ಸಾಗರ್ ಕವಚ ಕಾರ್ಯಾಚರಣೆ ಮುಕ್ತಾಯ
Team Udayavani, Nov 8, 2019, 7:50 PM IST
ಮಹಾನಗರ: ಅಂತರಿಕ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ಪೊಲೀಸ್ ಇಲಾಖೆ, ನೌಕಾದಳ, ಕೋಸ್ಟ್ಗಾರ್ಡ್ ಹಾಗೂ ಕರಾವಳಿ ಕಾವಲು ಪೊಲೀಸ್ ಪಡೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಎರಡು ದಿನಗಳ ಸಾಗರ್ ಕವಚ ಅಣಕು ಭದ್ರತಾ ಕಾರ್ಯಾಚರಣೆ ಗುರುವಾರ ಮುಕ್ತಾಯಗೊಂಡಿತು.
ಬುಧವಾರ ಬೆಳಗ್ಗೆ 6ರಿಂದ ಆರಂಭಗೊಂಡಿದ್ದ ಕಾರ್ಯಾಚರಣೆ ಗುರುವಾರ ಸಂಜೆ 6ರ ವರೆಗೆ ನಗರದ ವಿವಿಧೆಡೆ ನಡೆದಿದ್ದು ನಗರದ ಮಾಲ್, ಮಾರುಕಟ್ಟೆ , ಬಸ್-ರೈಲು ನಿಲ್ದಾಣ, ಜನ ಸಂದಣಿ ಪ್ರದೇಶ, ಬಂದರು, ಕಡಲ ತೀರ ಪ್ರದೇಶಗಳು ಮುಂತಾದೆಡೆ ಪೊಲೀಸರು ಕಟ್ಟೆಚ್ಚರ ವಹಿಸಿ ತನಿಖೆ ನಡೆಸಿದರು.
ಪಾಂಡೇಶ್ವರ ಪೊಲೀಸರು ಗುರುವಾರ ನಡೆಸಿದ ಅಣುಕು ಕಾರ್ಯಾಚರಣೆಯಲ್ಲಿ ಮಧ್ಯಾಹ್ನ 11.30ಕ್ಕೆ ಜಿಲ್ಲಾಧಿಕಾರಿ ಕಚೇರಿ, ಖಾಸಗಿ ಹೊಟೇಲ್ ಎದುರು ತಿರುಗಾಡುತ್ತಿದ್ದ ರೆಡ್ಫೋರ್ಸ್ ಟೀಮ್ನ 6ರಿಂದ 8 ಮಂದಿಯನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ