ಮಂಗಳೂರು: ಸ್ವಿಫ್ಟ್ ಕಾರು ಸಹಿತ ನಾಲ್ವರು ಗೋ ಕಳ್ಳರ ಬಂಧನ
Team Udayavani, May 2, 2022, 6:46 PM IST
ಮಂಗಳೂರು: ಪಣಂಬೂರು ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 25 ರಂದು ವರದಿಯಾಗಿದ್ದ ದನಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಕಾರು ಸಹಿತ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಕೆಳಗಿನ ತೊಕೂರು ಎಂಬಲ್ಲಿ ಮಹಾಬಲ ಪೂಜಾರಿ ಎಂಬುವರ ಮನೆಯ ದನದ ಕೊಟ್ಟಿಗೆಯಿಂದ 3 ದನಗಳನ್ನು ಕಳ್ಳತನ ಮಾಡಿದ್ದರು ಎಂದು ದೂರು ದಾಖಲಾಗಿತ್ತು.
ಬಂಧಿತ ಆರೋಪಿಗಳು ಮಹಮ್ಮದ್ ಇಸ್ಮಾಯಿಲ್, ಸಮೀರ್ ಜೋಕಟ್ಟೆ ದಾವೂದ್ ಹಕೀಂ ಮತ್ತು ಮಹಮ್ಮದ್ ಇಲ್ಯಾಸ್ ಜೋಕಟ್ಟೆ ಎನ್ನುವವರಾಗಿದ್ದಾರೆ.
ಪಣಂಬೂರು ಪೊಲೀಸರ ತಂಡ ಪತ್ತೆ ಮಾಡಿ ಆರೋಪಿಗಳಿಂದ ದನಗಳನ್ನು ಸಾಗಾಟ ಮಾಡಲು ಬಳಿಸಿದ ರೂ 3 ಲಕ್ಷ ರೂ ಮೌಲ್ಯದ ಸ್ವಿಫ್ಟ್ ಕಾರನ್ನು ಮತ್ತು ದನಗಳನ್ನು ವಧೆ ಮಾಡಿ ಮಾಂಸ ಮಾಡಲು ಬಳಿಸಿದ ಆಯುಧಗಳನ್ನು ವಶ ಪಡಿಸಿಕೊಂಡಿರುತ್ತಾರೆ .
ಆರೋಪಿಗಳೆಲ್ಲರೂ ಸೇರಿ ದನಗಳನ್ನು ಕಳ್ಳತನ ಮಾಡಿ , ಸಾಗಾಟ ಮಾಡಿರುವುಲ್ಲದೆ ವಧೆ ಮಾಡಿ ಮಾಂಸ ಮಾಡಿರುತ್ತಾರೆ ಎಂದು ಪ್ರಕರಣದ ತನಿಖೆಯಿಂದ ತಿಳಿದುಬಂದಿದೆ . ಆರೋಪಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ