ʼಚರಿತ್ರೆಯ ಪುಟ’ಗಳಿರುವ ಮೂಡುಬಿದಿರೆ ಉಪನೋಂದಣಾಧಿಕಾರಿ ಕಚೇರಿ ಉಳಿಸಬೇಡವೇ?


Team Udayavani, Sep 16, 2022, 11:51 AM IST

7

ಮೂಡುಬಿದಿರೆ: ಶತಮಾನದ ಹಿಂದೆ ಸ್ಥಾಪನೆಯಾಗಿದ್ದ ಮೂಡುಬಿದಿರೆ ಉಪ ನೋಂದಣಾಧಿಕಾರಿ ಕಚೇರಿ ಕಳೆದ ಎಪ್ರಿಲ್‌ನಲ್ಲಿ ತೆರೆದುಕೊಂಡ ಮೂಡುಬಿದಿರೆ ತಾಲೂಕು ಆಡಳಿತ ಸೌಧದಲ್ಲಿ ಬಿಡಾರ ಹೂಡಿದೆ. ನೆಮ್ಮದಿಯ ನೆಲೆ ಕಂಡಿದೆ ಎಂಬುದು ಸ್ವಾಗತಾರ್ಹ ಬೆಳವಣಿಗೆ.

ಆದರೆ, ಚಾರಿತ್ರಿಕ ನಗರಿ ಮೂಡು ಬಿದಿರೆಯ ಪರಂಪರೆಯಲ್ಲಿ ಪುರಾತತ್ವ ಮಹತ್ವದ 18 ದೇವಸ್ಥಾನ, 18 ಬಸದಿ, 18 ಕೆರೆಗಳ ಆಸ್ತಿತ್ವಕ್ಕೆ ಎಷ್ಟು ಪ್ರಾಮುಖ್ಯವಿದೆಯೋ ಆಷ್ಟೇ ಮಹತ್ವ ಇಲ್ಲಿನ ಉಪನೋಂದಣಾಧಿಕಾರಿಗಳ ಕಚೇರಿಗೂ ಇದೆ.

ಕೆಂಪುಕಲ್ಲಿನ ಸುಂದರ ರಚನೆಯ ಕಚೇರಿ ಇದು. ಮೂಡುಬಿದಿರೆಗೆ ತಿಲಕಪ್ರಾಯದಂತಿದೆ. ಇದರೊಳಗಿನ ಸರಂಜಾಮು, ದಾಖಲೆಗಳು, ಅಧಿಕಾರಿ, ಸಿಬಂದಿಗಳೂ ಆಡಳಿತ ಸೌಧಕ್ಕೆ ತೆರಳಿರಬಹುದು. ಈ ಸುಂದರ ಕಟ್ಟಡಕ್ಕೆ ಸದ್ಯಕ್ಕೆ ಬೀಗ ಜಡಿಯಲಾಗಿದೆ. ಮುಂದೇನಾದೀತು ಎಂಬ ಕುತೂಹಲ ಇಲ್ಲಿನ ಜನರಿಗಿದೆ.

ಏನಿದರ ಚಾರಿತ್ರಿಕ ಮಹತ್ವ

ಇದು ಬರೇ ಉಪನೋಂದಣಾ ಧಿಕಾರಿಗಳ ಕಚೇರಿ ಎಂಬುದಷ್ಟೇ ಇದರ ವಿಶೇಷತೆ ಅಲ್ಲವೇ ಅಲ್ಲ.

ಹಿಂದೊಮ್ಮೆ ಮೂಡುಬಿದಿರೆ ತಾಲೂಕು ಆಗಿದ್ದ ಸಂದರ್ಭ ತಾಲೂಕು ಕಚೇರಿಯೂ ಆಗಿತ್ತು. ಕೋರ್ಟು ಕೂಡ ಆಗಿತ್ತು. ಮೂಡುಬಿದಿರೆಗೆ ವಿದ್ಯುತ್‌ ಬರುವ (ಅಂದರೆ 1959ಕ್ಕಿಂತ) ಮೊದಲು ಇಲ್ಲಿ ನ್ಯಾಯಾಧೀಶರಿಗೆ ಗಾಳಿ ಬೀಸುವ ಪಂಖಾದ ವ್ಯವಸ್ಥೆ ಇಲ್ಲಿತ್ತು. ಈ ಪಂಖಾವನ್ನು ಚಲಾಯಿಸಲು ಓರ್ವ ಜವಾನ ಇದ್ದರಂತೆ. ಅದನ್ನು ನೇತು ಹಾಕಲು ಹಾಕಿದ್ದ ಕೊಂಡಿಗಳು ಇನ್ನೂ ಈ ಕಟ್ಟಡದಲ್ಲಿವೆ ಎಂಬುದನ್ನು ಗಮನಿಸಬೇಕಾಗಿದೆ. ಕಾರಣಾಂತರದಿಂದ ತಾಲೂಕು ಕಚೇರಿ ಕಾರ್ಕಳಕ್ಕೆ ವರ್ಗಾಯಿಸಲ್ಪಟ್ಟಿತು. (ಬಳಿಕ ಮೂಡುಬಿದಿರೆ ಹೋಬಳಿ ಎಂದಷ್ಟೇ ಆಗಿ ಬಹುಕಾಲ ಸರಿದು ಸುದೀರ್ಘ‌ ಕಾಲದ ಹೋರಾಟದ ಬಳಿಕ ತಾಲೂಕಾಗಿರುವುದು ಸುದೈವ.)

ಈ ಸುಂದರ ಕಟ್ಟಡವನ್ನು ಏನು ಮಾಡಬಹುದು. ಖಂಡಿತಕ್ಕೂ ಇದನ್ನು ಕೆಡವಿ ಇನ್ನೇನೋ ಕಟ್ಟುವುದು ತರವಲ್ಲ, 1907ರಲ್ಲಿ ಕಟ್ಟಿದ ಪ್ರವಾಸಿ ಬಂಗಲೆಗೆ ಪುರಾತತ್ವ ಮಹತ್ವವಿದೆಯೋ ಅದಕ್ಕೂ ಮೊದಲೇ ಕಟ್ಟಿರುವ ಮೂಡುಬಿದಿರೆಯ ಉಪ ನೋಂದಣಾಧಿಕಾರಿ ಕಚೇರಿಯ ನೆಲೆವೀಡಾಗಿದ್ದ ಈ ಸುಂದರ ಕಟ್ಟಡಕ್ಕೆ ಅದರಷ್ಟೇ ಅಥವಾ ಅದಕ್ಕಿಂತ ಹೆಚ್ಚು ಮಹತ್ವವಿದೆ. ಇದನ್ನು ಉಳಿಸಲೇ ಬೇಕಾಗಿದೆ. ಸದ್ಯ ತೆರವಾಗಿರುವ ಈ ಕಟ್ಟಡ ತಕ್ಕಮಟ್ಟಿಗೆ ಸದೃಢವಾಗಿಯೇ ಇದೆ. ಒಂದಿಷ್ಟು ಕಾಯಕಲ್ಪ ನಡೆಸಿದರೆ ಇದನ್ನು ಮತ್ತೂ ಒಂದು ಶತಮಾನ ಕಾಲ ಉಳಿಸಬಹುದು.

ಸಾಧ್ಯತೆಗಳು

1.ಇದರಲ್ಲೊಂದು ಪೊಲೀಸ್‌ ಔಟ್‌ ಪೋಸ್ಟ್‌ ಸ್ಥಾಪಿಸಬಹುದು.

2. ಮೂಡುಬಿದಿರೆ ಪರಿಸರದ ಪ್ರವಾಸಿ ತಾಣಗಳನ್ನು ಪರಿಚಯಿಸುವ, ಮಾಹಿತಿ ನೀಡುವ ಕಚೇರಿಯನ್ನಾಗಿಸಬಹುದು.

3. ಪುಟ್ಟ ಗ್ರಂಥಾಲಯ ರೂಪಿಸಬಹುದು.

4. ಪುಟ್ಟ ಸ್ವರೂಪದ ಸ್ವ ಉದ್ಯೋಗ ತರಬೇತಿ ಕೇಂದ್ರ ಸ್ಥಾಪಿಸಬಹುದು.

5. ಹತ್ತಿರದ ಅಂಗನವಾಡಿಯನ್ನು ಇಲ್ಲಿಗೆ ವರ್ಗಾಯಿಸಬಹುದು.

  • ಒಟ್ಟಿನಲ್ಲಿ ಸಾರ್ವಜನಿಕ ಅಭಿಪ್ರಾಯ ರೂಢಿಸಿ, ಸಾರ್ವಜನಿಕ ಉಪಯೋಗಕ್ಕಾಗಿ ಈ ಕಟ್ಟಡವನ್ನು ಬಳಸುವುದು ಸೂಕ್ತ.
  • ಒಂದು ವೇಳೆ ಅದಾವುದಕ್ಕೂ ಅವಕಾಶ ಇಲ್ಲ ಎಂದಾದರೆ ಇದ್ದುದನ್ನು ಇದ್ದ ಹಾಗೇ ಉಳಿಸಿಕೊಳ್ಳಬೇಕಾಗಿದೆ.

ಟಾಪ್ ನ್ಯೂಸ್

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.