ಮಂಗಳೂರು ಮಹಾನಗರ ಪಾಲಿಕೆ: ಹೊಸ ಎಂಜಿನಿಯರ್ಗಳ ತಂಡ; ವಾರ್ಡ್ವಾರು ಕಾರ್ಯಭಾರ ಇಳಿಕೆ
Team Udayavani, Sep 17, 2020, 4:03 AM IST
ಮಹಾನಗರ: ಮನಪಾ ಎಂಜಿನಿಯರಿಂಗ್ ವಿಭಾಗಕ್ಕೆ ಅಗತ್ಯವಿದ್ದ ಎಂಜಿನಿಯರ್ಗಳನ್ನು ನಿಯೋ ಜಿಸಿದ್ದು, ಇದರಿಂದಾಗಿ ಕೊರತೆ ನೀಗಿದಂತಾಗಿದೆ. ಹಾಗಾಗಿ, ಸದ್ಯಕ್ಕೆ ಪಾಲಿಕೆ ವ್ಯಾಪ್ತಿಯಲ್ಲಿ ಎಂಜಿನಿಯರ್ಗಳ ಮೇಲಿನ ವಾರ್ಡ್ ವಾರು ಕಾರ್ಯಭಾರ ಕಡಿಮೆಯಾಗಲಿದೆ.
ಈ ಹಿಂದೆ ಒಬ್ಬೊಬ್ಬ ಎಂಜಿನಿಯರ್ಗಳಿಗೂ ಸುಮಾರು 10 ವಾರ್ಡ್ಗಳ ಜವಾ ಬ್ದಾರಿ ಇರುತ್ತಿತ್ತು. ಇದೀಗ ಹೊಸಬರ ನಿಯೋಜನೆಯಿಂದಾಗಿ ಪ್ರತಿಯೋರ್ವ ಎಂಜಿನಿಯರ್ಗೆ 3ರಿಂದ 4 ವಾರ್ಡ್ಗಳ ಜವಾಬ್ದಾರಿ ಮಾತ್ರ ದೊರೆಯಲಿದೆ. ಇದು ತ್ವರಿತ, ಸಮರ್ಪಕ ಕಾಮಗಾರಿ ಅನುಷ್ಠಾನಕ್ಕೆ ಪೂರಕವಾಗಲಿದೆ.
ಹೊಸಬರ ಸಾಥ್
ಪಾಲಿಕೆಯ ಒಟ್ಟು 60 ಕಾರ್ಪೊರೇಟರ್ಗಳ ಪೈಕಿ 40 ಮಂದಿ ಕಾರ್ಪೊರೇಟರ್ಗಳು ಮೊದಲ ಬಾರಿಗೆ ಆಯ್ಕೆ ಯಾದವರು. ಬಿಜೆಪಿಯ ಒಟ್ಟು 44 ಮಂದಿ ಕಾರ್ಪೊರೇಟರ್ಗಳಲ್ಲಿ 34 ಮಂದಿ, ಕಾಂಗ್ರೆಸ್ನ 14 ಕಾರ್ಪೊರೇಟರ್ಗಳ ಪೈಕಿ 4 ಮಂದಿ, ಎಸ್ಡಿಪಿಐನ ಇಬ್ಬರೂ ಕೂಡ ಹೊಸಬರು. ಅಂದರೆ ಪಾಲಿಕೆಯಲ್ಲಿ ಈಗ ಶೇ.66ರಷ್ಟು ಮಂದಿ ಹೊಸ ಕಾರ್ಪೊರೇಟರ್ಗಳು. ಎಂಜಿನಿಯರಿಂಗ್ ವಿಭಾಗದಲ್ಲಿರುವ ಒಟ್ಟು ಎಂಜಿನಿಯರ್ಗಳ ಪೈಕಿ ಸುಮಾರು ಶೇ. 60ಕ್ಕೂ ಅಧಿಕ ಮಂದಿ ಯುವ ಎಂಜಿನಿಯರ್ಗಳಿದ್ದಾರೆ. ಈ ಹೊಸ ಎಂಜಿನಿಯರ್ಗಳಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗಲಿದೆ.
ಕಾಮಗಾರಿಗಳಿಗೆ ವೇಗ
ಸರಕಾರವು ಪಾಲಿಕೆಗೆ ಅಗತ್ಯವಾಗಿದ್ದ ಎಂಜಿನಿಯರ್ಗಳನ್ನು ಒದಗಿಸಿ ಕೊಟ್ಟಿದೆ. ಇದರಿಂದ ವಿವಿಧ ಕಾಮಗಾರಿಗಳು ಸಮರ್ಪಕಾಗಿ, ತ್ವರಿತವಾಗಿ ಪೂರ್ಣಗೊಳ್ಳಲು ಅನುಕೂಲವಾಗಲಿದೆ. ಹಿಂದೆ ಒಬ್ಬೊ ಬ್ಬರು ಎಂಜಿನಿಯರ್ಗಳಿಗೆ 10 ವಾರ್ಡ್ಗಳ ಜವಾಬ್ದಾರಿ ಬರುತ್ತಿತ್ತು. ಈಗ ಹೊಸ ಎಂಜಿನಿಯರ್ಗಳ ನಿಯೋಜನೆಯಿಂದಾಗಿ ಒಬ್ಬೊಬ್ಬರಿಗೆ 3ರಿಂದ 5 ವಾರ್ಡ್ಗಳ ಜವಾಬ್ದಾರಿ ದೊರೆಯಲಿದೆ.
-ದಿವಾಕರ ಪಾಂಡೇಶ್ವರ, ಮೇಯರ್, ಮಹಾನಗರ ಪಾಲಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ