ದಸರಾ ಸಂಭ್ರಮಕ್ಕೆ ವೈವಿಧ್ಯ ಸ್ತಬ್ಧ ಚಿತ್ರ!


Team Udayavani, Oct 4, 2022, 1:24 PM IST

10

ಮಹಾನಗರ: ನವರಾತ್ರಿ ಮಹೋತ್ಸವದಲ್ಲಿ ಜನಸಮುದಾಯದ ಭಕ್ತಿಯ ಸಿಂಚನದ ಜತೆಗೆ ಶಾರದಾ ಮಾತೆಯ ಭವ್ಯ ಮೆರವಣಿಗೆಗೆ ಆಧ್ಯಾತ್ಮಿಕ ಹಾಗೂ ಸಮಾಜಮುಖೀ ಸಂದೇಶ ಗಳೊಂದಿಗೆ ಮೆರುಗು ತುಂಬುವುದೇ ಸ್ತಬ್ಧ ಚಿತ್ರಗಳು!

ಭವ್ಯ ಶೋಭಾಯಾತ್ರೆಯಲ್ಲಿ ಶಾರದಾ ಮಾತೆಯು ಭಕ್ತಿಯ ಕೇಂದ್ರ ವಾದರೆ, ಸ್ತಬ್ಧಚಿತ್ರಗಳು ಸಂದೇಶ ಸಾರುವ ಆಕರ್ಷಕ ಪರಿಕಲ್ಪನೆ. ಮಂಗಳೂರು ದಸರಾ, ಮಂಗಳಾದೇವಿ ಸಹಿತ ವಿವಿಧ ಕಡೆಗಳಲ್ಲಿ ನಡೆಯುವ ದಸರಾ ಶೋಭಾಯಾತ್ರೆಗೆ ಟ್ಯಾಬ್ಲೋಗಳು ಬಹು ವಿಧದಲ್ಲಿ ಜನಾಕರ್ಷಕ.

ಪೌರಾಣಿಕ ಹಿನ್ನೆಲೆ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಸಂದೇಶಗಳನ್ನು ಸಾರುವುದು ಟ್ಯಾಬ್ಲೋಗಳ ಮುಖ್ಯ ಆದ್ಯತೆ. ಇದಕ್ಕಾಗಿ ಆಕರ್ಷಕ ವಿಗ್ರಹಗಳನ್ನು ರಚಿಸಿ ಅದಕ್ಕೆ ಬಣ್ಣ ಹಾಗೂ ವಸ್ತ್ರ ಶೃಂಗಾರದೊಂದಿಗೆ ಕಂಗೊಳಿಸುವಂತೆ ಮಾಡಲಾಗುತ್ತದೆ.

ಬೆಳಕಿನ ಚಿತ್ತಾರದೊಂದಿಗೆ ಗಮನ ಸೆಳೆಯುವಂತೆ ಮಾಡಲಾಗುತ್ತದೆ. ಹಿನ್ನೆಲೆ ಧ್ವನಿ ಮತ್ತಷ್ಟು ಆಕರ್ಷಿಸುತ್ತದೆ. ಈ ಮಧ್ಯೆ, ಕೆಲವು ಸ್ತಬ್ಧ ಚಿತ್ರಗಳಲ್ಲಿ ಹುಲಿ ವೇಷ ಸಹಿತ ನೃತ್ಯವೇ ಪ್ರಧಾನವಾಗಿರುತ್ತದೆ.

ಕರಾವಳಿ ಮಾತ್ರವಲ್ಲದೆ ರಾಜ್ಯದ ವಿವಿಧ ಕಡೆಗಳಲ್ಲಿ ನಡೆಯುವ ದಸರಾ ಅಥವಾ ಇತರ ಉತ್ಸವ ಸಂದರ್ಭಗಳಿಗೆ ಟ್ಯಾಬ್ಲೋಗಳನ್ನು ಮಂಗಳೂರು ಕೇಂದ್ರಿತವಾಗಿಯೇ ಪಡೆದುಕೊಂಡು ಪ್ರದರ್ಶಿಸಲಾಗುತ್ತದೆ ಎಂಬುದು ವಿಶೇಷ. ಹಲವು ಕಲಾವಿದರು ಇದಕ್ಕಾಗಿ ವಿಶೇಷವಾಗಿ ಶ್ರಮಿಸುತ್ತಿದ್ದಾರೆ.

ಸ್ತಬ್ಧ ಚಿತ್ರ ರಚನೆ ಹೇಗೆ?

ಖ್ಯಾತ ಕಲಾವಿದ, ಕಲಾಕೃತಿಗಳನ್ನು ರಚನೆ ಮಾಡುವ ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಪ್ರಧಾನ ಅರ್ಚಕ, ಬಾಲಕೃಷ್ಣ ಅವರು “ಸುದಿನ’ ಜತೆಗೆ ಮಾತನಾಡಿ, “ಸ್ತಬ್ಧತ್ರಗಳ ನಿರ್ಮಾಣದಲ್ಲಿ ಹಲವು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದೇನೆ. ಮಂಗಳೂರು, ಮೈಸೂರು, ಮಡಿಕೇರಿ ದಸರಾಗಳಿಗೆ ಟ್ಯಾಬ್ಲೋಗಳನ್ನು ಸಿದ್ಧಪಡಿಸಿ ನೀಡಲಾಗುತ್ತದೆ.

ಈ ಬಾರಿ ಉಚ್ಚಿಲ ದಸರಾಕ್ಕೂ ಹಲವು ಟ್ಯಾಬ್ಲೋ ಇಲ್ಲಿಂದಲೇ ಸಿದ್ಧಪಡಿ ಸಲಾಗುತ್ತದೆ. ಉಳಿದಂತೆ ಮೊಸರು ಕುಡಿಕೆ ಸಹಿತ ವಿವಿಧ ಕಡೆಗಳ ಉತ್ಸವ ಗಳಿಗೆ ಸರಕಾರಿ ಉತ್ಸವಗಳಿಗೆ ಟ್ಯಾಬ್ಲೋ ಸಿದ್ಧ ಪಡಿಸಲಾಗುತ್ತದೆ’ ಎನ್ನುತ್ತಾರೆ.ಆವೆಮಣ್ಣು, ಬೈ ಹುಲ್ಲು, ಉಮಿ (ಭತ್ತದ ಸಿಪ್ಪೆ) ಮಿಶ್ರಣ ಮಾಡಿ ವಿಗ್ರಹ ತಯಾರಿಸಲಾಗುತ್ತದೆ. ಅನಂತರ ಅದರ ಮೇಲೆ ಚಿತ್ರದ ರೂಪ ಮಾಡಲಾಗುತ್ತದೆ.

ಪೈಬರ್‌ ಅಚ್ಚಿನಿಂದ ಇತರ ಪೂರಕ ಚಿತ್ರಗಳನ್ನು ಮಾಡಲಾಗುತ್ತದೆ. ಬಳಿಕ ವಿಗ್ರಹದ ಚಲನೆಗೆ ಬೇಕಾದ ಕಬ್ಬಿಣದ ಕೆಲಸ ಮಾಡಲಾಗುತ್ತದೆ. ಇವುಗಳಿಗೆ ಬಣ್ಣ ಬಳಿಯುವುದರಿಂದ ಹಾಗೂ ಆಭರಣಗಳನ್ನು ತೊಡಿಸುವುದರಿಂದ ನೈಜತೆ ಕಂಡಕೊಳ್ಳಲಾಗುತ್ತದೆ ಎನ್ನುತ್ತಾರೆ ಅವರು.

ಸ್ತಬ್ಧಚಿತ್ರ ರಚಿಸಲು ಮರದ ತುಂಡು, ಕಬ್ಬಿಣದ ಪರಿಕರ ಬಳಕೆ ಮಾಡಲಾಗುತ್ತದೆ. ಆವೆ ಮಣ್ಣಿನ ಕೆಲಸದ ಉಪಯೋಗಕ್ಕೆ ಮರದ ಉಪಕರಣ ಬಳಸಲಾಗುತ್ತದೆ. ವೆಲ್ಡಿಂಗ್‌ ಮಿಷನ್‌, ಕಟ್ಟಿಂಗ್‌ ಮಿಷನ್‌, ಕಂಪ್ರೈಸರ್‌, ಸೋಲ್ಡರಿಂಗ್‌ ಮಿಷನ್‌ ಮುಂತಾದ ಉಪಕರಣ ಅತೀ ಅಗತ್ಯ. ಪ್ರದರ್ಶನಕ್ಕೆ ಅನುಕೂಲವಾಗುವ ವಾಹನವೂ ಅಗತ್ಯ.

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.