ಕೆಎಸ್ಸಾರ್ಟಿಸಿಯಿಂದ ಶೀಘ್ರದಲ್ಲೇ ‘ವಿಟಿಎಂಎಸ್‌’ ಆ್ಯಪ್‌


Team Udayavani, Jun 24, 2019, 11:13 AM IST

KSRTC

ಮಹಾನಗರ: ಕೆಎಸ್ಸಾರ್ಟಿಸಿ ಬಸ್‌ಗಳ ಚಲನ-ವಲನಗಳ ನಿಗಾ ಇಡುವ ಸಲುವಾಗಿ ‘ವೆಹಿಕಲ್ ಟ್ರಾಕಿಂಗ್‌ ಆ್ಯಂಡ್‌ ಮೋನಿಟರಿಂಗ್‌ ಸಿಸ್ಟಮ್‌’ (ವಿಟಿಎಂಎಸ್‌) ಆಧಾರಿತ ಆ್ಯಪ್‌ ತಯಾರಿಸಲು ನಿಗಮ ಮುಂದಾಗಿದೆ. ಆ್ಯಪ್‌ನಲ್ಲಿ ಅಳವಡಿಸಬೇಕಾದ ವೈಶಿಷ್ಟ ್ಯ, ಖರ್ಚು ಸಹಿತ ಸಾಧ್ಯಾ- ಸಾಧ್ಯತೆಗಳ ಬಗ್ಗೆ ನಿಗಮ ಚರ್ಚೆ ನಡೆಸುತ್ತಿದ್ದು, ಮುಂದಿನ ಕೆಲವು ತಿಂಗಳಿನಲ್ಲಿಯೇ ಟೆಂಡರ್‌ ಪ್ರಕ್ರಿಯೆ ಕೂಡ ನಡೆಯಲಿದೆ.

ಕೆಎಸ್ಸಾರ್ಟಿಸಿಯಲ್ಲಿ ಈಗಾಗಲೇ 84 ಘಟಕಗಳಿದ್ದು, 17 ವಿಭಾಗಗಳಿವೆ. ಒಟ್ಟಾರೆ 8,729 ಬಸ್‌ಗಳಿವೆ. ಇದರಲ್ಲಿ ಮಂಗಳೂರು, ಪುತ್ತೂರು, ಮೈಸೂರು ಗ್ರಾಮಾಂತರ, ರಾಮನಗರ ವಿಭಾಗಗಳ ಒಟ್ಟಾರೆ 2,000 ಬಸ್‌ಗಳಲ್ಲಿ ಮೊದಲನೇ ಹಂತವಾಗಿ ವಿಟಿಎಂಎಸ್‌ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಎರಡನೇ ಹಂತದ ಯೋಜನೆ ಸದ್ಯದಲ್ಲಿಯೇ ಆರಂಭಗೊಳ್ಳಲಿದ್ದು, ನಿಗಮದ ಎಲ್ಲ ಬಸ್‌ಗಳಿಗೂ ಈ ಸೌಲಭ್ಯ ವನ್ನು ಅಳವಡಿಸಲು ಕೆಎಸ್ಸಾರ್ಟಿಸಿ ನಿರ್ಧರಿಸಿದೆ.

ಈ ವ್ಯವಸ್ಥೆಯು ಸದ್ಯ ವಿಭಾಗಾವಾರು ಚಾಲ್ತಿಯಲ್ಲಿದ್ದು, ಬಸ್‌ ಯಾವ ಮಾರ್ಗ ದಲ್ಲಿ ತೆರಳುತ್ತಿದೆ, ಎಷ್ಟು ವೇಗದಲ್ಲಿದೆ, ಎಷ್ಟು ಸಮಯ ನಿಲ್ಲಿಸಲಾಗಿದೆ ಎಂಬ ಮಾಹಿತಿಯು ಸರ್ವರ್‌ ಮುಖೇನ ನಿಯಂತ್ರಣ ಕೊಠಡಿಗೆ ಬರುತ್ತಿದೆ.

ಬಸ್‌ಗಳಲ್ಲಿ ಜಿಪಿಆರ್‌ಎಸ್‌ ತಂತ್ರಜ್ಞಾನವನ್ನು ಅಳವಡಿಸಿ ಯಾವ ಬಸ್‌ ಯಾವ ಭಾಗದಲ್ಲಿ ಸಂಚರಿಸುತ್ತಿದೆ ಎಂಬುದನ್ನು ಟ್ರ್ಯಾಕ್‌ ಮಾಡುವ ವಿಧಾನವೇ ವಿಟಿಎಂಎಸ್‌. ಜಿಪಿಆರ್‌ಎಸ್‌ ಮಾದರಿಯ ಯುನಿಟ್ ಅನ್ನು ಸಂಬಂಧಿತ ಬಸ್‌ನಲ್ಲಿ ಮೊದಲಿಗೆ ಅಳವಡಿಸಲಾಗುತ್ತದೆ. ಇದರಿಂದ ಬಸ್‌ ಎಲ್ಲಿದೆ, ನಿಗದಿತ ನಿಲ್ದಾಣಕ್ಕೆ ಎಷ್ಟು ಗಂಟೆಗೆ ಬರಲಿದೆ ಮಾಹಿತಿ ದೊರಕುತ್ತದೆ.

ವಿಟಿಎಂಎಸ್‌ ಎಂದರೇನು?

ಬಸ್‌ಗಳಲ್ಲಿ ಜಿಪಿಆರ್‌ಎಸ್‌ ತಂತ್ರಜ್ಞಾನವನ್ನು ಅಳವಡಿಸಿ ಯಾವ ಬಸ್‌ ಯಾವ ಭಾಗದಲ್ಲಿ ಸಂಚರಿಸುತ್ತಿದೆ ಎಂಬುದನ್ನು ಟ್ರ್ಯಾಕ್‌ ಮಾಡುವ ವಿಧಾನವೇ ವಿಟಿಎಂಎಸ್‌. ಜಿಪಿಆರ್‌ಎಸ್‌ ಮಾದರಿಯ ಯುನಿಟ್ ಅನ್ನು ಸಂಬಂಧಿತ ಬಸ್‌ನಲ್ಲಿ ಮೊದಲಿಗೆ ಅಳವಡಿಸಲಾಗುತ್ತದೆ. ಇದರಿಂದ ಬಸ್‌ ಎಲ್ಲಿದೆ, ನಿಗದಿತ ನಿಲ್ದಾಣಕ್ಕೆ ಎಷ್ಟು ಗಂಟೆಗೆ ಬರಲಿದೆ ಮಾಹಿತಿ ದೊರಕುತ್ತದೆ.

ಸದ್ಯದಲ್ಲೇ ಆ್ಯಪ್‌

ನಾಲ್ಕು ಕೆಎಸ್ಸಾರ್ಟಿಸಿ ವಿಭಾಗದ 2,000 ಬಸ್‌ಗಳಿಗೆ ಸದ್ಯ ವಿಟಿಎಂಎಸ್‌ ವ್ಯವಸ್ಥೆ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ತ್ವರಿತಗತಿಯಲ್ಲಿ ವಿಭಾಗದ ಎಲ್ಲ ಬಸ್‌ಗಳಿಗೂ ಈ ವ್ಯವಸ್ಥೆ ಅಳವಡಿಸುತ್ತೇವೆ. ವಿಟಿಎಂಎಸ್‌ ಆ್ಯಪ್‌ ವಿಚಾರವಾಗಿ ಸದ್ಯ ಚರ್ಚೆ ನಡೆಯುತ್ತಿದ್ದು, ಸದ್ಯದಲ್ಲೇ ಟೆಂಡರ್‌ ಕರೆದು ಆ್ಯಪ್‌ ಮುಖೇನ ಪ್ರಯಾಣಿಕ ಸ್ನೇಹಿ ಮಾಡುತ್ತೇವೆ.
– ಶಿವಯೋಗಿ ಸಿ. ಕಳಸದ್‌, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ
ನವೀನ್‌ ಭಟ್ ಇಳಂತಿಲ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.