“ಕೆರೆಗೆ ಹೂಳು ಸೇರದಂತೆ ನೋಡಿಕೊಳ್ಳಿ’
ಮೂಡುಬಿದಿರೆ : ಕೆರೆ ಲೋಕಾರ್ಪಣೆ
Team Udayavani, Oct 3, 2019, 3:15 AM IST
ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಗಾಂಧೀ ಜಯಂತಿಯಂದು ಕೆರೆಗೆ ಬಾಗಿನ ಸಮರ್ಪಿಸಿ ಲೋಕಾರ್ಪಣೆಗೊಳಿಸಿದರು.
ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆಯ ಅಂಗಸಂಸ್ಥೆ ಚಾರಿಟೆಬಲ್ ಟ್ರಸ್ಟ್ ನ ಮಹತ್ವದ “ರೋಟಾಲೇಕ್’ ಯೋಜನೆಯಡಿ, ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸುದರ್ಶನ ಉಗ್ಗುಗುತ್ತು ಮೂಡುಬಿದಿರೆ ಇವುಗಳ ಸಹಭಾಗಿತ್ವದಲ್ಲಿ 8.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸುಭಾಷ್ ನಗರ ಕೆರೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಗಾಂಧೀ ಜಯಂತಿಯಂದು ಬಾಗಿನ ಸಮರ್ಪಿಸಿ, ಲೋಕಾರ್ಪಣೆಗೊಳಿ ಸಿ ದರು.
ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಮಾತ ನಾಡಿ, ಸ್ವಾತಂತ್ರ್ಯ ಲಭಿಸಿದ ಅನಂತರ ನಾವು ಕೆರೆ, ಮದಕ, ಬಾವಿಗಳನ್ನು ಮರೆಯತೊಡಗಿ ಸರ ಕಾರದ ನಳ್ಳಿನೀರಿಗೇ ಅವಲಂಬಿತರಾಗ ತೊಡ ಗಿದ ಕಾರಣ ನಮ್ಮ ಜಲ-ಮೂಲ ನಾಶವಾಗತೊಡಗಿತು. ಮತ್ತೆ ನಾವು ಈ ಎಲ್ಲ ಜಲಮೂಲಗಳನ್ನು ಉಳಿಸಿ, ಜಲ ಸಂವರ್ಧನೆಗಾಗಿ ಪಣತೊಡಬೇಕಾಗಿದೆ. ಈ ನಿಟ್ಟಿನಲ್ಲಿ ಸುಭಾಷ್ನಗರ ಕೆರೆಯು ಜೀವಂತವಾಗಿ ಸದಾ ಈ ಭಾಗದ ಜನರಿಗೆ ಉಪಯುಕ್ತವಾಗಿ ಒದಗಿಬರಲಿ. ಇಂಥ ಕಾಮಗಾರಿಗಳಿಂದ ಕೃಷಿಕಾರ್ಯಕ್ಕೆ ಅನುಕೂಲವಾಗಲಿದೆ; ಬಾವಿ, ಬೋರ್ವೆಲ್ಗಳ ಜಲ ಸಂಪತ್ತೂ ವೃದ್ಧಿಯಾಗುವುದು. ಸರಕಾರಿ ಯೋಜನೆಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಈ ಕೆರೆಯ ಕೆಲಸ ನಡೆದಿದೆ ಇದೊಂದು ದೈವಿಕ ಕಾರ್ಯ ಎಂದು ಅಭಿನಂದನೆ ಸಲ್ಲಿಸಿದರು.
ರೋಟರಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಡಾ| ಮುರಳೀಕೃಷ್ಣ ವರುಸ್ವಾಗತಿಸಿ ಪ್ರಸ್ತಾವಿಸಿ, ಸುಭಾಷ್ನಗರ ಕೆರೆಗೆ ನಿರ್ಮಾಣಕ್ಕೆ ಡಾ| ಹೆಗ್ಗಡೆಯವರು ಎಸ್ಕೆಡಿಆರ್ಡಿಪಿ ಮೂಲಕ 3 ಲಕ್ಷ ರೂ. ಅನುದಾನವನ್ನು ನೀಡಿರುವುದಕ್ಕೆ ಕೃತಜ್ಞತೆ ಸಮರ್ಪಿಸಿದರು.
ಟ್ರಸ್ಟ್ ಕಾರ್ಯದರ್ಶಿ ಡಾ| ಹರೀಶ್ ನಾಯಕ್ ನಿರೂಪಿಸಿದರು. ಮಾಜಿ ಸಚಿವ ಕೆ. ಅಭಯಚಂದ್ರ, ರೋಟರಿ ಕ್ಲಬ್ ಅಧ್ಯಕ್ಷ ಸಿ.ಎಚ್. ಅಬ್ದುಲ್ ಗಪೂರ್, ಕಾರ್ಯದರ್ಶಿ ನಾಗರಾಜ್ ಬಿ., ತಹಶೀಲ್ದಾರ್ ಅನಿತಾಲಕ್ಷ್ಮೀ, ಪುರಸಭಾ ಮುಖ್ಯಾಧಿಕಾರಿ ಇಂದೂ ಎಂ., ಪರಿಸರ ಅಭಿಯಂತರೆ ಶಿಲ್ಪಾ ಎಸ್., ಎಸ್ಕೆಡಿಆರ್ಡಿಪಿ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಪುರಸಭಾ ಸದಸ್ಯರಾದ ಪುರಂದರ ದೇವಾಡಿಗ, ಪಿ.ಕೆ. ಥೋಮಸ್, ಸುರೇಶ್ ಕೋಟ್ಯಾನ್, ಮಾಜಿ ಸದಸ್ಯೆ ರಮಣಿ, ರೋಟರಿ ಸದಸ್ಯರು ಉಪಸ್ಥಿತರಿದ್ದರು.
ಪುರಸ್ಕಾರ
ಕೆರೆಯ ಹೂಳುಮಣ್ಣನ್ನು ಸ್ವಯಂಸ್ಫೂರ್ತಿಯಿಂದ ಹೊರಸಾಗಿಸಿ ಕಾಮಗಾರಿಗೆ ಮಹತ್ವದ ಕೊಡುಗೆ ನೀಡಿದ ಉಗ್ಗುಗುತ್ತು ಮನೆಯ ದೇವು ಶೆಟ್ಟಿ ಹಾಗೂ ಕೆರೆಗೆ ಹೋಗುವ ಹಾದಿಯನ್ನು ತಮ್ಮ ಖಾಸಗಿ ಜಾಗದಲ್ಲಿ ಉಚಿತವಾಗಿ ತೆರೆದುಕೊಟ್ಟಿರುವ ಕೃಷ್ಣ ದೇವಾಡಿಗ-ಶಂಕರಿ ದಂಪತಿಯನ್ನು ಡಾ| ಹೆಗ್ಗಡೆಯವರು ಪುರಸ್ಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ