ಆದಿತ್ಯರಾವ್ ತಿಂಗಳಾನುಗಟ್ಟಲೆ ಬಾಂಬ್ ತಯಾರಿಕೆಯ ಬಗ್ಗೆ ಅಧ್ಯಯನ ಮಾಡಿದ್ದ: ಡಾ. ಹರ್ಷ
Team Udayavani, Jan 23, 2020, 12:34 PM IST
ಮಂಗಳೂರು: ಆದಿತ್ಯ ರಾವ್ ಸುಧಾರಿತ ಸ್ಪೋಟಕ ತಯಾರು ಮಾಡಲು ತಿಂಗಳಾನುಗಟ್ಟಲೆ ಅಧ್ಯಯನ ಮಾಡಿದ್ದು, ಆ ಬಳಿಕ ಎಲ್ಲಾ ಮಾದರಿಯ ರಾಸಾಯನಿಕಗಳನ್ನು ತರಿಸಿದ್ದಾನೆ. ಇದಕ್ಕಾಗಿ ತನ್ನ ಇಂಜಿನಿಯರಿಂಗ್ ಕೌಶಲ್ಯವನ್ನು ಬಳಕೆ ಮಾಡಿಕೋಂಡಿದ್ದಾನೆಂದು ಮಂಗಳೂರು ಪೊಲೀಸ್ ಕಮೀಷನರ್ ಡಾ. ಹರ್ಷ ತಿಳಿಸಿದ್ದಾರೆ.
ಮಂಗಳೂರು ಬಾಂಬರ್ ಆದಿತ್ಯ ರಾವ್ ಪ್ರಕರಣ ಕುರಿತು ಅವರು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ದೇಶದ ಆಂತರಿಕ ಭದ್ರತೆಗೆ ಆತಂಕ ತಂದ ಆರೋಪಿಯ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆತನ ಜೊತೆ ಯಾರೂ ಇರಲಿಲ್ಲ, ಒಬ್ಬನೇ ಕೃತ್ಯ ಎಸಗಿದ್ದಾನೆಂದು ಸದ್ಯಕ್ಕೆ ತನಿಖೆಯಲ್ಲಿ ತಿಳಿದುಬಂದಿದೆ. ಇಂಜಿನಿಯರಿಂಗ್ ಓದಿರುವುದರಿಂದ ಒಬ್ಬನೇ ಕೆಲಸ ಮಾಡಿದ್ದು, ಇದಕ್ಕಾಗಿ ಜಸ್ಟ್ ಡಯಲ್, ಯುಟ್ಯೂಬ್ ಮೂಲಕ ಎಲ್ಲಾ ಮಾಹಿತಿ ಪಡೆದಿದ್ದಾನೆ ಎಂದು ಹೇಳಿದರು.
ಮಂಗಳೂರಿನ ಹೊಟೇಲ್ ನಲ್ಲಿ ಕೆಲಸಕ್ಕಿದ್ದ ವೇಳೆ ಆನ್ ಲೈನ್ ಮೂಲಕ ಸ್ಪೋಟಕ ತಯಾರಿಕೆಗೆ ಅಗತ್ಯವಾದ ಎಲ್ಲಾ ರಾಸಾಯನಿಕಗಳನ್ನು ತರಿಸುತ್ತಿದ್ದ. ವಾರದ ರಜೆಯ ಸಂದರ್ಭದಲ್ಲಿ ಬಾಂಬ್ ತಯಾರಿಕಾ ಕೆಲಸ ಮಾಡಿ ತದನಂತರ ಮಾಡಿ ಕಾರ್ಕಳಕ್ಕೆ ಶಿಫ್ಟ್ ಆಗಿದ್ದನು. ಆ ಬಳಿಕ ಕಾರ್ಕಳದಿಂದ- ಮಂಗಳೂರಿಗೆ ಬಂದು ಬಾಂಬ್ ಫಿಕ್ಸ್ ಮಾಡಿ ಕೂಡಲೇ ಶಿರಸಿ, ಶಿವಮೊಗ್ಗ ಮೂಲಕ ಬೆಂಗಳೂರಿಗೆ ಬಸ್ ನಲ್ಲಿ ಪರಾರಿಯಾಗಿ ಕೊನೆಗೆ ಶರಣಾಗಿದ್ದಾನೆ ಎಂದು ಅವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ