ರೈಲು ಹಳಿ ಕಾಯುವ ಕಾರ್ಮಿಕರಿಗೆ ಆಗಂತುಕರ ಆತಂಕ
ಶಿರಾಡಿ ಘಾಟಿ ಪ್ರದೇಶದಲ್ಲಿ ಎಎನ್ಎಫ್ ಶೋಧ
Team Udayavani, Jul 27, 2019, 5:23 AM IST
ಸುಬ್ರಹ್ಮಣ್ಯ: ಬೆಂಗಳೂರು- ಮಂಗಳೂರು ರೈಲು ಮಾರ್ಗದ ಶಿರಾಡಿ ಘಾಟಿಯ ಎಡಕುಮೇರಿ ಭಾಗದಲ್ಲಿ ಪ್ರಾಕೃತಿಕ ವಿಕೋಪಗಳಿಂದ ರೈಲ್ವೇ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿರುವ ಬೆನ್ನಲ್ಲೇ ಈ ಭಾಗದಲ್ಲಿ ಆಗಂತುಕರ ಭಯ ಕಾಡಲಾರಂಭಿಸಿದೆ.
ಎಡಕುಮೇರಿ ಸುರಂಗ ಮಾರ್ಗದ ಸಮೀಪ ಕರ್ತವ್ಯ ನಿರತ ರೈಲ್ವೇ ಕಾರ್ಮಿಕ ರಾಜು ಎಂಬವರಿಗೆ ಅಪರಿಚಿತರಿಬ್ಬರು ಬೆದರಿಕೆ ಹಾಕಿದ ಘಟನೆ ಜು.22ರಂದು ರಾತ್ರಿ ನಡೆದಿದೆ. ಘಟನೆ ಬಳಿಕ ಈ ಭಾಗದ ಅರಣ್ಯಗಳಲ್ಲಿ ಎಎನ್ಎಫ್ ಶೋಧ ಕಾರ್ಯಾಚರಣೆ ಆರಂಭಿಸಿದೆ.
ಈ ಅಪರಿಚಿತರು ನಕ್ಸಲರು ಎನ್ನುವ ಶಂಕೆ ವ್ಯಕ್ತಗೊಂಡಿದ್ದು, ಪಶ್ಚಿಮ ಘಟ್ಟ ಭಾಗದಲ್ಲಿ ನಕ್ಸಲರು ತಮ್ಮ ಚಟುವಟಿಕೆ ಆರಂಭಿಸಿದ್ದಾರೆಯೇ ಎನ್ನುವ ಅನುಮಾನ ಹುಟ್ಟಿಕೊಂಡಿದೆ.
ಪಿಸ್ತೂಲು ಇತ್ತು?
ಬೆದರಿಕೆ ಒಡ್ಡಿದ ಇಬ್ಬರು ಅಪರಿಚಿತರ ಬಳಿ ಪಿಸ್ತೂಲು ಇತ್ತು ಎನ್ನುವುದನ್ನು ಸಿಬಂದಿ ರಾಜು ಪೊಲೀಸರ ಗಮನಕ್ಕೆ ತಂದಿದ್ದಾನೆ. ಅಪರಿಚಿತ ವ್ಯಕ್ತಿಗಳಿಬ್ಬರು ಹಿಂದಿಯಲ್ಲಿ ಸಂವಹನ ನಡೆಸುತ್ತಿದ್ದರು ಎನ್ನಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಹಾಸನ, ಸಕಲೇಶಪುರ ಪೊಲೀಸರು, ಅರಣ್ಯ ಇಲಾಖೆ ಸಿಬಂದಿ ಮತ್ತು ರೈಲ್ವೇ ಇಲಾಖೆ ಸಿಬಂದಿ ಅಪರಿಚಿತರ ಶೋಧಕ್ಕೆ ಮುಂದಾಗಿದ್ದಾರೆ.
ಈ ಹಿಂದೆಯೂ ಈ ಭಾಗದಲ್ಲಿ ನಕ್ಸಲ್ ಚಟುವಟಿಕೆ ಕಂಡುಬಂದಿದ್ದರಿಂದ ಬೆಳ್ತಂಗಡಿ ಬೆಟಾಲಿಯನ್ನ 24 ಮಂದಿ ಯೋಧರ ಎರಡು ತಂಡ ಸಂಪಾಜೆ, ಬಿಸಿಲೆ, ಸುಬ್ರಹ್ಮಣ್ಯ, ನಾಗರಕೊಲ್ಲಿ ಭಾಗದಲ್ಲಿ ಶೋಧ ಆರಂಭಿಸಿದೆ. ಶುಕ್ರವಾರ ಬಿಸಿಲೆ, ಭಾಗ್ಯ, ಎಡಕುಮೇರಿ, ಕಾಗಿನೆರಿಕಟ್ಟೆ, ಮಣಿಬಂಡ ಮೊದಲಾದೆಡೆ ಶೋಧಿಸಲಾಗಿದೆ.
ಗಸ್ತು ನಿರತ ರೈಲ್ವೇ ಸಿಬಂದಿಗೆ ಬೆದಿಕೆ ಒಡ್ಡಿದ ಅಪರಿಚಿತರು ನಕ್ಸಲರೇ ಅಥವಾ ಬೇಟೆಗಾರರೇ, ಚಾರಣಿಗರೇ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ರೈಲ್ವೇ ಕಾರ್ಮಿಕ ರಾಜು ನೀಡಿದ ಮಾಹಿತಿ ಆಧರಿಸಿ ತನಿಖೆ ನಡೆಯುತ್ತಿದೆ. ಮುನ್ನೆಚ್ಚರಿಕೆ ಸಲುವಾಗಿ ಎರಡೂ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ