ಬಾಳೂರು ಅರಣ್ಯಕ್ಕೆ ಹತ್ತಿದ ಬೆಂಕಿ ಶಮನ: ಕಾರ್ಯಾಚರಣೆ ಸಫಲ
Team Udayavani, Mar 27, 2023, 6:15 AM IST
ಬೆಳ್ತಂಗಡಿ: ಬಾಳೂರು ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಬೆಂಕಿಯು ಬೆಳ್ತಂಗಡಿ ಅರಣ್ಯ ಇಲಾಖೆಯ ಅರಣ್ಯದ ಕಡೆ ಹಬ್ಬದಂತೆ ಐದಾರು ದಿನದಿಂದ ನಡೆಯುತ್ತಿದ್ದ ಕಾರ್ಯಾಚರಣೆ ಸಫಲಗೊಂಡಿದೆ.
ಮಧುಗುಂಡಿ ಹಾಗೂ ಬಂಡಾಜೆ ಫಾಲ್ಸ್ ಮಧ್ಯಭಾಗದ ಬೆಂಕಿಯು ಆರತೊಡಗಿದೆ. ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಸಹಕಾರದಿಂದ ಬೆಂಕಿ ಶಾಂತವಾಗಿದೆ. ಬೆಂಕಿ ಹರಡದಂತೆ ಬೆಂಕಿರೇಖೆ ನಿರ್ಮಿಸಿ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಆದರೆ ಮರದ ಪೊಟರೆಗಳಲ್ಲಿ ಬೂದಿಯೊಳಗಿರುವ ಬೆಂಕಿ ಬಿಸಿಲಿಗೆ ಮತ್ತೆ ಏರಿಕೆಯಾಗುತ್ತದೋ ಎಂಬ ಆತಂಕವಿದೆ.
ಈ ಮಧ್ಯೆ ಮುಂಡಾಜೆ ಸಮೀಪ ಹೆದ್ದಾರಿ ಬದಿ ವಿದ್ಯುತ್ ಕಂಬಗಳಿಗೆ ಸುತ್ತಿರುವ ಬಳ್ಳಿಗಳಿಂದ ವಿದ್ಯುತ್ ಪ್ರವಹಿಸಿ ಬೆಂಕಿ ಉಂಟಾಗಿತ್ತು. ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ. ವಿದ್ಯುತ್ ಕಂಬಗಳಿಗೆ ಹಬ್ಬಿದ ಬಳ್ಳಿಗಳನ್ನು ತೆರವುಗೊಳಿಸದ ಪರಿಣಾಮ ವಿದ್ಯುತ್ ಸ್ಪರ್ಶಿಸಿ ಬೆಂಕಿ ಹೆಚ್ಚಾಗಲು ಕಾರಣವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?