ಪೆರ್ಮುದೆ: ಸಂಭ್ರಮದ ಹೋಳಿ ಆಚರಣೆ

ಪೆರ್ಮುದೆ: Permoode , ಸಂಭ್ರಮದ ಹೋಳಿ ಆಚರಣೆ, Holi Celebration -

Team Udayavani, Mar 30, 2019, 2:27 PM IST

30-March-5

ದೇವರ ಮೂರ್ತಿಯನ್ನು ವಾದ್ಯ, ಚೆಂಡೆ, ವಿವಿಧ ವೇಷಗಳೊಂದಿಗೆ ರಾಮ ಗುರಿಕಾರರ ಮನೆಗೆ ಮೆರವಣಿಗೆಯಲ್ಲಿ ತರಲಾಯಿತು.

ಕುಡುಬಿ ಜನಾಂಗದ ಸಂಸ್ಕೃತಿ, ಕಲೆ ಉಳಿಸುವ ಪರ್ವ ಬಜಪೆ : ಸಂಸ್ಕೃತಿ, ಪರಂಪರೆ, ಭಾಷೆ, ಕಲೆ ಉಳಿಸುವ ಪರ್ವ ಹೋಳಿ ಸಂಭ್ರಮವನ್ನು ಪೆರ್ಮುದೆ ಕುಡುಬಿ ಸಮಾಜದ ರಾಮಗುರಿಕಾರರ ಮನೆಯಲ್ಲಿ 9 ದಿನಗಳ ಕಾಲ ಆಚರಿಸಲಾಗುತ್ತದೆ.
ಶುಕ್ರವಾರ ಮಧ್ಯಾಹ್ನ ರಾಯಭಾರಿ ಹೊನ್ನಯ್ಯ ಗೌಡರ ಮನೆಯಿಂದ ಮಲ್ಲಿಕಾರ್ಜುನ ದೇವರ ಮೂರ್ತಿಯನ್ನು ವಾದ್ಯ, ಚೆಂಡೆ, ವಿವಿಧ ವೇಷಗಳೊಂದಿಗೆ ರಾಮ ಗುರಿಕಾರರ ಮನೆಗೆ ಮೆರವಣಿಗೆಯಲ್ಲಿ ತರಲಾಯಿತು. ಗುರಿಕಾರರ ಮನೆಯಲ್ಲಿ ಗುಮ್ಮಟೆ ಹಾಗೂ ಕೋಲಾಟ ಹಾಗೂ ವಿವಿಧ ವೇಷಗಳ ನೃತ್ಯ, ಚಿಕ್ಕ ಬಾಲಕರ ಯಕ್ಷಗಾನ ನೃತ್ಯ ಮೊದಲಾದ ವಿವಿಧ ವಿನೋಧವಾಳಿಗಳು ಶನಿವಾರ ಮುಂಜಾನೆಯ ತನಕ ನಡೆಯಲಿದೆ.
ಕೊನೆಯಲ್ಲಿ ಕುಡುಬಿ ಕೊಂಕಣಿ ಪದ್ಯದಲ್ಲಿ ಕೋಲಾಟದಲ್ಲಿಯೇ ಸೇತುಕಟ್ಟಿ ರಾವಣನ ಸಂಹಾರ ಮಾಡಿ ಸೀತೆಯನ್ನು ಕರೆದುಕೊಂಡು ಬರುವ ಪ್ರಕ್ರಿಯೆ ಇಲ್ಲಿ ನಡೆಯುತ್ತದೆ. ಆ ಬಳಿಕ ಎಲ್ಲರೂ ಹಾಕಿದ ಬಟ್ಟೆ ತೆಗೆದು ಬೆಂಕಿಗೆ ಹಾಕಿ ಸ್ನಾನ ಮಾಡಿ ಬರುತ್ತಾರೆ. ಇದು ಸೀತೆಯ ಪವಿತ್ರತೆಯ ಬಗ್ಗೆ ಹೇಳಲಾಗುತ್ತದೆ. ಇಲ್ಲಿಗೆ ಹೋಳಿ ಹಬ್ಬ ಸಂಪನ್ನಗೊಳ್ಳುತ್ತದೆ. ಜಿಲ್ಲೆಯಲ್ಲಿ ಮಿಜಾರು, ಎಡಪದವು, ಕೊಂಪದವು, ಮುಚ್ಚಾರು, ಬಜಪೆ, ಪೆರ್ಮುದೆ, ಎಕ್ಕಾರು, ಪುತ್ತಿಗೆ, ಕಡಂದಲೆ, ಸಿದ್ದಕಟ್ಟೆ, ಕೊಣಾಜೆ, ಕುತ್ತಾರಿನಲ್ಲಿ ಹೆಚ್ಚಾಗಿ ಕುಡುಬಿ ಸಮಾಜದವರನ್ನು ಕಾಣಬಹುದು.
ಶಿವರಾತ್ರಿ ದಿನ ಶುರುವಾಗುತ್ತದೆ ಹೋಳಿಗೆ ಪೂರ್ವ ತಯಾರಿ
ಒಂದು ವಾರ್ಡ್‌ಗೆ ಒಬ್ಬ ಗುರಿಕಾರ, ಒಬ್ಬ ರಾಯಭಾರಿ, 5 ಮಂದಿ ಮನೆತನದ ಮುಖ್ಯಸ್ಥರು ಇರುತ್ತಾರೆ. ಶಿವರಾತ್ರಿಯ ದಿನ ಗುರಿಕಾರನ ಮನೆಯಲ್ಲಿ ಈ 5 ಮಂದಿ ಸಮಾಜದ ಮನೆತನದ ಮುಖ್ಯಸ್ಥರಿಗೆ ಗುಮ್ಮಟೆಯನ್ನು ನೀಡಿ ಮಾರ್ಯಾದೆ ನೀಡಲಾಗುತ್ತದೆ. ಅದೇ ದಿನ ಹೋಳಿ ಶುರುವಾಗುತ್ತದೆ. ಅಂದಿನಿಂದ ಹುಣ್ಣಮೆ ತನಕ ಗುರಿಕಾರನ ಮನೆಯಲ್ಲಿ ಹಬ್ಬದ ಪೂರ್ವ ತಯಾರಿ ನಡೆಯುತ್ತದೆ.
ಮನೆಮನೆಯಲ್ಲಿ ಹೋಳಿ ಆಚರಣೆ
ಹುಣ್ಣಿಮೆ ದಿನದಿಂದ ಸಂಜೆಯ ವೇಳೆ ಮನೆಮನೆಗೆ ತೆರಳಿ ಗುಮ್ಮಟೆಯನ್ನು ಬಾರಿಸಿ ಹೋಳಿ ಆಚರಿಸುತ್ತಾರೆ. ಮನೆಮನೆಯಲ್ಲಿ ಇವರಿಗೆ ಬೆಲ್ಲ, ತೆಂಗಿನಕಾಯಿಯನ್ನು ಕೊಡುವ ಕ್ರಮ ಇದೆ.  ಅದೇ ದಿನ ಗುರಿಕಾರ ಮನೆಯಲ್ಲಿ ಹೋಳಿಯ ಹಬ್ಬ ಆಚರಣೆ ಬಗ್ಗೆ ದಿನ ನಿಗದಿ ಆಗುತ್ತದೆ. ಹುಣ್ಣಿಮೆಯಿಂದ ವಿವಿಧ ಕಡೆಗಳಲ್ಲಿ 3, 5, 7, 9 ಬೆಸ ಸಂಖ್ಯೆಯಲ್ಲಿ ಹೋಳಿಯ ದಿನ ಆಚರಣೆ ನಿಗದಿ ಮಾಡಲಾಗುತ್ತದೆ. ಸೀತೆ ಯನ್ನು ತಯಾರಿಯ ದ್ಯೋತಕವಾಗಿ 18 ವರ್ಷದ ಕೆಳಗಿನ ಹುಡುಗನನ್ನು ಸೀತೆಯನ್ನಾಗಿ ನೇಮಕ ಮಾಡಲಾಗುತ್ತದೆ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.