ಸಸಿಹಿತ್ಲುವಿನಲ್ಲಿ ತಕ್ಕಮಟ್ಟಿಗೆ ಶಾಂತವಾದ ಕಡಲು: ಆತಂಕದಲ್ಲಿರುವ ಸ್ಥಳೀಯರು
Team Udayavani, May 16, 2021, 11:05 AM IST
ಹಳೆಯಂಗಡಿ: ತೌಖ್ತೇ ಚಂಡಮಾ ರುತದ ಪರಿಣಾಮವಾಗಿ ಶನಿವಾರ ಅಬ್ಬರಿಸಿದ್ದ ಇಲ್ಲಿನ ಸಸಿಹಿತ್ಲುವಿನ ಕಡಲ ತೀರವು ರವಿವಾರ ಬೆಳಿಗ್ಗೆ ತಕ್ಕಮಟ್ಟಿಗೆ ಶಾಂತವಾಗಿದ್ದು, ಅದಾಗ್ಯೂ ಯಾವುದೇ ಕ್ಷಣದಲ್ಲಿಯೂ ರೌದ್ರಾವತಾರ ತಾಳುವ ಆತಂಕವನ್ನು ಸ್ಥಳೀಯರು ಹೊಂದಿದ್ದಾರೆ.
ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು ಅದು ವಿಸ್ತಾರಗೊಂಡಲ್ಲಿ ಮತ್ತೆ ಅಪಾಯವಿದೆ, ಶನಿವಾರ ಸುಮಾರು 11ರಿಂದ ಮುಂಜಾನೆ 2ರವರೆಗೆ ಬಲವಾದ ಗಾಳಿಯಿತ್ತು, ಅಲೆಗಳು ದಡಕ್ಕೆ ಭೀಕರವಾಗಿ ಅಪ್ಪಳಿಸಿತ್ತು ಹತ್ತಾರು ಮನೆಗಳ ಅಂಗಳದವರೆಗೆ ನೀರು ಹರಿದಿದೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಥಳೀಯ ನಿವಾಸಿಗಳು “ಉದಯವಾಣಿ”ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ದೇಶದಲ್ಲಿಂದು 3,11,170 ಕೋವಿಡ್ ಪಾಸಿಟಿವ್, 3,62,437 ಮಂದಿ ಡಿಸ್ಚಾರ್ಜ್
ಶನಿವಾರ ಶಾಸಕ ಉಮಾನಾಥ ಕೋಟ್ಯಾನ್ ಅವರು ಸ್ಥಳಕ್ಕೆ ಭೇಟಿ ನೀಡಿ, ಕಡಲ ತೀರದಲ್ಲಿರುವ ಎಲ್ಲಾ 72 ಮನೆಗಳ ನಿವಾಸಿಗಳನ್ನು ಎನ್ ಐಟಿಕೆಗೆ ರವಾನಿಸಲು ಸೂಚನೆ ನೀಡಿದ್ದರು, ಆದರೆ ತಮ್ಮ ಮನೆಯನ್ನು ಬಿಡಲು ಒಪ್ಪದೆ ಕೊನೆಗೆ ಮನವೊಲಿಸಿ ಅತಿ ಹೆಚ್ಚು ಅಪಾಯವಿರುವ ಸುಮಾರು 7 ಮನೆಗಳ ಸದಸ್ಯರನ್ನು ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದ ಸಭಾಂಗಣದಲ್ಲಿ ಆಶ್ರಯ ನೀಡಿ ರಾತ್ರಿಯ ಊಟ ಹಾಗೂ ಬೆಳಿಗ್ಗೆ ಫಲಾಹಾರವನ್ನು ನೀಡಿ ಸತ್ಕರಿಸಲಾಗಿದೆ. ಹಳೆಯಂಗಡಿ ಗ್ರಾಮ ಪಂಚಾಯತ್ನ ಸದಸ್ಯರು, ಗ್ರಾಮಸ್ಥರು ವಿಶೇಷ ಸಹಕಾರ ನೀಡಿದ್ದಾರೆ.
ಇದನ್ನೂ ಓದಿ: ‘ತೌಕ್ತೆ’ ಅಬ್ಬರ : ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸಿಎಂ ಬಿ.ಎಸ್. ವೈ ಸೂಚನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್