ನೆಟ್ವರ್ಕ್ ಸಮಸ್ಯೆ: ಅಟಲ್ಜೀ ಜನಸ್ನೇಹಿ ಕೇಂದ್ರದಲ್ಲಿ ಸೇವೆ ಮಂದಗತಿ
Team Udayavani, Aug 4, 2019, 5:00 AM IST
ಕೈಕಂಬ: ಗುರುಪುರ ನಾಡ ಕಚೇರಿಯಲ್ಲಿ ನೆಟ್ವರ್ಕ್ನಲ್ಲಿನ ಸಮಸ್ಯೆಯಿಂದಾಗಿ ಅಟಲ್ಜೀ ಜನಸ್ನೇಹಿ ಕೇಂದ್ರದಲ್ಲಿ ತೊಂದರೆಯಾಗಿದೆ.ಕಳೆದೆರಡು ದಿನಗಳಿಂದ ಈ ಸಮಸ್ಯೆ ಕಂಡು ಬಂದಿದ್ದು ನಾಡ ಕಚೇರಿಯಲ್ಲಿ ಬಂದ ಗ್ರಾಮಸ್ಥರಿಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿ ದ್ದು ಸಿಬಂದಿಗಳು ಹರಸಾಹಸ ಪಟ್ಟು ಸೇವೆ ನೀಡುವ ಸ್ಥಿತಿ ನಿರ್ಮಾಣವಾಗಿದೆ.
13 ಗ್ರಾ. ಪಂ.ನ 26 ಗ್ರಾಮ ಗಳನ್ನೊಳ ಗೊಂಡ ಮತ್ತು ಮಂಗಳೂರು ಮಹಾ ನಗರ ಪಾಲಿಕೆಯ 3ವಾರ್ಡ್, ಗುರುಪುರ ನಾಡ ಕಚೇರಿಯಲ್ಲಿ ಜನರು ಕಾದು ನಿಂತ ದೃಶ್ಯಗಳು ಕಂಡು ಬಂದವು. ನಾಡಕಚೇರಿಯಲ್ಲಿ ಕೆಎಸ್ಡಬ್ಯೂಎಎನ್ ಯೋಜನೆಯಲ್ಲಿ ಬಿಎಸ್ಎನ್ಎಲ್ ಹೈಸ್ಪಿಡ್ ನೆಟ್ವರ್ಕ್ನಲ್ಲಿ ಅಟಲ್ ಜನಸ್ನೇಹಿ ಸೇವೆಗಳಾದ ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ವೃದ್ಯಾಪ್ಯ, ಸಂಧ್ಯಾ ಸುರಕ್ಷಾ,ವಿಧವಾ ಮುಂತಾದ ವೇತನಗಳು, ಕೃಷಿ ಕುಟುಂಬದ ದೃಢೀಕರಣ ಪತ್ರಪಹಣಿ ಪತ್ರಿಕೆ, ಜನನ ಹಾಗೂ ಮರಣ ಪ್ರಮಾಣ ಪತ್ರ ಮುಂತಾದವುಗಳ ಬಗ್ಗೆ ಸೇವೆ ನೀಡಲಾಗುತ್ತಿದ್ದು ಈಗ ತೊಂದರೆಯಾಗಿದೆ. ಈ ಸಮಸ್ಯೆ ಎಲ್ಲ ನಾಡಕಚೇರಿಯಲ್ಲಿ ಕಾಣಿಸಿಕೊಂಡ ಕಾರಣ ನೆಟ್ವರ್ಕ್ ಜತೆಗೆ ಸೈಟ್ ನಲ್ಲಿ ಸಮಸ್ಯೆ ಬಂದ ಕಾರಣ ಈ ಸೇವೆ ನೀಡಲು ತೊಂದರೆಯಾಗಿದೆ.
ಸೋಮವಾರದೊಳಗೆ ಸಮಸ್ಯೆ ಪರಿಹಾರ
ನೆಟ್ವರ್ಕ್ನಲ್ಲಿ ಸಮಸ್ಯೆಯಿಂದಾಗಿ ಅಟಲ್ಜೀ ಜನಸ್ನೇಹಿ ಸೇವೆಗಳು ನೀಡಲು ತೊಂದರೆಯಾಗಿವೆ ಆದರೂ ನಿಧಾನಗತಿಯಲ್ಲಿ ಸೇವೆ ನೀಡಲಾ ಗುತ್ತಿದೆ.ಈಗಾಗಲೇ ಈ ಬಗ್ಗೆ ತಿಳಿಸಲಾಗಿದೆ.ಸೋಮ ವಾ ರದಂದು ಈ ಸಮಸ್ಯೆ ಪರಿಹಾರ ವಾಗಲಿದೆ ಎಂದು ನಾಡಕಚೇರಿಯ ಉಪತಹಶೀಲ್ದಾರ ಶಿವಪ್ರಸಾದ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
ಮತದಾರರ ಚೀಟಿಯಲ್ಲಿ ಕ್ಯುಆರ್ ಕೋಡ್! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ
Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ