ಕೋವಿಡ್ ಕರ್ತವ್ಯದ ಮಧ್ಯೆ ನೋಟಿಸ್‌ ಜಾರಿ ಗುಮ್ಮ!

ಪಿಡಿಒಗಳ ಹೆಗಲಿಗೆ ಹಲವು ಇಲಾಖೆಗಳ ಜವಾಬ್ದಾರಿ

Team Udayavani, Jul 7, 2020, 8:26 AM IST

ಕೋವಿಡ್ ಕರ್ತವ್ಯದ ಮಧ್ಯೆ ನೋಟಿಸ್‌ ಜಾರಿ ಗುಮ್ಮ!

ಸಾಂದರ್ಭಿಕ ಚಿತ್ರ

ಮಂಗಳೂರು: ಕೋವಿಡ್ ಸಂಕಷ್ಟದ ನಡುವೆಯೂ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯತ್‌ಗಳ ಕೆಲವು ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳ ವಿರುದ್ಧ ವಿವಿಧ ಕಾರಣಗಳಿಗೆ ಇಲಾಖೆಗಳಿಂದ ನೋಟಿಸ್‌ ಜಾರಿ ಮಾಡುತ್ತಿರುವುದು ಅಸಮಾಧಾನದ ಜತೆಗೆ ಆತಂಕಕ್ಕೆ ಕಾರಣವಾಗಿದೆ.

ಕೋವಿಡ್ ಕರ್ತವ್ಯದ ಜತೆಗೆ ಪಂಚಾಯತ್‌ರಾಜ್‌ ಇಲಾಖೆಗಳ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸುತ್ತಿರುವ ಸಂದರ್ಭದಲ್ಲಿ ಸರಕಾರದ ಅನ್ಯ ಇಲಾಖೆಗಳು ಕೂಡ ಪಿಡಿಒಗಳಿಗೆ ಹೆಚ್ಚುವರಿ ಕಾರ್ಯಗಳನ್ನು ವಹಿಸಿವೆ. ಇದು ನಿಗದಿತ ಸಮಯದಲ್ಲಿ ಆಗದಿದ್ದರೆ ಮೇಲಿಂದ ಮೇಲೆ ನೋಟಿಸ್‌ ನೀಡಲಾಗುತ್ತಿದೆ ಎನ್ನುತ್ತಾರೆ ಕೆಲವು ಪಿಡಿಒಗಳು. ಸಾರ್ವಜನಿಕರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುವ ಸಂದರ್ಭ ಲೋಪಗಳಾದರೆ ಸಂಬಂಧಪಟ್ಟವರಿಗೆ ನೋಟಿಸ್‌ ನೀಡುವುದು ಅನಿವಾರ್ಯ ಕ್ರಮ ಎನ್ನುತ್ತಾರೆ ಉನ್ನತ ಮಟ್ಟದ ಅಧಿಕಾರಿಗಳು.

“ಜಲಜೀವನ್‌ ಮಿಷನ್‌’ ಯೋಜನೆಯಡಿ ದಾಖಲಾತಿ ಮಾಡದಿರುವ ಹಿನ್ನೆಲೆಯಲ್ಲಿ ಕೆಲವು ಪಿಡಿಒಗಳಿಗೆ ನೋಟಿಸ್‌ ಜಾರಿಯಾಗಿದೆ. ಇದರ ಲಾಗಿನ್‌ ವ್ಯವಸ್ಥೆ ನೀರು ಮತ್ತು ನೈರ್ಮಲ್ಯ ಇಲಾಖೆಯಡಿಯಲ್ಲಿ ಇರುವುದು. ತಾಂತ್ರಿಕ ಕಾರಣಗಳಿಂದ ನಮಗೆ ಲಾಗಿನ್‌ ಸಾಧ್ಯವಾಗದ್ದರಿಂದ ದಾಖಲಾತಿ ಮಾಡಲಾಗಿಲ್ಲ. ಅದಕ್ಕೂ ನಮಗೆ ನೋಟಿಸ್‌ ನೀಡಲಾಗಿದೆ ಎಂಬುದು ಪಿಡಿಒಗಳ ಆರೋಪ. ನದಿ ತೀರ ಮರಳಿನ ಜವಾಬ್ದಾರಿಯೂ ಇದೀಗ ಪಿಡಿಒ ಹೆಗಲಿಗೆ ಬಂದಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದ ಕಾರ್ಯವನ್ನು ಪಿಡಿಒಗಳು ಮಾಡಬೇಕಾಗುತ್ತದೆ. ಆ ಇಲಾಖೆಯಿಂದಲೂ ಕೆಲವರಿಗೆ ನೋಟಿಸ್‌ ಬಂದಿದೆ. ನರೇಗಾ ಯೋಜನೆಯಡಿ ಮಾಸಿಕ ಗುರಿ ಸಾಧಿಸದ ಬಗ್ಗೆಯೂ ಕೆಲವು ಪಿಡಿಒಗಳಿಗೆ ನೋಟಿಸ್‌ ಬಂದಿದೆ. ಬೇಡಿಕೆ ಆಧಾರಿತ ಯೋಜನೆ ಇದಾಗಿದ್ದರೂ ಟಾರ್ಗೆಟ್‌ ರೀಚ್‌ ಮಾಡಬೇಕು ಎಂಬ ಕಾರಣ ನೀಡಿ ಒತ್ತಡವೂ ಇದೆ ಎನ್ನುವುದು ಹೆಸರು ಹೇಳಲಿಚ್ಛಿಸದ ಪಿಡಿಒಗಳ ಅಭಿಪ್ರಾಯ.

ಮದುವೆ, ಉತ್ತರಕ್ರಿಯೆ ಲೆಕ್ಕವೂ ಪಿಡಿಒಗಳಿಗೆ!
ಗ್ರಾಮೀಣ ಭಾಗದಲ್ಲಿ ಕ್ವಾರಂಟೈನ್‌ನಲ್ಲಿರುವವರ ಫೋಟೋ ತೆಗೆದು ಆ್ಯಪ್‌ನಲ್ಲಿ ಹಾಕುವ ಜವಾಬ್ದಾರಿಯನ್ನು ಪಿಡಿಒಗಳಿಗೆ ನೀಡಲಾಗಿದೆ. ಒಂದೆರಡು ಜನರ ಫೋಟೋ ಬಿಟ್ಟು ಹೋಗಿದ್ದಕ್ಕೂ ಕೆಲವು ಪಿಡಿಒಗಳಿಗೆ ನೋಟಿಸ್‌ ಬಂದಿದೆ. ಕಂದಾಯ ಇಲಾಖೆಯ ಸುಪರ್ದಿಯಲ್ಲಿ ಆ್ಯಪ್‌ ಇದ್ದರೂ ನೋಟಿಸ್‌ ಮಾತ್ರ ಪಿಡಿಒಗಳಿಗೆ. ಕ್ವಾರಂಟೈನ್‌ನಲ್ಲಿದ್ದವರಿಗೆ ವಸತಿ, ಊಟದ ಜತೆಗೆ ಮದುವೆ, ಉತ್ತರಕ್ರಿಯೆಗಳಿಗೆ ಹೋಗಿ ಭಾಗವಹಿಸಿರುವವರ ತಲೆ ಎಣಿಸುವ ಕೆಲಸವೂ ಇವರದೇ; ಲೋಪವಾದರೆ ನೋಟಿಸ್‌ ಖಚಿತ!

ಪಿಡಿಒಗಳಿಗೆ ಒತ್ತಡ
ಗ್ರಾ.ಪಂ. ಬಲಪಡಿಸುವ ಸದುದ್ದೇಶದಿಂದ ಪಿಡಿಒಗಳಿಗೆ ನಿಗದಿತ ಕಾರ್ಯಗಳ ಜತೆಗೆ ಅನ್ಯ ಇಲಾಖೆಗಳ ಹಲವು ಜವಾಬ್ದಾರಿಯನ್ನು ನೀಡಿದ್ದು, ಒತ್ತಡ ಅಧಿಕವಾಗಿದೆ. ಕೊರೊನಾ ಆತಂಕದ ಮಧ್ಯೆ ಕೆಲಸ ಮಾಡುತ್ತಿರುವ ಪಿಡಿಒಗಳನ್ನು “ಕೊರೊನಾ ವಾರಿಯರ್ಸ್‌’ನಲ್ಲಿ ಸೇರಿಸದಿರುವುದು ಬೇಸರದ ವಿಚಾರ.
– ನಾಗೇಶ್‌, ದ.ಕ. ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ

ಜನಹಿತ ಮುಖ್ಯ
ಕೋವಿಡ್ ಮಧ್ಯೆಯೂ ಪಿಡಿಒಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನರ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡುವಾಗ ಒತ್ತಡ ಸಾಮಾನ್ಯ. ಕೊರೊನಾ ಸಮಯದಲ್ಲಿ ಗ್ರಾಮೀಣ ಜನರಿಗೆ ಸರಕಾರದ ಸೌಕರ್ಯಗಳನ್ನು ಪೂರ್ಣಮಟ್ಟದಲ್ಲಿ ಒದಗಿಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡುವುದು ಅನಿವಾರ್ಯ.
– ಡಾ| ಆರ್‌. ಸೆಲ್ವಮಣಿ, ದ.ಕ. ಜಿ.ಪಂ. ಸಿಇಒ

ಟಾಪ್ ನ್ಯೂಸ್

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqwqe

Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

6-court

Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

1-eqewqe

JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.