ಮಂಜೂರಾದ 25ರಲ್ಲಿ 8 ಹುದ್ದೆಗಳು ಭರ್ತಿ; ಶೇ. 68 ಹುದ್ದೆಗಳು ಖಾಲಿ
ಬಂಟ್ವಾಳ ತೋಟಗಾರಿಕೆ ಇಲಾಖೆ: ಸವಾಲಿನಲ್ಲೇ ಕಾರ್ಯ ನಿರ್ವಹಿಸಬೇಕಾದ ಒತ್ತಡ
Team Udayavani, Aug 26, 2020, 4:10 AM IST
ಬಿ.ಸಿ. ರೋಡ್ನಲ್ಲಿರುವ ಹಿರಿಯ ತೋಟಗಾರಿಕ ನಿರ್ದೇಶಕರ ಕಚೇರಿ.
ಬಂಟ್ವಾಳ: ಕರಾವಳಿ ಭಾಗ ಅಡಿಕೆ ಸಹಿತ ತೋಟಗಾರಿಕೆ ಬೆಳೆಗಳಿಂದಲೇ ಖ್ಯಾತಿ ಪಡೆದಿದ್ದು, ಬಂಟ್ವಾಳ ತಾಲೂಕಿನಲ್ಲೂ ಹೆಚ್ಚಾಗಿ ರೈತರು ಅಡಿಕೆ ಬೆಳೆಯನ್ನೇ ನಂಬಿದ್ದಾರೆ. ತೋಟಗಾರಿಕೆ ಇಲಾಖೆಯ ಸೌಲಭ್ಯಗಳ ಮಾಹಿತಿ, ಬೆಳೆಗಾರರ ನಷ್ಟ ಪರಿಹಾರಕ್ಕೆ ಸರಕಾರಕ್ಕೆ ವರದಿ ನೀಡುವ ತಾಲೂಕಿನ ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಹುದ್ದೆಗಳೇ ಹೆಚ್ಚಿವೆ. ತಾಲೂಕಿನ ತೋಟಗಾರಿಕೆ ಇಲಾಖೆಗೆ ಮಂಜೂರಾದ 25 ಹುದ್ದೆಗಳಲ್ಲಿ 8 ಮಾತ್ರ ಭರ್ತಿ ಇದ್ದು, ಶೇ. 68 ಹುದ್ದೆಗಳು ಖಾಲಿ ಇವೆ.
ತಾಲೂಕು ಕೇಂದ್ರ ಬಿ.ಸಿ. ರೋಡ್ನಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಸಹಿತ ತುಂಬೆ ಹಾಗೂ ವಿಟ್ಲದಲ್ಲಿ ಸಸ್ಯಕ್ಷೇತ್ರಗಳಿದ್ದು, ಒಟ್ಟು ಮೂರು ಕಡೆಗಳಲ್ಲಿ ತೋಟಗಾರಿಕೆ ಇಲಾಖೆ ಕಾರ್ಯ ಕ್ಷೇತ್ರವನ್ನು ಹೊಂದಿದೆ. ಹೀಗಾಗಿ ಮಂಜೂರಾದ 25 ಹುದ್ದೆಗಳಲ್ಲಿ 17 ಹುದ್ದೆ ಗಳು ಖಾಲಿ ಇದ್ದಾಗ ಸವಾಲಿನಲ್ಲೇ ಕಾರ್ಯ ನಿರ್ವಹಿಸಬೇಕಾದ ಒತ್ತಡ ಇರುತ್ತದೆ.
ಯಾವ ಹುದ್ದೆಗಳು ಭರ್ತಿ-ಖಾಲಿ ?
ತಾಲೂಕಿನ ತೋಟಗಾರಿಕೆ ಇಲಾಖೆಯ ಮುಖ್ಯಸ್ಥರಾಗಿರುವ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಒಂದು ಹುದ್ದೆ ಭರ್ತಿಯಾಗಿದ್ದು, ಮಂಜೂರಾಗಿರುವ 2 ಸಹಾಯಕ ತೋಟಗಾರಿಕೆ ನಿರ್ದೇಶಕರ ಹುದ್ದೆಗಳಲ್ಲಿ 2 ಕೂಡ ಖಾಲಿ ಇವೆ. ಸಹಾಯಕ ತೋಟಗಾರಿಕೆ ಅಧಿಕಾರಿ 5 ಹುದ್ದೆಗಳಲ್ಲಿ 2 ಭರ್ತಿಯಾಗಿದ್ದು, ಮೂರು ಹುದ್ದೆಗಳು ಖಾಲಿ ಇವೆ. ತೋಟಗಾರಿಕೆ ಸಹಾಯಕರು 4 ಹುದ್ದೆ ಗಳಲ್ಲಿ 2 ಭರ್ತಿ ಇದ್ದು, 2 ಖಾಲಿ ಇವೆ. ತೋಟಗಾರರು ಒಟ್ಟು 12 ಹುದ್ದೆಗಳಲ್ಲಿ 2 ಮಾತ್ರ ಭರ್ತಿ ಇದ್ದು, 10 ಹುದ್ದೆಗಳು ಖಾಲಿ ಇವೆ. ದ್ವಿತೀಯ ದರ್ಜೆ ಸಹಾಯಕ 1 ಹುದ್ದೆಯು ಭರ್ತಿ ಇದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎರಡು ಕಡೆಗಳಲ್ಲಿ ಕಾರ್ಯಕ್ಷೇತ್ರ
ತಾಲೂಕು ತೋಟಗಾರಿಕೆ ಇಲಾಖೆಯ ತುಂಬೆ ಕಾರ್ಯಕ್ಷೇತ್ರದಲ್ಲಿ ಪ್ರಯೋ ಗಾಲಯ ಸಹಿತ ಅಡಿಕೆ, ಕಾಳುಮೆಣಸು, ತೆಂಗು ಮೊದಲಾದ ಹತ್ತಾರು ಬಗೆಯ ಗಿಡಗಳನ್ನು ಸಿದ್ಧಪಡಿಸುವ ಕಾರ್ಯ ಮಾಡಲಾಗುತ್ತದೆ. ಹೀಗಾಗಿ ತುಂಬೆಯಲ್ಲಿ ಇಬ್ಬರು ಸಹಾಯಕ ತೋಟಗಾರಿಕೆ ಅಧಿಕಾರಿ, ತೋಟಗಾರಿಕೆ ಸಹಾಯಕರು ಹಾಗೂ ತೋಟಗಾರರು ಅಗತ್ಯವಿದ್ದಾರೆ.
ವಿಟ್ಲದಲ್ಲಿ ತೋಟಗಾರಿಕ ಸಹಾಯ ಕರು, ತೋಟಗಾರರ ಹುದ್ದೆಗಳು ಕಾರ್ಯ ನಿರ್ವಹಿಸಬೇಕಿದೆ. ಪ್ರಸ್ತುತ ಇರುವ ಹುದ್ದೆಗಳಲ್ಲಿ ಕೆಲಸವನ್ನು ನಿಭಾಯಿ ಸಲಾಗುತ್ತಿದ್ದು, ತೋಟಗಾರರ ಹುದ್ದೆ ಗಳು ಹೆಚ್ಚು ಖಾಲಿ ಇರುವುದರಿಂದ ಇಬ್ಬರನ್ನು ಹೊರಗುತ್ತಿಗೆಯಲ್ಲಿ ತೆಗೆದುಕೊಳ್ಳಲಾಗಿದೆ. ಅಂದರೆ ಈ ಹುದ್ದೆಗೆ ಮಾತ್ರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಬಹುದಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಹೊಂದಾಣಿಕೆಯಿಂದ ಕರ್ತವ್ಯ ನಿರ್ವಹಣೆ
ಪ್ರಸ್ತುತ ಇಲಾಖೆಯಲ್ಲಿ ಬಂಟ್ವಾಳ ತಾಲೂಕಿಗೆ ಮಂಜೂರಾಗಿರುವ 25 ಹುದ್ದೆಗಳಲ್ಲಿ 8 ಭರ್ತಿ ಇದ್ದು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಸಹಿತ 2 ಸಸ್ಯ ಕ್ಷೇತ್ರಗಳ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಫೀಲ್ಡ್ ವರ್ಕ್ ಇರುವ ಕಾರಣ ಹೊಂದಾಣಿಕೆ ಮಾಡಿಕೊಂಡು ಕೃಷಿಕರಿಗೆ ತೊಂದರೆ ಯಾಗದಂತೆ ಕೆಲಸ ಮಾಡ ಲಾಗುತ್ತಿದೆ.
-ಪ್ರದೀಪ್ ಡಿ’ಸೋಜಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಬಂಟ್ವಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ