ಮೇ 4: ಮಂಗಳೂರು ಕೆನರಾ ಹೈಸ್ಕೂಲ್ನಲ್ಲಿ ಉದಯವಾಣಿ ಕೆರಿಯರ್ ಗೈಡೆನ್ಸ್ ಕಾರ್ಯಕ್ರಮ
Team Udayavani, May 3, 2019, 9:54 AM IST
ಮಂಗಳೂರು: ಉದಯವಾಣಿಯು ಪಿಯುಸಿ ಪರೀಕ್ಷೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಡೊಂಗರಕೇರಿಯ ಕೆನರಾ ಹೈಸ್ಕೂಲ್ನ ಶ್ರೀ ಭುವನೇಂದ್ರ ಸಭಾ ಭವನದಲ್ಲಿ ಮೇ 4 ರಂದು ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಪರಿಣತರು ಕೆರಿಯರ್ ಮಾರ್ಗದರ್ಶನ ನೀಡುವರು.
ಬೆಳಗ್ಗೆ 9 ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಸಂಪೂರ್ಣ ಉಚಿತ. ವಿಜಾನ, ಕಲಾ, ವಾಣಿಜ್ಯ, ಸ್ಪರ್ಧಾತ್ಮಕ ಪರೀಕ್ಷೆ, ಡಿಪ್ಲೊಮಾ ಕೋರ್ಸ್ಗಳು ಹಾಗೂ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಲಾಗುವುದು.
ಪಿಯುಸಿ ಪಾಸಾದವರು ಮತ್ತು ವ್ಯಾಸಂಗ ಮಾಡುತ್ತಿರುವವರು ಇದರಲ್ಲಿ ಭಾಗವಹಿಸಬಹುದು. ಈಗಾಗಲೇ ಪತ್ರಿಕೆಯ ವಾಟ್ಸಪ್ ನಂಬರ್ ಮೂಲಕ ಹೆಸರು ನೋಂದಾಯಿಸಿಕೊಂಡವರು ತಮ್ಮ ಬರುವಿಕೆಯನ್ನು ಒಂದು ಸಂದೇಶ (ಮೆಸೇಜ್) ಕಳಿಸುವ ಮೂಲಕ ಖಚಿತಗೊಳಿಸಿ. ಇದುವರೆಗೆ ಹೆಸರು ನೋಂದಾಯಿಸದವರೂ ನೇರವಾಗಿ ಸ್ಥಳದಲ್ಲಿಯೇ ಹೆಸರು ನೋಂದಾಯಿಸಬಹುದು.
ವಿಜ್ಞಾನ ವಿಷಯದ ಯಾವ ಕೋರ್ಸ್ಗಳಿಗೆ ಬೇಡಿಕೆ ಇದೆ? ಯಾವ ಕೋರ್ಸ್ಗಳು ಹೆಚ್ಚಿನ ಉದ್ಯೋಗಾ ವಕಾಶಗಳನ್ನು ಕಲ್ಪಿಸಿ ಕೊಡಬಲ್ಲದು? ನಮ್ಮ ಕೋರ್ಸ್ ಮುಗಿಯವವರೆಗೂ ಆ ಕೋರ್ಸ್ಗೆ ಬೇಡಿಕೆ ಇರುತ್ತದೆಯೇ? ವಿಜ್ಞಾನ ಓದಿ ವೈದ್ಯರಾಗದೇ ಇನ್ನೇನು ಮಾಡಬಹುದು? ನನಗೆ ಜೀವಶಾಸ್ತ್ರ ಬಹಳ ಇಷ್ಟ. ಆದರೆ ಮೆಡಿಕಲ್ ಬೇಡ. ಏನು ಮಾಡಬಹುದು? ನನ್ನಿಷ್ಟಕ್ಕೆ ಸಂಬಂಧಿಸಿದ ಕೋರ್ಸ್ ಸ್ವೀಕರಿಸಿದರೆ ಉದ್ಯೋಗ ಸಿಗುವುದೇ? ಬಿಕಾಂ ಪದವಿ ಪಡೆದು ಸಂಶೋಧನೆಗೆ ಬರಬಹುದೇ? ಬಿಬಿಎಂ, ಬಿಬಿಎ ಬಿಟ್ಟರೆ ಇನ್ಯಾವ ಅವಕಾಶಗಳಿವೆ? ಕಲಾ ವಿಷಯ ಓದಿದರೆ ಅವಕಾಶಗಳಿವೆಯೇ?-ವಿದ್ಯಾರ್ಥಿಗಳ /ಪೋಷಕರ ಇಂಥ ಹಲವು ಪ್ರಶ್ನೆಗಳಿಗೆ ನಮ್ಮ ಸಂಪನ್ಮೂಲ ವ್ಯಕ್ತಿಗಳು ಉತ್ತರಿಸುವರು.
ಡಿಪ್ಲೊಮಾ ಕೋರ್ಸ್ ಮಾಹಿತಿ
ಕೇವಲ ಪದವಿಗೆ ಸಂಬಂಧಿಸಿದ ವಿಷಯಗಳಷ್ಟೇ ಅಲ್ಲದೇ, ಡಿಪ್ಲೊಮಾ ಕೋರ್ಸ್ಗಳ ಕುರಿತೂ ಮಾಹಿತಿ ಒದಗಿಸುತ್ತಿರುವುದು ಇದೇ ಮೊದಲು. ವಿಜ್ಞಾನ, ವಾಣಿಜ್ಯ ವಿಷಯಗಳ ಆಸಕ್ತಿ ಇಲ್ಲದಿದ್ದವರು ಈ ಕೋರ್ಸ್ಗಳತ್ತ ಮುಖ ಮಾಡಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ