ಮಂಗಳೂರು: ಸಮುದ್ರ ಪಾಲಾಗುತ್ತಿದ್ದ ಇಬ್ಬರು ಯುವಕರ ರಕ್ಷಣೆ
Team Udayavani, Oct 2, 2021, 7:46 PM IST
ಮಂಗಳೂರು : ಇಲ್ಲಿನ ಪಣಂಬೂರು ಬೀಚ್ ನಲ್ಲಿ ಸಮುದ್ರ ಪಾಲಾಗುತ್ತಿದ್ದ ಇಬ್ಬರು ಯುವಕರನ್ನು ರಕ್ಷಿಸಿದ ಘಟನೆ ಶನಿವಾರ ಸಂಜೆ ನಡೆದಿದೆ.
ಬೆಂಗಳೂರಿನ ಮತ್ತಿ ಕೆರೆಯಿಂದ ಬಂದಿದ್ದ ಇಬ್ಬರು ಪ್ರವಾಸಿಗರು ನೀರುಪಾಲಾಗುತ್ತಿದ್ದ ವೇಳೆ ಜೀವರಕ್ಷಕ ತಂಡದ ಸದಸ್ಯರು ಹರಸಾಹಸ ಪಟ್ಟು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಬ್ಬರು ಯುವಕರನ್ನು ನೀರಿನಿಂದ ಮೇಲೆ ತರಲು 45 ನಿಮಿಷಗಳ ಕಾಲ ಹೋರಾಟ ಮಾಡಲಾಯಿತು ಎಂದು ತಿಳಿದು ಬಂದಿದೆ.