ಅಲ್ಯೂಮಿನಿಯಂ ದೋಟಿ; ಇರಲಿ ಮುನ್ನೆಚ್ಚರಿಕೆ

ಕೃಷಿ ಭೂಮಿ ಅಂಚಿನಲ್ಲಿ ವಿದ್ಯುತ್‌ ತಂತಿ

Team Udayavani, Jan 2, 2021, 9:13 AM IST

ಅಲ್ಯೂಮಿನಿಯಂ ದೋಟಿ; ಇರಲಿ ಮುನ್ನೆಚ್ಚರಿಕೆ

ಬೆಳ್ತಂಗಡಿ: ಕೃಷಿ ಜಮೀನಿನ ಮೇಲ್ಭಾಗ ಹಾದು ಹೋಗುವ ವಿದ್ಯುತ್‌ ತಂತಿ ಕೃಷಿಕರ ಪಾಲಿಗೆ ಜವರಾಯನಾಗ ತೊಡಗಿದೆ. ಪುತ್ತೂರು ಅಜ್ಜಿಕಲ್ಲು ಸಮೀಪ ಡಿ. 25ರಂದು ವ್ಯಕ್ತಿಯೊಬ್ಬರು ಅಲ್ಯೂಮಿನಿಯಂ ದೋಟಿಯಲ್ಲಿ ಅಡಿಕೆ ಕೊಯ್ಯುವ ಸಂದರ್ಭ ಸಂಭವಿಸಿದ ದುರ್ಘ‌ಟನೆಯು ಅಲ್ಯುಮಿನಿಯಂ ದೋಟಿ ಬಳಕೆಯ ಬಗ್ಗೆ ಮತ್ತೆ ಆಲೋಚಿಸುವಂತೆ ಮಾಡಿದೆ.

ಈ ಹಿಂದೆ ಅಡಿಕೆ, ತೆಂಗಿನಕಾಯಿ ಕೊಯ್ಲಿನ ಸಂದರ್ಭ ಸಾಂಪ್ರದಾಯಿಕ ಬಿದಿರಿನ ದೋಟಿ ಬಳಸಲಾಗುತ್ತಿತ್ತು. ಕಾಲಕ್ರಮೇಣ ಸುಧಾರಿತ ಅಲ್ಯೂಮಿನಿಯಂ ದೋಟಿ, ಏಣಿ (ಲ್ಯಾಡರ್‌) ಬಂದಿತು. ಇದು ಒಂದೆಡೆ ಪ್ರಯೋಜನಕಾರಿ ಯಾದರೆ ಮುನ್ನೆಚ್ಚರಿಕೆ ಕೊರತೆಯಿಂದಾಗಿ ಅಪಾಯ ಎದುರಾಗುತ್ತಿದೆ. ಮೂರು ವರ್ಷ ಹಿಂದೆ ಬೆಳ್ತಂಗಡಿ ತಾಲೂಕಿನ ಲಾೖಲ ಗ್ರಾಮದಲ್ಲೂ ಅಲ್ಯುಮಿನಿಯಂ ದೋಟಿ ವಿದ್ಯುತ್‌ ತಂತಿಗೆ ತಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದನ್ನು ಸ್ಮರಿಸಬಹುದು.

ಮುನ್ನೆಚ್ಚರಿಕೆ ಕಷ್ಟವೇನಲ್ಲ
ವಿದ್ಯುತ್‌ ತಂತಿಗಳು ಬೇಸಗೆ ಹಾಗೂ ಚಳಿಗಾಲದಲ್ಲಿ ವಿಕಸನ- ಸಂಕುಚನದಿಂದಾಗಿ ಮರಮಟ್ಟುಗಳಿಗೆ ತಾಗಿ ವಿದ್ಯುತ್‌ ಅರ್ಥಿಂಗ್‌ ಆಗುವ ಸಾಧ್ಯತೆ ಇರುತ್ತದೆ. ಸ್ಥಳದ ಮಾಲಕರು ತಮ್ಮ ಜಮೀನಿನಲ್ಲಿ ವಿದ್ಯುತ್‌ ತಂತಿ ಎಳೆಯುವಾಗಲೇ ಎಚ್ಚರಿಕೆ ವಹಿಸಿ ತಂತಿಗೆ ರಬ್ಬರ್‌ ಹೊದಿಕೆಯನ್ನು ಅಳವಡಿಸಿದರೆ ಅನುಕೂಲ. ಏಕೆಂದರೆ ಮೆಸ್ಕಾಂ ಇಲಾಖೆ ಪೈಪ್‌ ಅಳವಡಿಸಿ ಕೊಡುವುದಿಲ್ಲ. ಅದೇನಿದ್ದರೂ ಕೃಷಿಕರ ಹೊರೆ ಎಂಬ ವಾದವೂ ಕೇಳಬರುತ್ತಿದೆ. ಒಂದುವೇಳೆ ಕೃಷಿಕರು ಅಥವಾ ವಿದ್ಯುತ್‌ ಬಳಕೆದಾರರು ನಿಗದಿತ ಮೊತ್ತ ನೀಡಿದಲ್ಲಿ ಇಲಾಖೆ ಸಹಕರಿಸುತ್ತದೆ. ಹಾಗಾಗಿ ಅಡಿಕೆ, ತೆಂಗಿನ ಮರ ಅಥವಾ ಇತರ ಮರಮಟ್ಟುಗಳಿಗೆ ತಂತಿ ತಾಗಿ ವಿದ್ಯುತ್‌ ಪ್ರವಹಿಸಿ ವ್ಯಕ್ತಿಗಳು ಮೃತಪಟ್ಟಲ್ಲಿ ಮೆಸ್ಕಾಂ ಹೊಣೆ ಹೊರುವುದಿಲ್ಲ, ಕೆಲವೊಮ್ಮೆ ಮಾನವೀಯ ನೆಲೆಯಲ್ಲಿ ಪರಿಹಾರ ಒದಗಿಸುತ್ತದೆ ಎನ್ನುವುದು ಆಧಿಕಾರಿಗಳ ಅಭಿಪ್ರಾಯ.

ಅತ್ಯಂತ ಕಡಿಮೆ ತೂಕ ಎನ್ನುವುದೇ ಅಲ್ಯೂಮಿನಿಯಂ ದೋಟಿಯ ಹೆಗ್ಗಳಿಕೆ. 40 ಅಡಿ ಉದ್ದದ ಬೇರೆ ದೋಟಿಗಳು 20 ಕೆ.ಜಿ. ತೂಕವಿದ್ದರೆ ಅಲ್ಯೂಮಿನಿಯಂ ದೋಟಿ 60 ಅಡಿ ಉದ್ದವಿದ್ದರೂ 4 ಕೆ.ಜಿ. ತೂಕವಷ್ಟೇ ಇದೆ. ಕೃಷಿಕನೇ ಸುಲಭವಾಗಿ ಬಳಸಬಹುದಾದ್ದರಿಂದ ಕಾರ್ಮಿಕರ ಕೊರತೆಯನ್ನು ಇದು ನೀಗಿಸುತ್ತದೆ. ಆದರೆ ಬಳಕೆಯಲ್ಲಿ ಪರಿಣತಿ ಅಗತ್ಯ. ಕೆಲವು ಕಂಪೆನಿಗಳು ದೋಟಿ ವಿನ್ಯಾಸಗೊಳಿಸುವಾಗಲೇ ರಬ್ಬರ್‌ ಹ್ಯಾಂಡಲ್‌ ನೀಡುತ್ತವೆ. ಹೆಚ್ಚಿನವು ರಬ್ಬರ್‌ ಹ್ಯಾಂಡಲ್‌ ಹೊರತಾಗಿ ಮಾರುಕಟ್ಟೆಗೆ ಬರುತ್ತವೆ. ಮುನ್ನೆಚ್ಚರಿಕೆ ತೀರಾ ಆನಿವಾರ್ಯ.

ಪರ್ಯಾಯ ಅನ್ವೇಷಣೆ ಅಗತ್ಯ
ಸದ್ಯ ಕಾರ್ಬನ್‌ ಫೈಬರ್‌ಯುಕ್ತ ದೋಟಿಯೂ ಲಭ್ಯವಿದೆ. ಅದು ಅಲ್ಯೂಮಿನಿಯಂ ದೋಟಿಗಿಂತ ಹಗುರವಾಗಿದ್ದರೂ ಅದರಲ್ಲೂ ವಿದ್ಯುತ್‌ ಪ್ರವಹಿಸುತ್ತದೆ. ನೆಲ್ಯಾಡಿಯ ತಯಾರಕರೊಬ್ಬರು ಫೈಬರ್‌ದೋಟಿಯನ್ನು ಅನ್ವೇಷಿಸಿದ್ದು, 20, 30 ಅಡಿಗಿಂತ ಹೆಚ್ಚು ಉದ್ದವಿದ್ದರೆ ಬಾಗುವ ಕಾರಣ ದೊಡ್ಡ ಮರಗಳಿಂದ ಕೊಯ್ಲು ಕಷ್ಟ. ಈ ಹಿನ್ನೆಲಯೆಲ್ಲಿ ಪರ್ಯಾಯ ಅನ್ವೇಷಣೆ ಅಗತ್ಯ ಎಂಬುದು ಕೃಷಿಕರ ಅಭಿಪ್ರಾಯ.

01 ಬಿದಿರು ದೋಟಿಯಲ್ಲೂ ಸಮಸ್ಯೆ ಇಲ್ಲದಿಲ್ಲ ; ತೇವಾಂಶ ವಿದ್ದ ದೋಟಿ ವಿದ್ಯುತ್‌ ತಂತಿಗೆ ತಾಗಿದರೆ ಸಮಸ್ಯೆ.
02 ಕಾಲಿಗೆ ಫೈಬರ್‌ ಆಥವಾ ಪ್ಲಾಸ್ಟಿಕ್‌ ಮಾದರಿ, ಶೂ,ಚಪ್ಪಲಿ ಹಾಗೂ ಕೈಗೆ ಗ್ಲೌಸ್‌ ಕಡ್ಡಾಯವಾಗಿ ಬಳಸಬೇಕು.
03 ದೋಟಿಗೆ ಪರ್ಯಾಯವಾಗಿ ಇತರೆ ವಿಧಾನಗಳ ಸಂಶೋಧನೆ ನಡೆಯಬೇಕು.

ಅಲ್ಯೂಮಿನಿಯಂ ದೋಟಿ ಬಳಕೆಗೆ ಮುನ್ನ ತೋಟದಲ್ಲಿರುವ ವಿದ್ಯುತ್‌ ತಂತಿಗಳಿಗೆ ಡ್ರಿಪ್‌ ಪೈಪ್‌ ಅಳವಡಿಸುವುದೇ ಸೂಕ್ತ. ಎಲ್ಲ ರೀತಿಯ ಸಮಸ್ಯೆಗಳಿಗೂ ಇದು ಸುಲಭ ಪರಿಹಾರ. ಹೆಚ್ಚೇನು ಖರ್ಚು ಬರುವುದಿಲ್ಲ.
– ಧನಂಜಯ ಭಿಡೆ, ಕೃಷಿಕರು, ಉಜಿರೆ

ಟಾಪ್ ನ್ಯೂಸ್

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

CAR-D

Sullia: ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್‌ ಢಿಕ್ಕಿ

Belthangady ಪಿಕಪ್‌ ಹಿಮ್ಮುಖವಾಗಿ ಚಲಿಸಿ ವ್ಯಕ್ತಿ ಸಾವು

Belthangady ಪಿಕಪ್‌ ಹಿಮ್ಮುಖವಾಗಿ ಚಲಿಸಿ ವ್ಯಕ್ತಿ ಸಾವು

Sullia ವಿದ್ಯುತ್‌ ಲೈನ್‌ಗೆ ಬಿದ್ದ ಮರ; ಹಾನಿ,ವಿದ್ಯುತ್‌ ವ್ಯತ್ಯಯ

Sullia ವಿದ್ಯುತ್‌ ಲೈನ್‌ಗೆ ಬಿದ್ದ ಮರ; ಹಾನಿ,ವಿದ್ಯುತ್‌ ವ್ಯತ್ಯಯ

Uppinangady ದ್ವಿಚಕ್ರ ವಾಹನಕ್ಕೆ ಟ್ಯಾಂಕರ್‌ ಢಿಕ್ಕಿ; ಮಗು ಸಹಿತ ದಂಪತಿಗೆ ಗಾಯ

Uppinangady ದ್ವಿಚಕ್ರ ವಾಹನಕ್ಕೆ ಟ್ಯಾಂಕರ್‌ ಢಿಕ್ಕಿ; ಮಗು ಸಹಿತ ದಂಪತಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

19-rcb

RCB: ಈ  ಸಲ ಕಪ್‌ ನಮ್ಮದು…

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.