ʼನಮ್ಮ ಕೈತೋಟ ನಮ್ಮ ಆಹಾರ’ ಸರಣಿಗೆ ಇಂದು ಚಾಲನೆ
ಉದಯವಾಣಿ-ಸಾವಯವ ಕೃಷಿಕ ಗ್ರಾಹಕ ಬಳಗ; ಸಾವಯವ ಕೃಷಿ ಸ್ವಾವಲಂಭನೆಯ ಖುಷಿ
Team Udayavani, Aug 16, 2022, 12:02 PM IST
ಮಹಾನಗರ: ಉದಯವಾಣಿ ಹಾಗೂ ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗ ವತಿಯಿಂದ ಸಾವಯವ ಕೃಷಿ-ಸ್ವಾವಲಂಬನೆಯ ಖುಷಿ ಎಂಬ ವಿಶಿಷ್ಟ ಸರಣಿ ತರಬೇತಿ ಕಾರ್ಯಕ್ರಮಕ್ಕೆ ಆ. 16ರಂದು ಚಾಲನೆ ಸಿಗಲಿದೆ.
ನಗರದಲ್ಲೂ ಕೈತೋಟವನ್ನು ಸುಂದರವಾಗಿ ಬೆಳೆಸಿ, ಸಾವಯವ ವಿಧಾನದಲ್ಲಿ ಹಣ್ಣು, ತರಕಾರಿಯನ್ನು ಬೆಳೆದು ನಮ್ಮ ಅನ್ನದ ಬಟ್ಟಲನ್ನು ವಿಷಮುಕ್ತವಾಗಿಸಬಹುದು ಎಂಬ ಯೋಚನೆಯೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮೊದಲ ಕಾರ್ಯಕ್ರಮ ಆ. 16ರಂದು ಅಪ ರಾಹ್ನ ಶಾರದಾ ಕಾಲೇಜಿನ ಧ್ಯಾನ ಮಂದಿರದಲ್ಲಿ ಶಾರದಾ ಕಾಲೇಜಿನ ಸಹಯೋಗದೊಂದಿಗೆ ನಡೆಯುತ್ತಿದೆ. ಅ ಪ ರಾಹ್ನ 3.30ಕ್ಕೆ ಕಾರ್ಯಕ್ರಮವನ್ನು ಮೇಯರ್ ಪ್ರೇಮಾನಂದ ಶೆಟ್ಟಿ ಉದ್ಘಾಟಿಸಲಿದ್ದಾರೆ. ರಾಮಕೃಷ್ಣ ಮಿಷನ್ನ ಏಕ ಗಮ್ಯಾನಂದಜೀ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಅಧ್ಯಕ್ಷತೆ ವಹಿಸುವರು. ಇದೇ ವೇಳೆ ಸಾವಯವ ಕೃಷಿಕ ಗ್ರಾಹಕ ಬಳಗದವರು ಹೊರತಂದ, ಕೈತೋಟ ಕೈಪಿಡಿ ಎಂಬ ಕಿರುಹೊತ್ತಗೆಯನ್ನೂ ಬಿಡುಗಡೆ ಗೊಳಿಸಲಾಗುವುದು.
ಸಾವಯವ ಕೃಷಿಕ, ತಜ್ಞ ಹರಿಕೃಷ್ಣ ಕಾಮತ್ ಅವರು ಸಾವಯವ ಆಹಾರ, ಕೈತೋಟದ ಬಗ್ಗೆ ಮತ್ತು ದಾಕ್ಷಾಯಿಣಿ ವಿಶ್ವೇಶ್ವರ ಭಟ್ ಅವರು ನಗರದಲ್ಲಿ ಅಲಂಕಾರಿಕ ಗಿಡಗಳನ್ನು ಬೆಳೆಸುವ ಬಗ್ಗೆ ತರಬೇತಿ ನೀಡಲಿದ್ದಾರೆ.
ಈ ಸರಣಿ ಮಾಹಿತಿ ತರಬೇತಿ ಕಾರ್ಯ ಕ್ರಮವು ಮುಂದೆ ಶಾಲಾ ಕಾಲೇಜು, ಬಡಾವಣೆ, ಅಪಾರ್ಟ್ಮೆಂಟ್, ಯುವಕ ಮಂಡಲ ಮುಂತಾದೆಡೆ ಹಮ್ಮಿಕೊಳ್ಳಲಾಗುತ್ತದೆ. ಸಾವಯವ ಕೃಷಿಕ ಗ್ರಾಹಕ ಬಳಗದಿಂದ ಈ ತರಬೇತಿ ನೀಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
MUST WATCH
ಹೊಸ ಸೇರ್ಪಡೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ