ಈ ಅಪಾರ್ಟ್ಮೆಂಟ್ ವಾಸಿಗಳೀಗ ಜಲಸಾಕ್ಷರರು
'ಮನೆ ಮನೆಗೆ ಮಳೆಕೊಯ್ಲು' ಉದಯವಾಣಿ ಅಭಿಯಾನ ಯಶಸ್ವಿ
Team Udayavani, Jun 26, 2019, 5:00 AM IST
ಮಹಾನಗರ: ಜಲ ಸಾಕ್ಷರತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ‘ಉದಯವಾಣಿ’ ಹಮ್ಮಿಕೊಂಡ ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ತಮ್ಮ ಮನೆ, ಅಪಾರ್ಟ್ಮೆಂಟ್ಗಳಲ್ಲಿ ಮಳೆ ಕೊಯ್ಲು ವ್ಯವಸ್ಥೆಯನ್ನು ಅಳವಡಿಸಿ ಉಳಿದವರಲ್ಲಿ ಸ್ಫೂರ್ತಿ ತುಂಬುವವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ.
ಅಭಿಯಾನ ಆರಂಭವಾದ ಎರಡು ವಾರದಲ್ಲೇ ಹಲವರು ಮಳೆಕೊಯ್ಲು ಅಳವಡಿಸಿಕೊಂಡಿರುವುದು ಗಮನಾರ್ಹ. ಪ್ರತಿ ದಿನವೂ ಮಳೆಕೊಯ್ಲು ಅಳವಡಿ ಸುವ ಬಗ್ಗೆ ತಾಂತ್ರಿಕ ಮಾಹಿತಿ ಕೋರಿ ಕರೆ ಮಾಡುತ್ತಿರುವ ಜನರ ಸಂಖ್ಯೆಯೂ ಹೆಚ್ಚುತ್ತಿದೆ. ಅಭಿಯಾನಕ್ಕೆ ಸ್ಪಂದಿಸಿ ಮಳೆಕೊಯ್ಲು ವ್ಯವಸ್ಥೆ ಯನ್ನು ಅಳವಡಿಸಿಕೊಂಡವರು ಮಾಹಿತಿಯನ್ನೂ ಇತರರಿಗೆ ಹಂಚಿಕೊಳ್ಳುತ್ತಿದ್ದಾರೆ. ಆ ಮೂಲಕ, ಅಭಿಯಾನದ ಆಶಯವನ್ನು ಬೆಂಬಲಿಸುವುದರ ಜತೆ, ಭವಿಷ್ಯದಲ್ಲಿ ನಗರದಲ್ಲಿ ಉದ್ಭವಿಸಬಹುದಾದ ನೀರಿನ ಸಮಸ್ಯೆಗೆ ತಾವೇ ಸ್ವಯಂ ಪರಿಹಾರ ಕಂಡುಕೊಳ್ಳಲು ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆ.
ಹೆಚ್ಚಿದ ಜಾಗೃತಿ
ಸಂಘ- ಸಂಸ್ಥೆಗಳು, ಶಾಲಾ- ಕಾಲೇಜುಗಳಲ್ಲಿ ಮಳೆಕೊಯ್ಲಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲು ಮುಂದಾಗಿವೆ. ಕೆಲವು ಅಪಾರ್ಟ್ ಮೆಂಟ್ಗಳಲ್ಲೂ ಮಳೆಕೊಯ್ಲು ಅಳವಡಿಸುವ ಬಗ್ಗೆ ಅಲ್ಲಿನ ಮಾಲಕರ ಸಂಘದ ಸಭೆಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಸ್ವಯಂ ಸೇವಾ ಸಂಸ್ಥೆಗಳು ಸ್ಥಳೀಯವಾಗಿ ತಮ್ಮ ಸಂಘಟನೆ ಮೂಲಕ ಮಳೆಕೊಯ್ಲಿನ ಬಗ್ಗೆ ಜಾಗೃತಿ ಮೂಡಿಸುತ್ತಿವೆ. ಈ ಮಧ್ಯೆ, ಮುಂಗಾರು ಪ್ರಾರಂಭಗೊಂಡು ಮೂರು ವಾರ ಕಳೆಯುತ್ತಿದ್ದರೂ, ಮಳೆ ಇನ್ನೂ ಚುರುಕುಗೊಂಡಿಲ್ಲ. ಇದು ಜನ ರನ್ನು ಆತಂಕಕ್ಕೆ ದೂಡಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ, ಮುಂದಿನ ಬೇಸಗೆಯಲ್ಲಿ ನೀರಿನ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳಬಹುದು. ಹೀಗಾಗಿ, ಮಳೆಕೊಯ್ಲು ಅಳವಡಿಸಿಕೊಳ್ಳುವುದು ಸಮಯೋಚಿತ ಹಾಗು ತುರ್ತು ಅಗತ್ಯ ಎಂದು ಎಲ್ಲರಿಗೂ ಮನದಟ್ಟಾಗುತ್ತಿರುವುದು ಸ್ಪಷ್ಟ.
ಟ್ಯಾಂಕರ್ ನೀರಿಗೆ ಬೇಸತ್ತು ಮಳೆಕೊಯ್ಲು
ಎರಡು- ಮೂರು ವರ್ಷಗಳಿಂದ ಬೇಸಗೆಯಲ್ಲಿ ಟ್ಯಾಂಕರ್ಗಳಿಗೆ ದುಬಾರಿ ಬೆಲೆ ನೀಡಿ ನೀರು ತರಿಸಿಕೊಳ್ಳುವುದು ಅಭ್ಯಾಸವಾಗಿತ್ತು. ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ವಸತಿ ಸಮುಚ್ಛಯದ ನಿವಾಸಿಗಳು ಯೋಚಿಸಿದ್ದೆವು.ಆ ಸಮಯದಲ್ಲಿ ಪತ್ರಿಕೆಯ ಮಳೆಕೊಯ್ಲು ಅಭಿಯಾನ ಆರಂಭವಾಯಿತು. ಅದನ್ನು ನೋಡಿ ಮಳೆಕೊಯ್ಲು ಮಾಡಿದೆವು ಎನ್ನುತ್ತಾರೆ ಮಣ್ಣಗುಡ್ಡೆ ಅಭಿಮಾನ್ ಪ್ಯಾಲೇಸ್ನ ನಿವಾಸಿಗಳು. ವಸತಿ ಸಮುಚ್ಛಯದಲ್ಲಿ 61 ಮನೆಗಳಿದ್ದು ಬೇಸಗೆಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಈಗ ನಾವೆಲ್ಲಾ ಒಂದಾಗಿ ಮಳೆಕೊಯ್ಲು ಅಳವಡಿಸಿದ್ದೇವೆ. ತಾರಸಿಗೆ ಪೈಪ್ ಅಳವಡಿಸಿ ಅದನ್ನು ಕೆಳಗಿರುವ ಬೋರ್ವೆಲ್ನ ಬದಿಯಲ್ಲಿ ಇಂಗುಗುಂಡಿ ಮಾಡಿ ಬಿಡಲಾಗುತ್ತಿದೆ. ಸುಮಾರು 63,000 ರೂ. ಖರ್ಚಾಗಿದೆ. ಮುಂದಿನ ಬೇಸಗೆಯಲ್ಲಿ ನೀರಿನ ಸಮಸ್ಯೆ ಎದುರಾಗದು ಎನ್ನುತ್ತಾರೆ ಅಲ್ಲಿನ ನಿವಾಸಿಗಳು.
ಉದಯವಾಣಿಯ ಮನೆ ಮನೆಗೆ ಮಳೆ ಕೊಯ್ಲು ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿದ್ದಾರೆ. ನೀವೂ ನಮ್ಮ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ವ್ಯವಸ್ಥೆ ಅಳವಡಿಸಿದ್ದರೆ ಫೋಟೊ ಸಮೇತ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪ್ರಕಟಿಸುತ್ತೇವೆ. 9900567000
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು