ಸ್ವಚ್ಛತಾ ಅಭಿಯಾನದಿಂದ ಮಾತೃಭೂಮಿಯ ಆರಾಧನೆ: ಸ್ವಾಮಿ ಸತ್ಯೇಶಾನಂದಜಿ

ರಾಮಕೃಷ್ಣ ಮಿಷನ್‌ ಸ್ವತ್ಛ ಮಂಗಳೂರು ಅಭಿಯಾನ

Team Udayavani, Aug 13, 2019, 5:00 AM IST

r-33

ಮಹಾನಗರ: ರಾಮ ಕೃಷ್ಣ ಮಿಷನ್‌ ವತಿಯಿಂದ ಆಯೋಜಿ ಸಲಾಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 36ನೇ ಶ್ರಮದಾನವನ್ನು ಹಂಪನಕಟ್ಟೆಯಲ್ಲಿ ರವಿವಾರ ಹಮ್ಮಿಕೊಳ್ಳಲಾಯಿತು.

ಸ್ವಾಮಿ ಜಿತಕಾಮಾನಂದಜಿ ಸಮ್ಮುಖ ದಲ್ಲಿ ಶ್ರಮದಾನಕ್ಕೆ ಬೇಲೂರು ರಾಮಕೃಷ್ಣ ಮಿಷನ್‌ನ ಟ್ರಸ್ಟಿ ಸ್ವಾಮಿ ಸತ್ಯೇಶಾನಂದಜಿ, ರಾಮಕೃಷ್ಣ ಮಿಷನ್‌ ಬೆಂಗಳೂರಿನ ಸ್ವಾಮಿ ಸೌಖ್ಯಾನಂದಜಿ ಅವರು ಗಣಪತಿ ಹೈಸ್ಕೂಲ್‌ ರಸ್ತೆಯಲ್ಲಿರುವ ಶ್ರೀಕೃಷ್ಣ ಭವನ ಆಟೋ ನಿಲ್ದಾಣದ ಮುಂಭಾಗದಲ್ಲಿ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಸ್ವಾಮಿ ಸತ್ಯೇಶಾನಂದಜಿ ಸ್ವಾಮಿ, ವಿವೇಕಾನಂದರ ಪ್ರಕಾರ ಮಾತೃಭೂಮಿಯೇ ನಿಜವಾದ ದೇವರು ಅದನ್ನು ಆರಾಧಿಸಿ, ಪೂಜಿಸಬೇಕು ಎನ್ನುವುದು ಅವರ ಆಶಯವಾಗಿತ್ತು. ಸ್ವಚ್ಛತಾ ಅಭಿಯಾನ ಮೂಲಕ ಇಲ್ಲಿ ನಿಜವಾದ ಮಾತೃಭೂಮಿಯ ಆರಾಧನೆ ನಡೆಯುತ್ತಿದೆ. ಇದರಲ್ಲಿ ನಮ್ಮ, ದೇಶದ ಕಲ್ಯಾಣ ಅಡಗಿದೆ. ದೈವತ್ವದ ಅನಂತರ ಪರಿಶುದ್ಧತೆ ಎನ್ನುತ್ತಾರೆ ಆದರೆ ದೈವತ್ವ ಮತ್ತು ಪರಿಶುದ್ಧತೆ ಎರಡೂ ಒಂದೇ ಆಗಿವೆ. ಸ್ವಚ್ಛತೆ ಮಾಡುತ್ತಾ ಮಾಡುತ್ತಾ ನಾವು ಪರಿಶುದ್ಧರಾಗುತ್ತೇವೆ. ನಮ್ಮ ಉನ್ನತಿಯಾಗುತ್ತದೆ ಎಂದು ತಿಳಿಸಿ ಶುಭಹಾರೈಸಿದರು.

ವಿಶೇಷ ಆಹ್ವಾನಿತರಾಗಿದ್ದ ಬೆಂಗಳೂರು ಯೂಥ್‌ ಫಾರ್‌ ಸೇವಾ ಸ್ವಾತಿ ರಾಮ್‌ ಮಾತನಾಡಿ, ಸ್ವತ್ಛತೆಯನ್ನು ನಾವು ಉಪೇಕ್ಷೆ ಮಾಡಿರುವುದರ ಪರಿಣಾಮ ಇಂದು ಸ್ವಚ್ಛತೆಯನ್ನು ಅಭಿಯಾನದ ರೂಪದಲ್ಲಿ ಮಾಡಬೇಕಿದೆ. ಯಾವ ಕಾರ್ಯವೂ ನಿಕೃಷ್ಟ ಅಥವಾ ಶ್ರೇಷ್ಠವಲ್ಲ ಎಲ್ಲವೂ ಉತೃಷ್ಟ ಕಾರ್ಯಗಳೆ ಆಗಿರುತ್ತವೆ. ಅದು ನಮ್ಮ ಮನಸ್ಸುಗಳನ್ನು ಅವಲಂಬಿಸಿಕೊಂಡಿರುತ್ತವೆ. ಪ್ರತಿವಾರ ಸ್ವಯಂಸೇವಕರು ಸ್ವಯಂಸ್ಫೂರ್ತಿಯಿಂದ ಪಾಲ್ಗೊಂಡು ಸ್ವಚ್ಛತೆಯ ಕೈಂಕರ್ಯ ಮಾಡುತ್ತಿರುವುದು ಅತ್ಯಂತ ಸೋಜಿಗ ಹಾಗೂ ಹೆಮ್ಮೆಯ ಸಂಗತಿಯಾಗಿದೆ. ಈ ಕಾರ್ಯ ಬೇರೆ ನಗರದಲ್ಲಿರುವ ಜನರಿಗೂ ಸ್ಫೂರ್ತಿ ನೀಡುವಂತಾಗಲಿ ಎಂದರು.

ಸುಲತಾ ಭಟ್‌, ರಾಜೀವ ಚಂದ್ರ ಶೇಖರ್‌, ರಾಜೇಶ್‌ ಬಿ.ಕೆ., ಬಾಲಕೃಷ್ಣ ಭಟ್‌, ಸುಭೋದಯ ಆಳ್ವ ಇನ್ನಿತರ ಸ್ವಯಂಸೇವಕರು ಭಾಗಿಯಾಗಿದ್ದರು.
ಮಾಜಿ ಶಾಸಕ ಕ್ಯಾ| ಗಣೇಶ್‌ ಕಾರ್ಣಿಕ್‌ ಅತಿಥಿಗಳನ್ನು ಸ್ವಾಗತಿಸಿ, ಪ್ರಸ್ತಾವನೆಗೈದರು.

ಶ್ರಮದಾನ
36ನೇ ಶ್ರಮದಾನಕ್ಕೆ ಚಾಲನೆ ನೀಡಿದ ಬಳಿಕ ಸ್ವಾಮಿಜಿಗಳು ಕಾರ್ಯ ಕರ್ತರೊಂದಿಗೆ ಪೊರಕೆ ಹಿಡಿದು ಕಸಗುಡಿಸಿದರು. ಇದಕ್ಕೂ ಮೊದಲು ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ, ಸ್ವಯಂ ಸೇವಕರನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿ ಮಾಡಬೇಕಾದ ಕಾರ್ಯಗಳ ಬಗ್ಗೆ ತಿಳಿಸಿದರು. ಮೊದಲಿಗೆ ಶ್ರೀಕೃಷ್ಣ ಭವನ ಆಟೋ ಚಾಲಕರು ಆಟೋ ನಿಲ್ದಾಣದ ಪಕ್ಕದಲ್ಲಿದ್ದ ಸ್ಥಳವೊಂದರಲ್ಲಿ ಬಿಸಾಡುತ್ತಿದ್ದ ತ್ಯಾಜ್ಯರಾಶಿಯನ್ನು ತೆರವು ಮಾಡಿದರು. ಪಾರ್ಕಿಂಗ್‌ ಸ್ಥಳದಲ್ಲಿ ಅಡಾªದಿಡಿªಯಾಗಿ ಬಿದ್ದುಕೊಂಡಿದ್ದ ಕಲ್ಲುಗಳನ್ನು ತೆಗೆದು ನೆಲವನ್ನು ಸಮತಟ್ಟುಗೊಳಿಸಿದರು. ಬಳಿಕ ಅಲ್ಲಿ ಹೂಗಿಡಗಳನ್ನಿಟ್ಟು ಅಂದ ಗೊಳಿಸಿದರು. ಸೋಮನಾಥ್‌ ಕುಲಶೇಖರ್‌, ನವೀನ್‌ ಮಂಕಿಸ್ಟಾಂಡ್‌, ಗಣೇಶ್‌ ಬೋಳಾರ್‌, ಪುರುಷೋತ್ತಮ ಮರೋಳಿ, ಚಂದಯ್ಯ ಮರೋಳಿ, ಅನೇಕ ಆಟೋ ಚಾಲಕರು ಭಾಗಿಯಾಗಿ ಶ್ರಮದಾನ ಮಾಡಿದರು.

ಮತ್ತೂಂದು ತಂಡ ಕೊಡಂಗೆ ಬಾಲಕೃಷ್ಣ ನಾೖಕ್‌ ಜತೆಗೂಡಿ ಲೈಟ್‌ ಹೌಸ್‌ ಹಿಲ್‌ ರಸ್ತೆಯ ತಿರುವಿನ ವೃತ್ತದಲ್ಲಿ ಹಾಕಲಾಗಿದ್ದ ಕಸವನ್ನು ತೆಗೆದು ಸ್ವತ್ಛ ಮಾಡಿದರು. ವಿಶ್ವವಿದ್ಯಾನಿಲಯ ಕಾಲೇಜು, ವೆನಲಾಕ್ ಆಸ್ಪತ್ರೆಯ ಆವರಣ ಗೋಡೆಗಳ ಮೇಲೆ ರಚಿಸಲಾಗಿದ್ದ ಚಿತ್ರಗಳಿಗೆ ಮಳೆಯಿಂದಾಗಿ ಅಲ್ಲಲ್ಲಿ ಪಾಚಿ ಕಟ್ಟಿಕೊಂಡಿತ್ತು. ಇಂದು ಅದನ್ನು ಸ್ವಯಂ ಸೇವಕರು ತೊಳೆದು ಸ್ವತ್ಛಗೊಳಿಸಿದರು. ಮುಂದಿನ ವಾರವೂ ಈ ಕಾರ್ಯ ಮುಂದುವರಿಯಲಿದೆ. ನಾಲ್ಕನೇ ತಂಡ ಉಮಾಕಾಂತ ಸುವರ್ಣ ನೇತೃತ್ವದಲ್ಲಿ ರಸ್ತೆ ವಿಭಾಜಕಗಳನ್ನು ಸ್ವತ್ಛಗೊಳಿಸಿ ವಿನೂತನವಾದ ವಿಭಾಜಕಗಳನ್ನು ಇಡಲಾಯಿತು. ಮುಂದಿನ ದಿನಗಳಲ್ಲಿ ಆ ವಿಭಾಜಕಗಳಲ್ಲಿ ಹೂಗಿಡಗಳನ್ನು ನೆಡಲು ಯೋಜಿಸಲಾಯಿತು.

ರಾಮಕೃಷ್ಣ ಮಿಷನ್‌ ಸ್ವಚ್ಛತಾ ಅಭಿಯಾನದ ಈ ಎಲ್ಲ ಚಟುವಟಿಕೆಗಳಿಗೆ ಎಂ.ಆರ್‌.ಪಿ.ಎಲ್‌. ಸಂಸ್ಥೆ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸುತ್ತಿದೆ.

ಸ್ವಯಂ ಸೇವಕರಿಂದ ರಸ್ತೆ ರಿಪೇರಿ
ಹಂಪನಕಟ್ಟೆ ವಿಶ್ವವಿದ್ಯಾನಿಲಯದ ಎದುರಿನಿಂದ ಜಿ.ಎಚ್‌.ಎಸ್‌ ರಸ್ತೆಯಲ್ಲಿ ಎಡಬದಿಯಲ್ಲಿ ಹೊರಳುವ ರಸ್ತೆಯಲ್ಲಿ ಹಾಕಲಾಗಿದ್ದ ಇಂಟರ್‌ ಲಾಕ್‌ ಕುಸಿದು ಹೋಗಿತ್ತು. ಮಳೆಗಾಲದ ಈ ದಿನಗಳಲ್ಲಿ ಅನೇಕ ಅಪಘಾತಗಳಾಗುತ್ತಿದ್ದವು. ಇದನ್ನು ಗಮನಿಸಿದ ಸ್ವಚ್ಛ ಮಂಗಳೂರು ಸ್ವಯಂ ಸೇವಕರು ನುರಿತ ಕೆಲಸದವರ ಸಹಾಯ ಪಡೆದು ಕುಸಿದುಹೋಗಿದ್ದ ಇಂಟರ್‌ಲಾಕ್‌ ತೆಗೆದು, ಆವಶ್ಯಕ ಮರಳು ತುಂಬಿಸಿ ಅವಶ್ಯವಿದ್ದಡೆ ಹೊಸ ಇಂಟರ್‌ಲಾಕ್‌ ಅಳವಡಿಸಿದ್ದಾರೆ. ಇದೀಗ ಅಲ್ಲಿ ಸುಗಮ ಸಂಚಾರವೂ ಸಾಧ್ಯವಾಗಿ ವಾಹನಗಳ ದಟ್ಟಣೆಯೂ ಕಡಿಮೆಯಾಗಿದೆ. ಅಲ್ಲದೇ ಸ್ಥಳಿಯ ಶಾಸಕ ವೇದವ್ಯಾಸ್‌ ಕಾಮತ್‌ ಪ್ರಶಂಸೆಯನ್ನು ವ್ಯಕ್ತಪಡಿಸಿ, ರಾಮಕೃಷ್ಣ ಮಿಷನ್‌ ಕಾರ್ಯಕರ್ತರನ್ನು ಅಭಿನಂದಿಸಿದ್ದಾರೆ. ಉಮಾನಾಥ್‌ ಕೋಟೆಕಾರ್‌, ದಿಲ್‌ರಾಜ್‌ ಆಳ್ವ ಮುತುವರ್ಜಿಯಲ್ಲಿ ಈ ರಸ್ತೆ ರಿಪೇರಿ ಕಾರ್ಯ ನಡೆಯಿತು.

ಟಾಪ್ ನ್ಯೂಸ್

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.