ಬಿಗಿ ಭದ್ರತೆಯೊಂದಿಗೆ ಚುನಾವಣೆಗೆ ಸಕಲ ಸಿದ್ಧತೆ
Team Udayavani, May 29, 2019, 6:00 AM IST
ಮೂಡುಬಿದಿರೆ ಬಸ್ ನಿಲ್ದಾಣ ಸಮೀಪವಿರುವ ಶಾಲೆಯಲ್ಲಿ ಮತದಾನಕ್ಕೆ ಮಂಗಳವಾರ ಸಿದ್ಧತೆ ಕಾರ್ಯ ನಡೆಯಿತು.
ಮೂಡುಬಿದಿರೆ: ಪುರಸಭೆಯ 23 ವಾರ್ಡ್ಗಳಿಗೆ ಬುಧವಾರ ನಡೆಯಲಿರುವ ಚುನಾವಣೆಗೆ ಸಕಲ ಸಿದ್ಧತೆಗಳಾಗಿವೆ. ಪ್ರಾಂತ್ಯ, ಮಾರ್ಪಾಡಿ, ಕರಿಂಜೆ, ಮಾರೂರು, ಕಲ್ಲಬೆಟ್ಟು ಹೀಗೆ ಐದು ಗ್ರಾಮಗಳಲ್ಲಿರುವ 23 ವಾರ್ಡ್ಗಳಲ್ಲಿ ಪುರುಷರು 12,038, ಮಹಿಳೆಯರು 13,024 ಹೀಗೆ ಒಟ್ಟು 25,068 ಮತದಾರರಿದ್ದಾರೆ. ವಾರ್ಡ್ಗಳಿಗೊಂದು ಬೂತ್ ಇದ್ದು ಹೆಚ್ಚಿನ ಕಡೆಗಳಲ್ಲಿ ಸರದಿ ಸಾಲಿನಲ್ಲಿ ಬರುವ ಮತದಾರರಿಗಾಗಿ ಶ್ಯಾಮಿಯಾನ ವ್ಯವಸ್ಥೆಗೊಳಿಸಲಾಗಿದೆ. ಇವುಗಳಲ್ಲಿ 6 ಸೂಕ್ಷ್ಮ, 5 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಿ ಅದಕ್ಕೆ ಪೂರಕ ವ್ಯವಸ್ಥೆ ಮಾಡಲಾಗಿದೆ.
ಒಟ್ಟು 46 ಪೊಲೀಸರು ಹಾಗೂ 15ಕ್ಕೂ ಅಧಿಕ ಹೋಮ್ ಗಾರ್ಡ್ಗಳನ್ನು ನಿಯೋಜಿಸಲಾಗಿದೆ. 120 ಮಂದಿ ಚುನಾವಣಾ ಸಿಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲ ಬೂತ್ಗಳಲ್ಲಿ ಸಿಬಂದಿಗೆ ಕುಡಿಯುವ ನೀರು ಮತ್ತಿತರ ಆವಶ್ಯಕ ಸೌಕರ್ಯಗಳನ್ನು ವ್ಯವಸ್ಥೆಗಳನ್ನು ಒದಗಿಸಲಾಗಿದ್ದು, ಮಂಗಳವಾರ ರಾತ್ರಿ ಊಟದಿಂದ ತೊಡಗಿ ಬುಧವಾರ ರಾತ್ರಿ ಊಟದವರೆಗೆ ಊಟೋಪಚಾರ ಪುರಸಭಾ ವತಿಯಿಂದ ಮಾಡಲಾಗಿದೆ.
23 ವಾರ್ಡ್ಗಳಲ್ಲಿ ಒಟ್ಟು 77 ಮಂದಿ ಉಮೇದ್ವಾರರಿದ್ದಾರೆ. ಬಿಜೆಪಿಯಿಂದ ಎಲ್ಲ 23, ಕಾಂಗ್ರೆಸ್ನಿಂದ 22, ಬಿಎಸ್ಪಿಯಿಂದ 14, ಜೆಡಿಎಸ್ನಿಂದ 8, ಎಸ್ಡಿಪಿಐ ಹಾಗೂ ಸಿಪಿಎಂ ನಿಂದ ತಲಾ 3 ಮಂದಿ ತಂತಮ್ಮ ಪಕ್ಷಗಳ ಚಿಹ್ನೆಯೊಂದಿಗೆ , 4 ಮಂದಿ ಪಕ್ಷೇತರರು ತಮಗೆ ನೀಡಲಾದ ಚಿಹ್ನೆಯೊಂದಿಗೆ ಸ್ಪರ್ಧಿಸುತ್ತಿದ್ದಾರೆ.
ವಾರ್ಡ್ 1ರಿಂದ 11 ವರೆಗೆ ಚುನಾವ ಣಾಧಿಕಾರಿಗಳಾಗಿ ಮಂಗಳೂರು ಡಿಡಿಪಿಐ ಕಚೇರಿಯ ಜ್ಞಾನೇಶ್, ಸಹಾಯಕ ಚುನಾವಣಾಧಿಕಾರಿಯಾಗಿ ಮೂಡುಬಿದಿರೆ ಬಿಇಒ ಕಚೇರಿಯ ಶಿವಾನಂದ ಕಾಯ್ಕಿಣಿ, ವಾರ್ಡ್ 12ರಿಂದ 23ರ ವರೆಗೆ ಚುನಾವಣಾಧಿಕಾರಿಯಾಗಿ ಮೂಡುಬಿದಿರೆ ಬಿಇಒ ಕಚೇರಿಯ ಮನೋಹರ ಕಾಮತ್, ಸಹಾಯಕ ಚುನಾವಣಾಧಿಕಾರಿಯಾಗಿ ಸುನಿಲ್ ಕುಮಾರ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು