವಾಗತಿಸಿ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ