ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಕಾರು ಬಿಟ್ಟು ನಾಪತ್ತೆಯಾಗಿದ್ದ ವಿಕ್ರಮ್ ಮೃತದೇಹ ಪತ್ತೆ
Team Udayavani, Apr 17, 2020, 9:26 AM IST
ಮಂಗಳೂರು: ಇಲ್ಲಿನ ಉಳ್ಳಾಲ ನೇತ್ರಾವತಿ ಸೇತುವೆ ಬಳಿ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದ ಕೊಲ್ಯ ನಿವಾಸಿ ವಿಕ್ರಮ್ ಗಟ್ಟಿಯವರ ಮೃತದೇಹ ಉಳ್ಳಾಲ ಹೊಯ್ಗೆಯಲ್ಲಿ ಪತ್ತೆಯಾಗಿದೆ.
ಸೋಮೇಶ್ವರ ಕೊಲ್ಯ ನಿವಾಸಿಯಾಗಿರುವ ವಿಕ್ರಮ್ ವಾಃನಗಳ ಬಾಡಿ ವರ್ಕ್ಸ್ ನ ಗ್ಯಾರೇಜ್ ಹೊಂದಿದ್ದರು. ಬುಧವಾರ ರಾತ್ರಿ ಕಾರಿನ ಬ್ಯಾಟರಿ ರಿ ಚಾರ್ಜ್ ಮಾಡಿ ಬರುತ್ತೇನೆಂದು ಮನೆಯಿಂದ ಕೊಣಾಜೆ ಪದವಿಗೆ ತರಳಿದ್ದರು.
ವಿಕ್ರಮ್ನ ಕಾರು ನೇತ್ರಾವತಿ ಸೇತುವೆ ಬಳಿ ಪತ್ತೆಯಾಗಿದ್ದು, ಅದರ ಬಾಗಿಲು ತೆರೆದ ಸ್ಥಿತಿಯಲ್ಲಿತ್ತು. ಲೈಟ್ ಉರಿಯುತ್ತಿತ್ತು ಹಾಗೂ ಮತ್ತು ಎಂಜಿನ್ ಚಾಲನಾ ಸ್ಥಿತಿಯಲ್ಲಿತ್ತು. ಕಂಕನಾಡಿ ಪೊಲೀಸರು ಆಗಮಿಸಿ ಪರಿಶೀಲಿಸಿದಾಗ ವಿಕ್ರಮ್ಗೆ ಸೇರಿದ ಬ್ಯಾಂಕ್ ಪುಸ್ತಕ, ಕಾರಿನ ದಾಖಲೆ ಮತ್ತು ಪಾನ್ ಕಾರ್ಡ್ ಪತ್ತೆಯಾಗಿತ್ತು.
ನಂತರ ವಿಕ್ರಮ್ ಗಾಗಿ ಹುಡುಕಾಟ ನಡೆದಿತ್ತು. ಇದೀಗ ಅವರ ಮೃತದೇಹ ಉಳ್ಳಾಲ ಹೊಯ್ಗೆಯಲ್ಲಿ ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ