ಸುರತ್ಕಲ್: ವೆಟ್ ವೆಲ್ ಸೋರಿಕೆಯಿಂದ ದುರ್ವಾಸನೆ, ಬಾವಿ ನೀರು ಕಲುಷಿತ
Team Udayavani, May 31, 2020, 5:54 PM IST
ಸುರತ್ಕಲ್: ಹೊಸಬೆಟ್ಟು ವೆಟ್ ವೆಲ್ ಸೋರಿಕೆಯಿಂದ ಮಳೆ ನೀರು ಹರಿಯುವ ತೋಡಿನಲ್ಲಿ ಮ.ನ.ಪಾದ ವೆಟ್ವೆಲ್ ನಂಬರ್ .4 (ರೇಚಕ ಸ್ಥಾವರ) ದಿಂದ ತ್ಯಾಜ್ಯ ಹರಿಯುತ್ತಿದ್ದು ಬಾವಿ ನೀರು ಕಲುಷಿತಗೊಂಡಿದ್ದು ಮಾತ್ರವಲ್ಲ ಬಾವಿ ನೀರು ಕಲುಷಿತವಾಗಿದೆ.
ಹೊಸಬೆಟ್ಟು ನವಗಿರಿ ಕಲ್ಯಾಣ ಮಂಟಪದ ಸಮೀಪದಿಂದ ಹೊನ್ನಕಟ್ಟೆಯಾಗಿ ಸಮುದ್ರ ಸೇರುವ ಮಳೆ ನೀರು ಹರಿಯಲು ಅಗಲವಾದ ತೋಡಿದೆ. ಆ ತೋಡಿನಲ್ಲಿ ಮಳೆನೀರು ಮಾತ್ರ ಹರಿಯುತ್ತಿದ್ದು, ಬೇಸಿಗೆಯ ಕಾಲದಲ್ಲಿ ಸಂಪೂರ್ಣ ಬರಿದಾಗಿರುತ್ತದೆ.
ಇದೀಗ ಆ ತೋಡಿನಲ್ಲಿ ಮನಪಾದ ವೆಟ್ ವೆಲ್ ನಂಬರ್.4 (ರೇಚಕ ಸ್ಥಾವರ) ದಿಂದ ತ್ಯಾಜ್ಯವನ್ನು ಹರಿಯ ಬಿಡಲಾಗಿದ್ದು , ಸುತ್ತೆಲ್ಲಾ ಗಬ್ಬು ನಾರುತ್ತಿದೆ. ಇದರಿಂದಾಗಿ ನವಗಿರಿ ಕಲ್ಯಾಣ ಮಂಟಪದಿಂದ ಹೊನ್ನಕಟ್ಟೆ ವರೆಗಿನ 2 ಕಿ.ಮೀ ದೂರ ವ್ಯಾಪ್ತಿಯಲ್ಲಿ ಸುಮಾರು150 ಮನೆಗಳಿದ್ದು ಎಲ್ಲರೂ ಸಂಕಷ್ಟಕ್ಕೀಡಾಗಿದ್ದಾರೆ. ತೀವ್ರ ವಾಸನೆಯಿಂದ ಇಲ್ಲಿ ಜೀವನ ಮಾಡುವುದು ಕಷ್ಟವಾಗಿದೆ.
ವಾಯು ಮಾಲಿನ್ಯ ಉಂಟಾಗಿ ಉಸಿರಾಡಲು ತೊಂದರೆಯಾಗಿದೆ. ಇಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ. ಬಾವಿಯ ನೀರು ಕೂಡಾ ಹಾಳಾಗಿ ಕುಡಿಯಲು ಅಯೋಗ್ಯವಾಗಿದೆ. ಆದುದರಿಂದ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದು ಸ್ಥಳೀಯರು ಪಾಲಿಕೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ