ಕಂಬಳ ಪ್ರಿಯರಿಗೆ ಸಿಹಿ ಸುದ್ದಿ: ಕಂಬಳ ವೇಳಾಪಟ್ಟಿ ಬಿಡುಗಡೆ, ಸೆಲೆಬ್ರಿಟಿ ಆಕರ್ಷಣೆಗೆ ತಡೆ
Team Udayavani, Jan 3, 2021, 8:14 AM IST
ಮೂಡುಬಿದಿರೆ: ಕೊರೊನಾ ಕಾರಣ ರಾತ್ರಿ ಕಂಬಳಕ್ಕೆ ಜಿಲ್ಲಾಧಿಕಾರಿಗಳ ಅಸಮ್ಮತಿಯ ಕಾರಣ ಹಗಲಲ್ಲೇ ಎರಡು ದಿನಗಳಲ್ಲಿ ಕಂಬಳ ನಡೆಸುವ ಬಗ್ಗೆ ದ.ಕ. ಜಿಲ್ಲಾ ಕಂಬಳ ಸಮಿತಿ ಶನಿವಾರ ಇಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದೆ. ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಈ ಸಾಲಿನ ಮೊದಲ ಕಂಬಳ ಜ.30 ಮತ್ತು 31ರಿಂದ ಹೊಕ್ಕಾಡಿಗೋಳಿಯಲ್ಲಿ ವೀರ ವಿಕ್ರಮ ಜೋಡುಕರೆ ಕಂಬಳ ನಡೆಯಲಿದೆ. ಕೊನೆಯ ಕಂಬಳ ಮಾರ್ಚ್ 20ರಂದು ವೇಣೂರು ಪೆರ್ಮಡ ಸೂರ್ಯ ಚಂದ್ರ ಕಂಬಳ ನಡೆಯಲಿದೆ.
ಹೊಕ್ಕಾಡಿಗೋಳಿ (ಜ. 30, 31), ಐಕಳ ಬಾವ (ಫೆ. 6, 7), ವಾಮಂಜೂರು ತಿರುವೈಲುಗುತ್ತು (ಫೆ. 13, 14). ಮೂಡುಬಿದಿರೆ (ಫೆ. 20, 21), ಮಿಯ್ನಾರು (ಫೆ. 27, 28). ಬಂಗ್ರಕೂಳೂರು (ಮಾ. 6, 7), ವೇಣೂರು ಪೆರ್ಮುಡ (ಮಾ. 20, 21) ಕಂಬಳ ಸೇರಿದಂತೆ 7 ಕಂಬಳಗಳ ದಿನಾಂಕ ಘೋಷಿಸಲಾಯಿತು.
ಇದನ್ನೂ ಓದಿ:ಪಿಯುಸಿ ಫೇಲಾದವ, 1000 ಮಂದಿಗೆ ಕೆಲಸ ಕೊಡಿಸಿದ!
ಸಮಿತಿಯ ಗೌರವಾಧ್ಯಕ್ಷರಾದ ಬಾರ್ಕೂರು ಶಾಂತಾರಾಮ ಶೆಟ್ಟಿ, ಕೊಳಕ್ಕೆ ಇರ್ವತ್ತೂರು ಭಾಸ್ಕರ ಎಸ್. ಕೋಟ್ಯಾನ್, ಗೌರವ ಸಲಹೆಗಾರರು, ಉಪಾಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ