ಮೋದಿ ಕೈಗೊಂಡ ಕೆಲ ನಿರ್ಧಾರಗಳಿಂದ ವಿಶ್ವವೇ ಭಾರತದೆಡೆಗೆ ನೋಡುತ್ತಿದೆ: ಸುದರ್ಶನ್ ಮೂಡಬಿದಿರೆ
Team Udayavani, May 14, 2020, 5:16 PM IST
ಮಂಗಳೂರು: ವಿಶ್ವವೇ ಕೋವಿಡ್-19 ಮಾಹಾ ಮಾರಿಯಿಂದ ತತ್ತರಿಸಿದೆ. ಜಗತ್ತಿನ ಎಲ್ಲಾ ದೇಶಗಳು ಕೋವಿಡ್-19 ಸೋಂಕಿನಿಂದ ನಲುಗಿದೆ. ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಕೆಲ ನಿರ್ಧಾರದಿಂದ ಇಡೀ ವಿಶ್ವವೇ ಭಾರತ ದೇಶವನ್ನು ನೋಡುವಂತೆ ಮಾಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಹೇಳಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ಮಹಾಮಾರಿ ವಿರುದ್ಧ ಸಮರ್ಪಕವಾಗಿ ಸಮರ ಸಾರುವಲ್ಲಿ ದೇಶದ ಪ್ರಧಾನಿ ನಿರ್ಧಾರ ಅಭೂತಪೂರ್ವ. ದೇಶ ಆರ್ಥಿಕವಾಗಿ ಸಮಸ್ಯೆಯಲ್ಲಿದ್ದರೂ ದೇಶದ ಪ್ರಧಾನಿ ಜನರಿಗಾಗಿ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಇನ್ನೂ ಇದು ಕೇವಲ ಒಂದು ಪ್ಯಾಕೇಜ್ ಮಾತ್ರವಲ್ಲ. ಸ್ವಾವಲಂಬಿ ಭಾರತದ ಸಂಕಲ್ಪದ ಪ್ಯಾಕೇಜ್ ಇದಾಗಿದೆ ಎಂದರು.
ವಿಜ್ಞಾನ ತಂತ್ರಜ್ಞಾನ ವೈದ್ಯಕೀಯವಾಗಿ ಬೆರೆ ದೇಶಗಳು ಅದೆಷ್ಟೋ ಮುಂದುವರಿದಿದೆ. ಆದರೆ ಕೋವಿಡ್-19 ವಿರುದ್ಧ ಸಮರದಲ್ಲಿ ಭಾರತ ಮಾತ್ರ ಹತೋಟಿಯಲ್ಲಿದೆ. ದೇಶದ ಪ್ರಧಾನಿ ಕೈಗೊಂಡ ಜನತಾ ಕರ್ಪ್ಯೂ. ಮೂರನೇ ಹಂತದ ಲಾಕ್ ಡೌನ್ ಗೆ ಜನರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಇದು ಭಾರತದಲ್ಲಿ ಕೊರೊನಾ ಸೋಂಕು ಹತೋಟಿಗೆ ಕಾರಣ ಎಂದಿದ್ದಾರೆ